ಅಜ್ಜಂಪುರ: ಅಫ್ ರೇಟ್ ಚೀಫ್ ರೇಟ್ ಎಂದು ಜನರನ್ನು ನಂಬಿಸಿ ವಂಚನೆ ಮಾಡುವವರು ಅಂಗಡಿ ತೆರೆದು ಕುಳುತ್ತಿದ್ದಾರೆ ಎಂದು ಹೇಳುತ್ತಲೇ ಖರೀದಿಗೆ ಮುಂದಾಗಿರುವುದು ತಿಳಿದುಬಂದಿದೆ.
ಅಜ್ಜಂಪುರದ ಶಿವಾನಂದ ಆಶ್ರಮದ ಮುಂಭಾಗದ ರಸ್ತೆಯಲ್ಲಿ ಎಸ್.ಆರ್.ಎಂಬ ಅಂಗಡಿ ಪ್ರಾರಂಭಿಸಿ ಮುಂಗಡವಾಗಿ ಹಣ ಪಡೆದು ಚೀಟಿ ನೀಡಿ ಜನರನ್ನು ಗುಂಡಿಗೆ ಬೀಳಿಸುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಇದೇ ರೀತಿಯಲ್ಲಿ ಹೊಸದುರ್ಗದಲ್ಲಿ ಅಂಗಡಿ ತೆರೆದು ಜನರಿಗೆ ಎಳ್ಳು ನೀರು ಬಿಟ್ಟು ರಾತ್ರೋರಾತ್ರಿ ಹಣ ದೋಚಿಕೊಂಡು ಓಡಿ ಹೋಗಿರುವ ಘಟನೆ ಕಣ್ಣು ಮುಂದಿರುವಾಗ ಜನ ಮರೂಳೋ ಜಾತ್ರೆ ಮರೂಳೋ ಎಂಬ ಗಾದೆ ನೆನಪಾಗುತ್ತದೆ.

ಎಸ್.ಆರ್.ಟ್ರೇಡರ್ಸ್ ಗೆ ಹಣ ಕಟ್ಟಿ ಕೈ,ಕೈ ಹಿಸುಕಿಕೊಳ್ಳುತ್ತಿರುವ ಜನರ ಮಧ್ಯೆ ಪೊಲೀಸರು ಆತನ ಜಾಲ ಶೋಧಿಸ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಹದಿನೈದು ದಿನಗಳಿಂದ ವಂಚನೆ ಮಾಡುತ್ತಿದ್ದ ಅಸಾಮಿ 150 ಕ್ಕೂ ಹೆಚ್ಚು ಜನರಿಗೆ ಟೋಪಿ ಹಾಕಿ ಲಕ್ಷಂತರ ಹಣ ದೋಚಿದ್ದಾರೆ ಎನ್ನಲಾಗಿದೆ.
ಕಳೆದ ಎರಡು ದಿನದ ಹಿಂದೆ ರಾತ್ರೋರಾತ್ರಿ ಪರಾರಿಯಾಗಿರುವ ವಂಚಕರಿಗೆ ಮೊಬೈಲ್ ಕರೆ ಮಾಡಿದರೆ ಸದ್ಯಕ್ಕೆ ಸ್ವಿಚ್ ಅಫ್ ಎಂಬ ಮೆಸೇಜ್ ಬರುತ್ತಿದ್ದು ಪೋಲಿಸರು ಪತ್ತೆ ಹಚ್ಚಲು ಮುಂದಾಗಿದ್ದಾರೆ.ಕೊಟ್ಟವ ಕೋಡಂಗಿ ಇಸುಕೊಂಡವ ವೀರಭದ್ರ ಎನ್ನ ಬೇಕಾಗಿದೆ.
ಜನ ಮತ್ತೆ,ಮತ್ತೆ ಇಂತಹ ಚೀಫ್ ಗಿರಾಕಿಗಳ ಕೈಗೆ ಸಿಕ್ಕಿ ಕೊಳ್ಳುವುದು ನಡೆದಿದೆ ನಡೆಯುತ್ತಲೇ ಇವೆ.ಜನ ಎಚ್ಚರಿಕೆವಹಿಸುವುದರ ಜೊತೆಗೆ ಪೊಲೀಸರು ಗಮನ ಹರಿಸಿದರೆ ಅನಾಹುತ ತಪ್ಪಿಸಬಹುದು.
Off-rate-Chief Rate Ajjampura is a network of fraudsters
Leave a comment