ಚಿಕ್ಕಮಗಳೂರು: ರಾಜ್ಯದ ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಕಳೆದ ಒಂದುವರೆ ದಶಕದಿಂದ ಜನರಿಗೆ ಮುಖ್ಯವಾಗಿ ಪೊಲೀಸ್ ರಿಗೆ ತಲೆನೋವು ತಂದಿತ್ತು.
ಪೊಲೀಸ್ ಮತ್ತು ನಕ್ಸಲ್ ರ ಮಧ್ಯೆ ಅಗಾಗ ಗುಂಡಿನ ದಾಳಿ ನಡೆದು ಹಲವರು ಹತರಾದ್ದು ಉಂಟು ಕಳೆದ ಐದು ವರ್ಷಗಳ ಹಿಂದೆ ಕೆಲವು ನಕ್ಸಲ್ ರು ಮುಖ್ಯವಾಹಿನಿ ಬಂದಿದ್ದರು.
ಎರಡು ತಿಂಗಳ ಹಿಂದೆ ವಿಕ್ರಮ್ ಎಂಬ ನಕ್ಸಲ್ ಹತ್ಯೆಯಾಗಿತ್ತು ಇದರ ಮಧ್ಯೆ ಮುಂಡಗಾರು ಲತಾ ಮತ್ತಿತರರು ಕಳೆದ ತಿಂಗಳು ಮುಖ್ಯಮಂತ್ರಿ ಮುಂದೆ ಮುಖ್ಯವಾಹಿನಿಗೆ ಬಂದಿದ್ದರು.
ಬಹುತೇಕರು ಬಂದು ನಕ್ಸಲ್ ಚಟುವಟಿಕೆ ಸ್ಥಗಿತಗೊಂಡಂತೆ ಎನ್ನುವಂತಿದ್ದರು ನಕ್ಸಲ್ ಕೋಟೆ ತೋಟ ರವೀಂದ್ರ ಅಲಿಯಾಸ್ ಪ್ರಸಾದ್ ನ ಸುಳಿವು ಇರಲಿಲ್ಲ. ಹೀಗಾಗಿ ಈತ ಬೇರೆ ರಾಜ್ಯದಲ್ಲಿ ಇರಬಹುದು ಅಥವಾ ಬದುಕಿರುವ ಅನುಮಾನವಿತ್ತು.
ರವೀಂದ್ರ ಮುಖ್ಯವಾಹಿನಿ ಗೆ ಬರುವ ಕಾಲ ಸನ್ನಿತವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.ಶಾಂತಿಗಾಗಿ ನಾಗರೀಕ ವೇದಿಕೆಯವರ ಸತತ ಪ್ರಯತ್ನದ ಫಲವಾಗಿ ರವೀಂದ್ರ ವಾರದೊಳಗೆ ಕಾಡಿನಿಂದ ನಾಡಿಗೆ ಬರುವುದು ಖಚಿತ.
ರವೀಂದ್ರ ಶೃಂಗೇರಿ ಸಮೀಪದ ಕಿಗ್ಗ ಬಳಿಯಿರುವ ಕೋಟೆ ತೋಟದ ಹೊಲಗರ ಬಯಲ ಅದಿವಾಸಿ ಈತ ನಕ್ಸಲ್ ಚಟುವಟಿಕೆಗೆ ಬೇಕಾದ ಪಾದರಸದಂತ ವ್ಯಕ್ತಿತ್ವ ಹೊಂದಿದ್ದು ಮಲೆನಾಡಿನ ಇಂಚು,ಇಂಚು ಮಾಹಿತಿ ಕಣಜ ಎನ್ನಲಾಗುತ್ತದೆ.
ಪ್ರಾಣಿ ಮತ್ತು ಪಕ್ಷಿಗಳ ಬಗ್ಗೆಯು ವ್ಯಾಯಾಮ ಮತ್ತು ಓಡುವುದರಲ್ಲಿ ಎಕ್ಸ್ ಫರ್ಟ ಇದ್ದವನು ಮತ್ತೆ ಏನಾದರೂ ನಕ್ಸಲ್ ತಂಡ ಕಟ್ಟಬಹುದು ಎಂಬ ಅದಾಜು ಮಾಡುವ ಸಮಯದಲ್ಲಿ ಮುಖ್ಯವಾಹಿನಿಗೆ ಬಂದರೆ ಸಂಪೂರ್ಣವಾಗಿ ನಕ್ಸಲ್ ಚಟುವಟಿಕೆ ಸ್ಥಗಿತಗೊಂಡಂತೆ ಆಗುತ್ತದೆ.
Naxal Ravindra returns from the forest to the country within a week
Leave a comment