Home namma chikmagalur ಜಾನಪದ ಸಿರಿ ಲಕ್ಷ್ಮೀದೇವಮ್ಮಗೆ ಸಿಗಲಿದೆಯಾ ರಾಜ್ಯೋತ್ಸವ ಪ್ರಶಸ್ತಿ
namma chikmagalur

ಜಾನಪದ ಸಿರಿ ಲಕ್ಷ್ಮೀದೇವಮ್ಮಗೆ ಸಿಗಲಿದೆಯಾ ರಾಜ್ಯೋತ್ಸವ ಪ್ರಶಸ್ತಿ

Share
Share

ಚಿಕ್ಕಮಗಳೂರು : ಜಾನಪದ ಕ್ಷೇತ್ರದಲ್ಲಿ ಮುಗುಳಿ ಲಕ್ಮೀದೇವಮ್ಮನವರ ಹೆಸರು ನಾಡಿನಲ್ಲಿ ಚಿರಪರಿಚಿತ. ಲಕ್ಷೀದೇವಮ್ಮನವರಿಗೆ ಈಗ ಎಪ್ಪತ್ತೈದು ವರ್ಷಗಳ ಸನಿಹ ಹಾಡಲು ನಿಂತರೆ ಇಪ್ಪತೈದರ ಹರೆಯದಂತ ಧ್ವನಿ ಯಾರಪ್ಪ ಇವರು ಎಂದು ಕಿವಿಯಾಲಿಸುವ ಜನ.ಇಳಿ ವಯಸ್ಸಿನಲ್ಲೂ ಹರೆಯದವರಂತೆ ಕಾರ್ಯಗಳಲ್ಲಿ ಹಾಡುತ್ತಾ ಇದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಮುಗುಳಿ ಎಂಬ ಗ್ರಾಮದ ಹಿಂದುಳಿದ ಕುಟುಂಬದಲ್ಲಿ ತಂದೆ,ತಾಯಿ,ಅಣ್ಣನ ಜೊತೆಗೆ ಬಾಲ್ಯದಲ್ಲಿ ಭಜನೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಹಾಡಿನ ಜಾಡು ಹಿಡಿದವರು.
ಭಜನೆ,ಕೋಲಾಟ,ಲಾವಣಿ,ಸೋಬಾನೆ ಗೀತೆಗಳು,ಬಿಸೇಕಲ್ಲು ಹಾಡಿನ ಜೊತೆಗೆ ಜಾನಪದ ಗೀತೆಗಳನ್ನು ಹಾಡಿದ್ದಾರೆ ಹಾಡುತ್ತಿದ್ದಾರೆ.

1981 ರಲ್ಲಿ ಮುಗಳಿಯಲ್ಲಿ ಅರುಣೋದಯ ಯುವತಿ ಮಂಡಳಿ ಸ್ಥಾಪಿಸಿ ಅಕ್ಷರ ಅಭ್ಯಾಸ ಮತ್ತು ಹಾಡುಗಾರಿಕೆ ಕಲಿಸಿರುವ ಇವರಿಗೆ ಜಾನಪದಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ನಾಡಿನ ಸಾವಿರಾರು ಪ್ರಶಸ್ತಿ ಮತ್ತು ಗೌರವ ದೊರೆತಿವೆ.
ಜಿಲ್ಲೆಯಲ್ಲಿ ಪ್ರಾರಂಭವಾದ ಅಕ್ಷರ ಧಾರ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಕೇರಳ ಮತ್ತು ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ತರಭೇತಿಯನ್ನು ನೀಡಿದ್ದಾರೆ ಜಾನಪದ ಅಕಾಡೆಮಿ ಸದಸ್ಯರಾಗಿದ್ದ ಈ ಹಿರಿಯ ಜೀವಕ್ಕೆ ನಾಡಿನ ರಾಜ್ಯೋತ್ಸವ ಪ್ರಶಸ್ತಿ ಸಿಗಲಿಲ್ಲ ಎಂಬ ಕೊರಗಿದೆ.ಹಳ್ಳಿಯಿಂದ ದಿಲ್ಲಿವರೆಗೆ ಕಲೆಯಲ್ಲಿ ತೊಡಗಿಸಿಕೊಂಡ ಲಕ್ಮೀದೇವಮ್ಮನವರಿಗೆ ರಾಜ್ಯ ಸರ್ಕಾರ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಜ್ಞಾನವಿದ್ದರೆ ಸ್ಪಂದಿಸಿ ಇವರ ಆಯ್ಕೆ ಮಾಡಿದರೆ ಅರ್ಹರನ್ನು ಗುರುತಿಸಿದ ಸಾರ್ಥಕತೆಗೆ ಭಾಜನರಾಗುತ್ತಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...