Home ಶಾಸಕ ಕೆ.ಎಸ್. ಆನಂದ್ ಆಪ್ತ ಸಹಾಯಕನಿಂದ ಶಿಷ್ಟಾಚಾರ ಉಲ್ಲಂಘನೆ
HomeKadurLatest Newsnamma chikmagalur

ಶಾಸಕ ಕೆ.ಎಸ್. ಆನಂದ್ ಆಪ್ತ ಸಹಾಯಕನಿಂದ ಶಿಷ್ಟಾಚಾರ ಉಲ್ಲಂಘನೆ

Share
Share

ಕಡೂರು: ತಾಲ್ಲೂಕು ಕಚೇರಿಯಲ್ಲಿ ನಡೆದ ಸರ್ಕಾರದ ಪ್ರಮುಖ ಸಭೆಯು ಈಗ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ತಾಲ್ಲೂಕಿನ ಅಭಿವೃದ್ಧಿ ಹಾಗೂ ಕಂದಾಯ ಗ್ರಾಮಗಳ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲು ತಹಶೀಲ್ದಾರ್ ಅವರು ಸಭೆ ಕರೆದಿದ್ದರು. ಈ ಗಂಭೀರ ಸಭೆಯಲ್ಲಿ ಭೂ ದಾಖಲೆಗಳ ಉಪನಿರ್ದೇಶಕರು, ಉಪ ತಹಶೀಲ್ದಾರ್ ಹಾಗೂ ಪಿಡಿಓಗಳಂತಹ ಉನ್ನತ ಶ್ರೇಣಿಯ ಅಧಿಕಾರಿಗಳು ಹಾಜರಿದ್ದರು.

ಆದರೆ, ಸಭೆಯನ್ನು ಮುನ್ನಡೆಸಬೇಕಿದ್ದ ಶಾಸಕ ಕೆ.ಎಸ್. ಆನಂದ್ ಅವರ ಬದಲಿಗೆ ಅವರ ಆಪ್ತ ಸಹಾಯಕ ಮಂಜುನಾಥ್ ಅವರು ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.
ಕೇವಲ ಹಾಜರಿ ಹಾಕುವುದಷ್ಟೇ ಅಲ್ಲದೆ, ಶಾಸಕರಿಗಾಗಿ ಮೀಸಲಿದ್ದ ಅಧಿಕೃತ ಆಸನದಲ್ಲಿ ಕುಳಿತು ಅಧಿಕಾರಿಗಳಿಗೆ ಖಡಕ್ ಸೂಚನೆಗಳನ್ನು ನೀಡುವ ಮೂಲಕ ಮಂಜುನಾಥ್ ಅವರು ಸಭೆಯನ್ನು ನಿಯಂತ್ರಿಸಿದ್ದಾರೆ.

ಈ ದೃಶ್ಯವು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಆಯ್ದ ಜನಪ್ರತಿನಿಧಿಗಳ ಜವಾಬ್ದಾರಿಯನ್ನು ಅವರ ಸಹಾಯಕರು ನಿಭಾಯಿಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ. ಆಡಳಿತಾತ್ಮಕ ಶಿಷ್ಟಾಚಾರವನ್ನು ಗಾಳಿಗೆ ತೂರಿ ನಡೆದ ಈ ಸಭೆಯು ಪರದೆ ಹಿಂದಿನ ಅಧಿಕಾರ ಕೇಂದ್ರ’ದ ದರ್ಬಾ‌ರ್ನನಂತೆ ಭಾಸವಾಗುತ್ತಿದ್ದು, ಸರ್ಕಾರದ ಗಂಭೀರ ಸಭೆಗಳಲ್ಲಿ ಇಂತಹ ಹಸ್ತಕ್ಷೇಪವು ಆಡಳಿತ ವ್ಯವಸ್ಥೆಯ ಗಾಂಭೀರ್ಯವನ್ನು ಹಾಳುಮಾಡುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

MLA K.S. Anand’s personal assistant violates etiquette

Share

Leave a comment

Leave a Reply

Your email address will not be published. Required fields are marked *

Don't Miss

ಮುಖ್ಯಮಂತ್ರಿಗಳಿಂದ ಸರ್ವವ್ಯಾಪಿ ಸರ್ವಸ್ಪರ್ಶಿ ಬಜೆಟ್

ಚಿಕ್ಕಮಗಳೂರು:  ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಇಂದು ದಾಖಲೆಯ ೧೭ ನೇ ಬಜೆಟ್ ಮಂಡಿಸಿದ್ದು ಸರ್ವವ್ಯಾಪಿ ಸರ್ವಸ್ಪರ್ಶಿಯಾಗಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ಪ್ರವಾಸೋದಮ ಸೇರಿದಂತೆ ಎಲ್ಲಾ ಕ್ಷೇತ್ರಗಳ ಮೂಲಭೂತ ಸೌಕರ್ಯಕ್ಕೆ ಹಣ ಒದಗಿಸಲಾಗಿದೆ....

ನಗರಸಭೆಯಿಂದ ಉದ್ದಿಮೆ ಪರವಾನಗಿ ಪಡೆಯದೆ ಅಂಗಡಿ ಬೀಗ

ಚಿಕ್ಕಮಗಳೂರು: ನಗರದ ವರ್ತಕರು ಅಧಿಕೃತ ಶುಲ್ಕ ಪಾವತಿಸಿ ನಗರಸಭೆಯಿಂದ ನಿಗದಿತ ಉದ್ದಿಮೆ ಪರವಾನಗಿ ಪಡೆಯುವ ಮೂಲಕ ನಗರಸಭೆಯೊಂದಿಗೆ ಸಹಕರಿಸಬೇಕೆಂದು ಪೌರಾಯುಕ್ತ ಬಿ.ಸಿ ಬಸವರಾಜ್ ಮನವಿ ಮಾಡಿದರು. ಅವರು ಇಂದು ನಗರದ ಮುಖ್ಯ...

Related Articles

ಕುಶಲಕರ್ಮಿಗಳ ಬದುಕಿಗೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಹೊಸ ಚೈತನ್ಯ

ಚಿಕ್ಕಮಗಳೂರು: ಸಮಾಜದ ಕಟ್ಟಕಡೆಯ ಕುಶಲಕರ್ಮಿಗಳ ಬದುಕಿನಲ್ಲಿ ಆರ್ಥಿಕ ಕ್ರಾಂತಿ ಉಂಟುಮಾಡುವ ಉದ್ದೇಶದಿಂದ ಜಾರಿಗೆ ತರಲಾದ ಪ್ರಧಾನ...

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ-ಜಿಲ್ಲಾಧಿಕಾರಿ

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಇದೇ ಮಾರ್ಚ್ ೧೮ ರಿಂದ ಪ್ರಾರಂಭವಾಗಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು...

ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್‌ಗೆ ಕೊರತೆ ಇಲ್ಲ

ಚಿಕ್ಕಮಗಳೂರು, ಮಾ.೧೩: ಜಿಲ್ಲೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ...

ಬಾರ್ ಲೈನ್ ರಸ್ತೆಯಲ್ಲಿ ಕಾರಿನಲ್ಲಿ 2 ಲಕ್ಷ ರೂ ಕಳ್ಳತನ

ಚಿಕ್ಕಮಗಳೂರು: ಬ್ಯಾಂಕ್ ಕೆಲಸದ ನಿಮಿತ್ತ ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಬ್ಯಾಂಕ್‌ಗೆ ತೆರಳಿದ್ದಾಗ ಕಾರಿಗೆ ಹಾನಿ...