ಚಿಕ್ಕಮಗಳೂರು : ಜಿಲ್ಲೆಯಲ್ಲಿ ಕೆಲ ಕೆಎಸ್ಆರ್ ಟಿಸಿ ಸರ್ಕಾರಿ ಬಸ್ಸುಗಳ ಸ್ಥಿತಿ ಚಿಂತಾಜನಕವಾಗಿದೆ, ಈ ಬಸ್ ಗಳು ಓಡ್ಬೇಕು ಅಂದ್ರೆ ಜನರೇ ಬಸ್ಸಿಂದ ಇಳಿದು ತಳ್ಳಬೇಕಾಗಿದೆ, ಪ್ರಯಾಣಿಕರಲ್ಲಿಯೇ ಇದಕ್ಕೆ ಶಕ್ತಿ ಮಾತ್ರ ಇರಲೇಬೇಕು.
ಹೌದು ಈ ಬಸ್ಸುಳನ್ನ ಪ್ರಯಾಣಿಕರೇ ತಳ್ಳಿ ಸ್ಟಾರ್ಟ್ ಮಾಡಬೇಕಾದ ಪರಿಸ್ಥಿತಿ ಉಂಟಾಗಿದ್ದು ಕಡೂರು ತಾಲೂಕಿನ ಸಖರಾಯಪಟ್ಟಣ ಬಸ್ ನಿಲ್ದಾಣದಲ್ಲಿ, ರಾಜ್ಯ ಸರ್ಕಾದ ಮಹತ್ವದ ಶಕ್ತಿ ಯೋಜನೆಯ ಎಫೆಕ್ಟ್ ನಿಂದ ಸರ್ಕಾರಿ ಬಸ್ಸುಗಳ ಸ್ಥಿತಿ ದಯಾನೀಯ ಪರಿಸ್ಥಿತಿಗೆ ಬಂದು ತಲುಪಿದೆ, ಎಲ್ಲೆಂದರಲ್ಲಿ ನಿಲ್ಲುತ್ತಿರೋ ಈ ಕೆಎಸ್ಆರ್ ಟಿಸಿ ಸರ್ಕಾರಿ ಬಸ್ಸುಗಳು ಪ್ರಯಾಣಕ್ಕೆ ಯೋಗ್ಯವೇ ಎಂಬ ಅನುಮಾನ ವ್ಯಕ್ತವಾಗಿದೆ, ಕೆಲ ಬಸ್ಸುಗಳಿಗೆ ಸ್ಟಾರ್ಟಿಂಗ್ ಪ್ರಾಬ್ಲಂ ಕೂಡಾ ಇದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 530ಕ್ಕೂ ಹೆಚ್ಚು ಸರ್ಕಾರಿ ಬಸ್ಸುಗಳಿವೆ ಇವುಗಳಲ್ಲಿ ಹೆಚ್ಚು ಬಸ್ಸುಗಳಲ್ಲಿ ಡಕೋಟಾ ಬಸ್ಸುಗಳೇ ಆಗಿವೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಘಟಕದಲ್ಲಿ ತಳ್ಳೋ ಮಾಡಲ್ ಬಸ್ ಗಳು ದಿನೇ ದಿನೇ ಹೆಚ್ಚುತ್ತಿವೆ.
Leave a comment