ಚಿಕ್ಕಮಗಳೂರು: ಸೆಕ್ಸ್ ಮತ್ತು ಇಸ್ಪೀಟು ದಂಧೆಯ ಆದಿತ್ಯನ ಮನೆಗೆ ನುಗ್ಗಿ ಅವನ ಸಹಚರರು ಬಾರಿಸಿದ್ದರ ಹಿನ್ನೆಲೆ ರೋಚಕವಾಗಿದೆ.
ಈತನ ಊರು ಬೆರಣಗೋಡು, ಕಾಂಗ್ರೆಸ್ ಮುಖಂಡ ಎಂಬ ಬೋರ್ಡ್ ಬೇರೆ , ಮೂಡಿಗೆರೆ ಶಾಸಕರಾದ ನಯನಮೋಟಮ್ಮನವರ ಬಲಗೈ ಭಂಟ ಎಂದು ಬಿಂಬಿಸಿ ಕೊಂಡಿರುವ ಇವನ ದಂಧೆಗಳು ಒಂದೇರಡಲ್ಲ.
ಏನು ಇಲ್ಲದವ ಇಂದು ಇನೋವಾ ಕಾರು ಬಿಟ್ಟು ಇಳಿಯಲ್ಲ .ಒಂದೇ ಬಳ್ಳಿಯ ಹೂಗಳಂತೆ ಇದ್ದವರು ಹಣಕಾಸು ಲೆಕ್ಕಾಚಾರದಲ್ಲಿ ಬಡಿಸಿಕೊಂಡರು ಪೊಲೀಸ್ ರಿಗೆ ದೂರು ನೀಡಿಲ್ಲ. ವಿಡಿಯೋ ಹರಿದಾಡಿದ ಮೇಲೆ ಪೊಲೀಸ್ ರೇ ಕರೆಯಿಸಿ ಕೇಳಿದ್ದಾರೆ ನಾವೆಲ್ಲ ಒಂದೆ ದಂಧೆಯವರು ಎಂದು ಹೇಳಿ ಬಂದಿದ್ದಾನೆ.ನಂತರ ಮಹಿಳೆಯೊಬ್ಬರು ಕಿರುಕುಳದ ದೂರು ನೀಡಿದ್ದು ಈತನನ್ನು ಬಂಧಿಸಿ ಜೈಲು ದಾರಿ ತೋರಿಸಿದ್ದಾರೆ.
ಈತ ಅಲ್ದೂರು ಠಾಣಾಧಿಕಾರಿಯಾಗಿದ್ದವರ ಆಪ್ತ ವಲಯದಲ್ಲಿದ್ದ ಇವನ ಕೈಚಳಕದಲ್ಲಿ ಹಲವರನ್ನು ಪಳಗಿಸಲಾಗಿದೆ ಎನ್ನಲಾಗುತ್ತಿದೆ.ಇಷ್ಟು ವಿಷಯ ಪೊಲೀಸ್ ರಿಗೆ ತಿಳಿಯದಿರುವುದು ಸೋಜಿಗ. ಠಾಣಧಿಕಾರಿಯ ಮೇಲೆ ಗುಮಾನಿಯಿಂದ ನೋಡಿ ನಕ್ಕು ನಲಿದವರ ಪಟ್ಟಿ ಇವನ ಬಳಿ ಇರಬಹುದು ಎಂದು ಈಗ ಮಾತನಾಡುತ್ತಾರೆ ಠಾಣಧಿಕಾರಿಯ ಮೇಲೆ ಸಾಕಷ್ಟು ದೂರು ಗಳಿದ್ದು ಈಗ ವರ್ಗಾವಣೆ ಆಗಿದ್ದಾರೆ.
ಇದು ಜಿಲ್ಲಾ ಮಟ್ಟದ ಅಧಿಕಾರಿಗೆ ತಲೆ ಬಿಸಿ ಮಾಡಿತ್ತು ಎನ್ನಲಾಗಿದೆ.ಕೆಲ ದಿನ ಚಿಕ್ಕಮಗಳೂರಿನಲ್ಲಿ ಮನೆ ಮಾಡಿಕೊಂಡು ಇರುವುದು ಕೂಡ ಹಲವು ಸಂಶಯಗಳಿಗೆ ಸೆಕ್ಸ್ ಸರ್ದಾರ್ ಆದಿತ್ಯ ಹೊರ ಬಂದ ಮೇಲೆ ಉತ್ತರ ಹುಡುಕ ಬೇಕು.
ಹಲವು ಹೋಮ್ ಸ್ಟೇಗಳು ಇವನ ಅಡ್ಡ, ಇಸ್ಪೀಟು ಮತ್ತು ಸಪ್ಲೈ ಕೆಲಸದ ಜೊತೆಗೆ ಸೆಕ್ಸ್ ಸಿ.ಡಿ ಸುತ್ತುವುದು ದುಡ್ಡು ಎತ್ತುವ ಕಲೆಯಲ್ಲಿ ಎಕ್ಸ್ ಫರ್ಟ್ ಆಗಿದ್ದಾನೆ ಎಂದು ಹೇಳುತ್ತಾರೆ. ಬಹುತೇಕ ಮುಖಂಡರು ಕೆಲ ಅಧಿಕಾರಿಗಳು ಇವನ ಸೇವೆಯಿಂದ ಪಾವನರಾಗಿದ್ದಾರೆ ಎಂದು ಅವನ ಸಹಚರರ ಅನುಮಾನ.
ಈತನಿಂದ ಸೇವೆ ಪಡೆದವರ ಎದೆ ಬಡಿದು ಕೊಳ್ಳುತ್ತಿರುವುದು ಮಾತ್ರ ಗ್ಯಾರಂಟಿ ಯೋಜನೆಯಂತಾಗಿದೆ. ಆದಿತ್ಯನನ್ನು ಸಂಪೂರ್ಣ ತನಿಖೆ ಮಾಡಿದರೆ ಹಲವು ಕರಾಳ ವಿಷಯಗಳು ತಿಳಿಯಬಹುದು. ಕಾಣದ ಕೈಗಳು ಒತ್ತಡ ತಂದಿರಲು ಬಹುದು ಎಂದು ಜನ ಮಾತನಾಡುತ್ತಿರುವುದು ಮಾತ್ರ ನಿಜ.
ಈತ ಮತ್ತೋಬ್ಬ ಪ್ರಜ್ವಲ್ ರೇವಣ್ಣ ನಾಗುತ್ತಾನಾ…?
King Pin Aditya
Leave a comment