Home Latest News Jumbo Circus:ನಗರದಲ್ಲಿ ಜಂಬೂ ಸರ್ಕಸ್-ಸಾಹಸ ಚಟುವಟಿಕೆಗಳ ಪ್ರದರ್ಶನ
Latest NewsHomenamma chikmagalur

Jumbo Circus:ನಗರದಲ್ಲಿ ಜಂಬೂ ಸರ್ಕಸ್-ಸಾಹಸ ಚಟುವಟಿಕೆಗಳ ಪ್ರದರ್ಶನ

Share
ಸರ್ಕಸ್ ಫ್ಯಾನ್ಸ್ ಫೇರ್‌ವೆಲ್ ಅಸೋಷಿಯೇಷನ್ ಅಧ್ಯಕ್ಷ ನಾಗೇಶ್ ಸುದ್ದಿಗೋಷ್ಠಿ
ಸರ್ಕಸ್ ಫ್ಯಾನ್ಸ್ ಫೇರ್‌ವೆಲ್ ಅಸೋಷಿಯೇಷನ್ ಅಧ್ಯಕ್ಷ ನಾಗೇಶ್ ಸುದ್ದಿಗೋಷ್ಠಿ
Share

ಚಿಕ್ಕಮಗಳೂರು:  ಏಷ್ಯ ಖಂಡದಲ್ಲೇ ಅತಿ ದೊಡ್ಡ ಸರ್ಕಸ್ ತಂಡವಾದ ಜಂಬೂ ಸರ್ಕಸ್‌ರವರಿಂದ ನಗರದ ಬೈಪಾಸ್ ರಸ್ತೆ, ಕಲ್ಯಾಣ ನಗರದಲ್ಲಿ ಅತ್ಯದ್ಭುತ ಸರ್ಕಸ್ ಪ್ರದರ್ಶನಗೊಳ್ಳುತ್ತಿದ್ದು ಕಲಾಭಿಮಾನಿಗಳೂ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದು ಸರ್ಕಸ್ ಫ್ಯಾನ್ಸ್ ಫೇರ್‌ವೆಲ್ ಅಸೋಷಿಯೇಷನ್ ಅಧ್ಯಕ್ಷ ನಾಗೇಶ್ ಹೇಳಿದರು

ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಜಂಬೂ ಸರ್ಕಸ್ ತಂಡವೂ ೧೯೭೭ರ ಅಕ್ಟೋಬರ್ ೨ರಂದು ಎಂ.ವಿ ಶಂಕರನ್ ಅವರ ಮಾಲೀಕತ್ವದಲ್ಲಿ ಬಿಹಾರಿನ ದಾನಪುರದಲ್ಲಿ ಪ್ರಾರಂಭವಾಗಿದ್ದು. ಪ್ರಸ್ತುತ ಅವರ ಮಕ್ಕಳಾದ ಅಜಯ್‌ಶಂಕರ್ ಹಾಗೂ ಅಶೋಕ್‌ಶಂಕರ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈ ತಂಡದಲ್ಲಿ ನೂರು ಜನ ಕಲಾವಿದರು, ಮಹಿಳೆಯರು, ಪುರು?ರು, ಕಚೇರಿ ನೌಕರರು ಇತರ ಸಹಾಯಕ ನೌಕರರು ಸೇರಿದಂತೆ ಒಟ್ಟು ೩೦೦ಕ್ಕೂ ಹೆಚ್ಚು ಜನ ಸರ್ಕಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಸರ್ಕಸ್ಸಿನಲ್ಲಿ ಆಫ್ರಿಕಾ, ರಷ್ಯಾದ ವಿದೇಶಿ ಕಲಾವಿದರು ಒಳಗೊಂಡಂತೆ ದೇಶದ ವಿವಿದ ರಾಜ್ಯಗಳ ಕಲಾವಿದರು ಮೈ ಜುಮ್ ಎನಿಸುವಂತಹ ಸಾಹಸಗಳು, ಅಮೆರಿಕನ್ ಸ್ಪೀಡ್ ವೀಲ್, ಡಬಲ್ ರಿಂಗ್ ಅಕ್ರೋಬ್ಯಾಟ್, ಪೀಕಾಕ್ ಡ್ಯಾನ್ಸ್, ಗ್ಲೋಬಲ್ ಡೆತ್ ಇನ್ ಡಾರ್ಕ್‌ನೆಸ್ ಹಾಗೂ ರೊಮ್ಯಾಂಟಿಕ್ ಸ್ಯಾರಿ ಡ್ಯಾನ್ ಸೇರಿದಂತೆ ವಿವಿದ ಸಾಹಸಮಯ ಚಟುಚಟಿಕೆಗಳನ್ನು ಪ್ರದರ್ಶಿಸುತ್ತಾರೆ,

ಬಹು ಭಾಷಾ ಚಿತ್ರಗಳಲ್ಲಿ ಈ ಸರ್ಕಸ್‌ನ ಬಳಸಿ ಹಲವಾರು ಚಿತ್ರಗಳನ್ನು ಚಿತ್ರಿಸಲಾಗಿದೆ. ನೆಹರು, ಇಂದಿರಾಗಾಂಧಿ, ವಿದೇಶಿ ಗಣ್ಯರು, ಅಮಿತಾ ಬಚ್ಚನ್, ಧಮೇಂದ್ರ ರಾಜೇಶ್ ಖನ್ನ, ಹೇಮಮಾಲಿನಿ ಸೇರಿದಂತೆ ಇನ್ನೂ ಅನೇಕ ಚಲನಚಿತ್ರ ನಟ-ನಟಿಯರು ಸರ್ಕಸ್ ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿ ಹೆಮ್ಮೆಯಿಂದ ಬೆನ್ನು ತಟ್ಟಿದ್ದಾರೆ ಎಂದರು.

ಸರ್ಕಸ್‌ನ ಕಲಾವಿದರು ವ?ವಿಡಿ ಭಾರತದ ಉದ್ದಗಲಕ್ಕು ಸಂಚರಿಸಿ ಜನರನ್ನು ರಂಜಿಸಿ ಮೆಚ್ಚಿಸಿದ್ದಾರೆ. ಇದೀಗ ಚಿಕ್ಕಮಗಳೂರಿನಲ್ಲಿ ಪ್ರಾರಂಭಿಸಿದ್ದು ಮಧ್ಯಾಹ್ನ ೧ ಗಂಟೆ, ಸಂಜೆ ೪ ಗಂಟೆ ಹಾಗೂ ರಾತ್ರಿ ೭ ಗಂಟೆಗೆ ಪ್ರತಿ ದಿನ ೩ ಆಟಗಳು ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಿದರು.

ಪದರ್ಶನಕ್ಕೆ ಮುಂಗಡ ಬುಕಿಂಗ್ ಸೌಲಭ್ಯವಿದ್ದು  ದೂ.ಸಂ ೬೨೩೮೩೪೭೦೦೬, ೮೨೮೧೬೦೬೮೯೨ ಅಥವಾ ೮೮೦೯೦೦೦೧೭೫.ಗೆ ಕರೆ ಮಾಡಿ ಬುಕಿಂಗ್ ಮಾಡಿಕೊಳ್ಳಬಹುದು ಎಂದರು. ಈ ಸಂದರ್ಭದಲ್ಲಿ ರಾಜೀವ್, ವರ್ಗೀಸ್, ಅಂಥೋಣಿ, ಮೂರ್ತಿ ಉಪಸ್ಥಿತರಿದ್ದರು.

Jumbo Circus-Adventure activities show in the city

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ನೀರುಗಂಟಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಚಿಕ್ಕಮಗಳೂರು: ಅಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಹೇಮಾವತಿ ನದಿಯ ಅಕ್ರಮವಾಗಿ ಮರಳು ಸಾಗಣೆ ಪ್ರಕರಣ ಪತ್ತೆ

ಮೂಡಿಗೆರೆ: ಜೀವನದಿ ಹೇಮಾವತಿಯ ಒಡಲಿಗೆ ಕನ್ನ ಹಾಕಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲದ ಮೇಲೆ ಗೋಣಿಬೀಡು...

ಕಾಫಿನಾಡಿನಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮವು ಸಡಗರ ಹಾಗೂ ಸೌಹಾರ್ದತೆಯಿಂದ ಕಳೆಗಟ್ಟಿತ್ತು. ಕೆಂಪನಹಳ್ಳಿಯ...

ಕಾಫಿ ತೋಟದಲ್ಲಿ ಮರಗಸಿ – ಕಾರ್ಮಿಕನ ಸಾವು

ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ...