ನಾಡಿನ ಪ್ರಸಿದ್ಧ ಅಂತರಘಟ್ಟೆ ದುರ್ಗಾಂಭದೇವಿಯ ಜಾತ್ರೆಯಲ್ಲಿ ಲಕ್ಷಾಂತರ ಜನ ಸೇರುತ್ತಾರೆ.ಭಕ್ತರು ಎತ್ತಿನ ಗಾಡಿ ಓಡಿಸುವುದು ವಿಶೇಷ.
ಪ್ರತಿವರ್ಷವೂ ಒಂದಲ್ಲೂಂದು ಅವಘಡ ಸಂಭವಿಸುತ್ತದೆ.ಪೊಲೀಸ್ ರು ಎಷ್ಟು ಕಟ್ಟು ನಿಟ್ಟು ಅನುಸರಿಸಿದರು ಅನಾಹುತ ಆಗುತ್ತದೆ.
ಅಜ್ಜಂಪುರ ಪಿ.ಐ.ವೀರೇಂದ್ರ ಕಳೆದ ಒಂದು ವಾರದಿಂದ ಎಡಬಿಡದೆ ಎಲ್ಲಾ ರೀತಿಯ ಮುಂಜಾಗ್ರತೆ ತೆಗೆದುಕೊಂಡರು ಅವರೆ ಇಂದು ಅನಾಹುತಕ್ಕೆ ಸಿಕ್ಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಸಂಜೆ ತಮ್ಮಟದಹಳ್ಳಿ ಗೇಟ್ ಬಳಿ ಬಂದೂಬಸ್ತಿನಲ್ಲಿ ಇದ್ದಾಗ ಎತ್ತಿನ ಗಾಡಿ ಅತಿವೇಗವಾಗಿ ಬಂದಿದ್ದನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ ಆದರೆ ಗಾಡಿ ನುಗ್ಗಿದ್ದರಿಂದ ಅನಾಮತ್ ಬಿದ್ದಾಗ ತಲೆ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಪೆಟ್ಟು ಬಿದ್ದಿದೆ ಜೊತೆಗೆ ಮೆದುಳಿಗೆ ಪೆಟ್ಟು ಬಿದ್ದಿರುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಅವಘಡವಾದ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ಶಿವಮೊಗ್ಗ ಮೆಕ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ನಿರಂತರವಾಗಿ ಚಿಕಿತ್ಸೆ ನಡೆಯುತ್ತಿದೆ ವೀರೇಂದ್ರರವರು ಚಿಕಿತ್ಸೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
Inspector hit on the head by bullock cart
Leave a comment