Home Latest News ಮರೆಯಾದ ಚಿಂತಕ ಹೆಚ್.ಟಿ.ರಾಜೇಂದ್ರ
Latest NewschikamagalurHomenamma chikmagalur

ಮರೆಯಾದ ಚಿಂತಕ ಹೆಚ್.ಟಿ.ರಾಜೇಂದ್ರ

Share
Share

ಎನ್.ಅರ್.ಪುರ: ಹೆಚ್.ಟಿ.ರಾಜೇಂದ್ರ ನಮ್ಮನ್ನು ಅಗಲಿದ್ದಾರೆ ಕೆಲವು ವರ್ಷಗಳಿಂದ ಅನಾರೋಗ್ಯದ ಬಾಧೆ ಕಾಡುತಿತ್ತು.ಇದರ ಮಧ್ಯೆಯೂ ಸಕ್ರಿಯ ಸಾರ್ವಜನಿಕ ಬದುಕಲ್ಲಿ ತೊಡಗಿಸಿಕೊಂಡವರು.ಜಿಲ್ಲಾ ಪಂಚಾಯತಿ ಸದಸ್ಯರಾಗಿ ವಿಚಾರಗಳನ್ನು ಮಂಡಿಸಿ ಮಾತನಾಡುತ್ತಿದ್ದ ಇವರಿಗೆ ಉತ್ತಮ ಭವಿಷ್ಯ ಇದೆ ಎಂದು ತಿಳಿದವರಿಗೆ ನಿರಾಸೆ ಆಗಿದೆ.

ಸಾರ್ವಜನಿಕ ಜೀವನದಲ್ಲಿ ಎಲ್ಲೂ ರಾಜಿಯಾಗದೆ ಧ್ವನಿ ಇನ್ನಿಲ್ಲದಂತಾಗಿದೆ.ಸದಾಕಾಲವೂ ಕ್ರಿಯಾಶೀಲ ಚಟುವಟಿಕೆಯಲ್ಲಿದ್ದ ರಾಜೇಂದ್ರ ಕುವೆಂಪು, ಲಂಕೇಶ್ ತೇಜಸ್ವಿ ಇನ್ನಿತರರ ಸಾಹಿತ್ಯ ಓದಿಕೊಂಡಿದ್ದರು ಅದರಂತೆ ಬದುಕಿದ್ದರು.

ಒಳ್ಳೆಯವರಿಗೆ ಇದು ಕಾಲವಲ್ಲ ಶೃಂಗೇರಿ ಕ್ಷೇತ್ರದಿಂದ ಎರಡು ಸಾರಿ ವಿಧಾನಸಭೆಯ ಚುನಾವಣೆಗೆ ಸ್ಪರ್ಧಿಸಿದ್ದವರನ್ನು ಜನ ಕೈ ಹಿಡಿಯಲಿಲ್ಲ ಆದರೆ ರಾಜೇಂದ್ರ ವಿಮುಕರಾಗದೆ ಸಾರ್ವಜನಿಕ ಬದುಕಿನಲ್ಲಿ ಬೆಸೆದು ಹೋಗಿದ್ದರು.ಮಲೆನಾಡಿನ ಸಮಸ್ಯೆಗಳಷ್ಟೇ ಅಲ್ಲದೆ ಜಿಲ್ಲೆ, ರಾಜದ ಸಮಸ್ಯೆಗಳನ್ನು ಅರಿತುಕೊಂಡ ಧ್ವನಿ ಎತ್ತುತ್ತಿದ್ದ ಧ್ವನಿ ಇನ್ನಿಲ್ಲ ಎನ್ನುವುದೇ ಬೇಸರದ ಸಂಗತಿ.

ಪಕ್ಷಾಂತರಿಯಾಗದೆ,ಪಲಾಯನವಾದಿಯಾಗದೆ ಸಮಾಜವಾದಿಯಾಗಿ ಸರಳ ಬದುಕಿನಲ್ಲಿ ಪಯಣ ಮಾಡಿರುವ ರಾಜೇಂದ್ರರ ಬಗ್ಗೆ ಈಗ ಆಯ್ಯೋ ಎನ್ನುವುದಕ್ಕಿಂತ ಇದ್ದಾಗ ಬೆಂಬಲಿಸಿದ್ದರೆ ಗಟ್ಟಿ ಧ್ವನಿಗೆ ಬೆಂಬಲಿಸಿದ ಸಾರ್ಥಕತೆ ಉಳಿಯಿತಿತ್ತು.ಸಾವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ .ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಬಹುದಷ್ಟೆ.

Faded Thinkers H.T. Rajendra

Share

Leave a comment

Leave a Reply

Your email address will not be published. Required fields are marked *

Don't Miss

ಹಿರೇಬೈಲು ಗ್ರಾಮದಲ್ಲಿ ನಕಲಿ ವೈದ್ಯನ ವಿರುದ್ಧ ಕ್ರಮ

ಕಳಸ: ಹಿರೇಬೈಲು ಗ್ರಾಮದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯನ ವಿರುದ್ಧ ಕ್ರಮ ಕೈಗೊಂಡಿದ್ದು, ಕ್ಲಿನಿಕ್ ಅನ್ನು ಬಂದ್ ಮಾಡಿಸಲಾಗಿದೆ ಎಂದು ಆರೋಗ್ಯ ಇಲಾಖೆಯವರು ತಿಳಿಸಿದ್ದಾರೆ. ಸ್ಥಳೀಯರ ದೂರಿನ ಮೇರೆಗೆ ಆರೋಗ್ಯ ಇಲಾಖೆ...

ವಿದ್ಯುತ್‌ಶಾಕ್‌ನಿಂದ ಲೈನ್‌ಮ್ಯಾನ್ ಸಾವು

ಬಾಳೆಹೊನ್ನೂರು: ಆಲ್ದೂರು ವಲಯದ ಸಂಗಮೇಶ್ವರ ಪೇಟೆಯ ಸೆಕ್ಷನ್ ಪವರ್‌ಮ್ಯಾನ್ ಪ್ರವೀಣ ಪಾತ್ರೋಟ(25) ವಿದ್ಯುತ್ ಆಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೆನಕಟ್ಟಿ ಗ್ರಾಮದ ಪ್ರವೀಣ ಅವರು, ಶುಕ್ರವಾರ ಬೆಳಿಗ್ಗೆ ಹುಣಸೇಕೊಪ್ಪ ಬಳಿ...

Related Articles

ಜು.28ಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಮೇಳ

ಚಿಕ್ಕಮಗಳೂರು: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ವಸಾಹತು ಹಿಂಭಾಗ, ಜಿಲ್ಲಾ ಪಂಚಾಯಿತಿ ಹತ್ತಿರ, ಜ್ಯೋತಿನಗರ, ಚಿಕ್ಕಮಗಳೂರು)...

ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಕುದುರೆಮುಖ, ಮುಳ್ಳಯ್ಯನ...

ಸಾರ್ವಜನಿಕರ ಸುರಕ್ಷತೆಗಾಗಿ “ಮನೆ-ಮನೆಗೆ ಪೊಲೀಸ್”

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ 368 ಬೀಟ್‌ಗಳಲ್ಲಿ ಏಕಕಾಲದಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು  ಜಿಲ್ಲಾ ಪೊಲೀಸ್...

ಗಿರಿಭಾಗಕ್ಕೆ ಪ್ರವೇಶ ಶುಲ್ಕ-ಪಾಸ್ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಮತ್ತು ಐ.ಡಿ.ಪೀಠ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿ ವಾಸಿಗಳಿಗೆ ಪ್ರವೇಶ ಶುಲ್ಕ ಮತ್ತು ಪಾಸ್...