ತರೀಕೆರೆ: ಜನವರಿ 25 ರಿಂದ ಫೆಬ್ರವರಿ 3 ರ ತನಕ ಅಂತರಘಟ್ಟೆ ದುರ್ಗಾಂಭ ದೇವಿಯ ಜಾತ್ರೆ ಪ್ರಯುಕ್ತ ತರೀಕೆರೆ, ಕಡೂರು, ಬೀರೂರು, ಅಜ್ಜಂಪುರ, ಶಿವನಿ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಘಮ,ಘಮ ಎನ್ನಿಸುವ ಭಾರೀ ಭೋಜನ .
ಹಬ್ಬದ ವಿಶೇಷ ಏನೆಂದರೆ ದೇವಿಗೆ ಹರಕೆ ಅರ್ಪಿಸುವ ಭಕ್ತರು ಕುರಿ,ಕೋಳಿ, ಭೋಜನ ಇರುತ್ತದೆ. ಬಂಧು,ಬಳಗ,ಅತಿಥಿಗಳು ಸ್ನೇಹಿತರನ್ನು ಕರೆದು ಊಟ ಬಡಿಸುವ ಪರಿ ವರ್ಣನೆ ಮಾಡಲು ಸಾಧ್ಯವಿಲ್ಲ.
ಪರಿಚಯ ಇರಲಿ ಬಿಡಲಿ ಪ್ರತಿಯೊಂದು ಮನೆಯವರು ಅತಿಥಿಗಳನ್ನು ಕರೆದು ಸತ್ಕರಿಸುವುದು ನೋಡಿದರೆ ಮನುಷ್ಯ ಸಂಬಂಧ ಎಂತಹ ಮಹತ್ವ ಎನ್ನಿಸುತ್ತದೆ. ಬಹುತೇಕ ಹಿಂದುಳಿದ ಮತ್ತು ದಲಿತರ ಹಬ್ಬ ಆದರೆ ಮೇಲ್ವರ್ಗದ ಜನರು ಕೂಡ ಇದರಲ್ಲಿ ಪಾಲ್ಗೊಳ್ಳುತ್ತಾರೆ.
ಯಾವುದೇ ಮನೆಗೆ ಹೋಗಲಿ ಮೊದಲು ಊಟ ಮಾಡಿ ಎಂದು ಕರೆಯುವುದು ವಾಡಿಕೆ.ಮಾಂಸ ಭೋಜನ ,ಸಿಹಿ ಊಟ ಕೂಡ ಇರುತ್ತದೆ.ಜಾತಿ,ಮತದ ಸೊಂಕು ಅಪ್ಪಿ ತಪ್ಪಿ ಇರುವುದಿಲ್ಲ ಪರಿಚಯ ಇರಲಿ,ಬಿಡಲಿ ಅಷ್ಟೊಂದು ಅಕ್ಕರೆ ಪ್ರೀತಿ ವಿಶ್ವಾಸ ಮತ್ತು ಆತ್ಮೀಯ ಸತ್ಕಾರಕ್ಕೆ ಆದ್ಯತೆ.
ಜನವರಿ ತಿಂಗಳ ಕೊನೆಯ ವಾರದಲ್ಲಿ ಕಡೂರು, ಬೀರೂರು, ತರೀಕೆರೆ ಮತ್ತು ಅಜ್ಜಂಪುರದ ಮೈದಾನದಲ್ಲಿ ಕುರಿಗಳ ಹಿಂಡು ಹಿಂಡಾಗಿ ಇರುತ್ತವೆ. ಅವುಗಳ ಖರೀದಿ ಭರಾಟೆ ಜೋರು ಇರುತ್ತದೆ. ಹತ್ತು ಸಾವಿರದಿಂದ ಐವತ್ತು ಸಾವಿರಗಳವರಗೆ ಬೆಲೆಯ ಕುರಿ ಟಗರುಗಳ ಖರೀದಿಸುವ ಜನ ಒಂದು ಕುಟುಂಬದವರು ಎರಡು,ಮೂರು, ಕುರಿ ಖರೀದಿ ಮಾಡಿದರೆ ಇನ್ನೂ ಕೆಲವರು ಮೂರು ನಾಲ್ಕು ಕುಟುಂಬದ ವರು ಸೇರಿ ಕುರಿ ಖರೀದಿ ಮಾಡಿ ಪಾಲು ಹಾಕಿ ಕೊಳ್ಳುತ್ತಾರೆ.
ಹದಿನೈದು ದಿನಗಳಲ್ಲಿ ನೂರಾರು ಕೋಟಿ ವೆಚ್ಚ ಮಾಡಿ ಸಂತೃಪ್ತಿಯಿಂದ ಘಮ,ಘಮ ಭೋಜನ ಸವಿಯುವುದು ಜಾತ್ರೆಯ ವಿಶೇಷ. ದೇವಿಯ ರಥೋತ್ಸವಕ್ಕೆ ಹೋರಿ( ಎತ್ತುಗಳು) ಹೊಸ ಗಾಡಿ ಖರೀದಿಸಿ ಶೃಂಗಾರ ಮಾಡಿ ಮನೆ ಮಂದಿಯೆಲ್ಲಾ ಹೋಗಿ ದರ್ಶನ ಪಡೆಯುವ ವಾಡಿಕೆ ಇದೆ.
ಮನೆಗಳಿಗೆ ಸುಣ್ಣ, ಬಣ್ಣ ಬಳಿದು ಕೇರಿಯ ತುಂಬಾ ವಿದ್ಯುತ್ ಅಲಂಕಾರ ಮಾಡುವುದು ಕೂಡ ವಿಶೇಷ. ದೇವಿಯ ಹಬ್ಬ ಅನಾದಿಕಾಲದಿಂದಲೂ ನಡೆದಿದೆ. ಇದನ್ನು ಉಳಿಸಿ ಬೆಳೆಸುತ್ತಿರುವುದು ಸಂಬಂಧ, ಸ್ನೇಹ ,ನೆಂಟರು,ಇಷ್ಟರನ್ನು ಒಂದಡೆ ಸೇರಿಸುವ ಬಾಂಧವ್ಯ ದ ಹಬ್ಬವನ್ನು ಇತ್ತೀಚಿನ ದಿನಗಳಲ್ಲಿ ವೈಭವದಿಂದ ಆಚರಣೆ ಮಾಡುತ್ತಿರುವುದು ವಿಶೇಷ ಎನ್ನಲಾಗುತ್ತದೆ.
ಬಡವ ಶ್ರೀಮಂತ ಎಂಬ ಭೇದ ಭಾವ ಇಲ್ಲದೆ ಇವ ನಮ್ಮವ,ಇವ ನಮ್ಮವ ಎನ್ನುವ ಸಂಸ್ಕೃತಿಗಳ ಸಡಗರ ತುಂಬಿದ ಹಬ್ಬಗಳನ್ನು ನೋಡಿಯಾದರು ದ್ವೇಷ, ಅಸೂಯೆ ಮರೆಯಾಗಲಿ.
Durgambha Devi Fair is a week of heat heat
Leave a comment