Home ದುರ್ಗಾಂಭ ದೇವಿ ಜಾತ್ರೆ ವಾರವೆಲ್ಲಾ ಘಮ,ಘಮ
HomeLatest Newsnamma chikmagalurTarikere

ದುರ್ಗಾಂಭ ದೇವಿ ಜಾತ್ರೆ ವಾರವೆಲ್ಲಾ ಘಮ,ಘಮ

Share
Share

ತರೀಕೆರೆ: ಜನವರಿ 25 ರಿಂದ ಫೆಬ್ರವರಿ 3 ರ ತನಕ ಅಂತರಘಟ್ಟೆ ದುರ್ಗಾಂಭ ದೇವಿಯ ಜಾತ್ರೆ ಪ್ರಯುಕ್ತ ತರೀಕೆರೆ, ಕಡೂರು, ಬೀರೂರು, ಅಜ್ಜಂಪುರ, ಶಿವನಿ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಘಮ,ಘಮ ಎನ್ನಿಸುವ ಭಾರೀ ಭೋಜನ .

ಹಬ್ಬದ ವಿಶೇಷ ಏನೆಂದರೆ ದೇವಿಗೆ ಹರಕೆ ಅರ್ಪಿಸುವ ಭಕ್ತರು ಕುರಿ,ಕೋಳಿ, ಭೋಜನ ಇರುತ್ತದೆ. ಬಂಧು,ಬಳಗ,ಅತಿಥಿಗಳು ಸ್ನೇಹಿತರನ್ನು ಕರೆದು ಊಟ ಬಡಿಸುವ ಪರಿ ವರ್ಣನೆ ಮಾಡಲು ಸಾಧ್ಯವಿಲ್ಲ.

ಪರಿಚಯ ಇರಲಿ ಬಿಡಲಿ ಪ್ರತಿಯೊಂದು ಮನೆಯವರು ಅತಿಥಿಗಳನ್ನು ಕರೆದು ಸತ್ಕರಿಸುವುದು ನೋಡಿದರೆ ಮನುಷ್ಯ ಸಂಬಂಧ ಎಂತಹ ಮಹತ್ವ ಎನ್ನಿಸುತ್ತದೆ. ಬಹುತೇಕ ಹಿಂದುಳಿದ ಮತ್ತು ದಲಿತರ ಹಬ್ಬ ಆದರೆ ಮೇಲ್ವರ್ಗದ ಜನರು ಕೂಡ ಇದರಲ್ಲಿ ಪಾಲ್ಗೊಳ್ಳುತ್ತಾರೆ.

ಯಾವುದೇ ಮನೆಗೆ ಹೋಗಲಿ ಮೊದಲು ಊಟ ಮಾಡಿ ಎಂದು ಕರೆಯುವುದು ವಾಡಿಕೆ.ಮಾಂಸ ಭೋಜನ ,ಸಿಹಿ ಊಟ ಕೂಡ ಇರುತ್ತದೆ.ಜಾತಿ,ಮತದ ಸೊಂಕು ಅಪ್ಪಿ ತಪ್ಪಿ ಇರುವುದಿಲ್ಲ ಪರಿಚಯ ಇರಲಿ,ಬಿಡಲಿ ಅಷ್ಟೊಂದು ಅಕ್ಕರೆ ಪ್ರೀತಿ ವಿಶ್ವಾಸ ಮತ್ತು ಆತ್ಮೀಯ ಸತ್ಕಾರಕ್ಕೆ ಆದ್ಯತೆ.

ಜನವರಿ ತಿಂಗಳ ಕೊನೆಯ ವಾರದಲ್ಲಿ ಕಡೂರು, ಬೀರೂರು, ತರೀಕೆರೆ ಮತ್ತು ಅಜ್ಜಂಪುರದ ಮೈದಾನದಲ್ಲಿ ಕುರಿಗಳ ಹಿಂಡು ಹಿಂಡಾಗಿ ಇರುತ್ತವೆ. ಅವುಗಳ ಖರೀದಿ ಭರಾಟೆ ಜೋರು ಇರುತ್ತದೆ. ಹತ್ತು ಸಾವಿರದಿಂದ ಐವತ್ತು ಸಾವಿರಗಳವರಗೆ ಬೆಲೆಯ ಕುರಿ ಟಗರುಗಳ ಖರೀದಿಸುವ ಜನ ಒಂದು ಕುಟುಂಬದವರು ಎರಡು,ಮೂರು, ಕುರಿ ಖರೀದಿ ಮಾಡಿದರೆ ಇನ್ನೂ ಕೆಲವರು ಮೂರು ನಾಲ್ಕು ಕುಟುಂಬದ ವರು ಸೇರಿ ಕುರಿ ಖರೀದಿ ಮಾಡಿ ಪಾಲು ಹಾಕಿ ಕೊಳ್ಳುತ್ತಾರೆ.

ಹದಿನೈದು ದಿನಗಳಲ್ಲಿ ನೂರಾರು ಕೋಟಿ ವೆಚ್ಚ ಮಾಡಿ ಸಂತೃಪ್ತಿಯಿಂದ ಘಮ,ಘಮ ಭೋಜನ ಸವಿಯುವುದು ಜಾತ್ರೆಯ ವಿಶೇಷ. ದೇವಿಯ ರಥೋತ್ಸವಕ್ಕೆ ಹೋರಿ( ಎತ್ತುಗಳು) ಹೊಸ ಗಾಡಿ ಖರೀದಿಸಿ ಶೃಂಗಾರ ಮಾಡಿ ಮನೆ ಮಂದಿಯೆಲ್ಲಾ ಹೋಗಿ ದರ್ಶನ ಪಡೆಯುವ ವಾಡಿಕೆ ಇದೆ.

ಮನೆಗಳಿಗೆ ಸುಣ್ಣ, ಬಣ್ಣ ಬಳಿದು ಕೇರಿಯ ತುಂಬಾ ವಿದ್ಯುತ್ ಅಲಂಕಾರ ಮಾಡುವುದು ಕೂಡ ವಿಶೇಷ. ದೇವಿಯ ಹಬ್ಬ ಅನಾದಿಕಾಲದಿಂದಲೂ ನಡೆದಿದೆ. ಇದನ್ನು ಉಳಿಸಿ ಬೆಳೆಸುತ್ತಿರುವುದು ಸಂಬಂಧ, ಸ್ನೇಹ ,ನೆಂಟರು,ಇಷ್ಟರನ್ನು ಒಂದಡೆ ಸೇರಿಸುವ ಬಾಂಧವ್ಯ ದ ಹಬ್ಬವನ್ನು ಇತ್ತೀಚಿನ ದಿನಗಳಲ್ಲಿ ವೈಭವದಿಂದ ಆಚರಣೆ ಮಾಡುತ್ತಿರುವುದು ವಿಶೇಷ ಎನ್ನಲಾಗುತ್ತದೆ.

ಬಡವ ಶ್ರೀಮಂತ ಎಂಬ ಭೇದ ಭಾವ ಇಲ್ಲದೆ ಇವ ನಮ್ಮವ,ಇವ ನಮ್ಮವ ಎನ್ನುವ ಸಂಸ್ಕೃತಿಗಳ ಸಡಗರ ತುಂಬಿದ ಹಬ್ಬಗಳನ್ನು ನೋಡಿಯಾದರು ದ್ವೇಷ, ಅಸೂಯೆ ಮರೆಯಾಗಲಿ.

Durgambha Devi Fair is a week of heat heat

Share

Leave a comment

Leave a Reply

Your email address will not be published. Required fields are marked *

Don't Miss

ಇಂಧನ ನಿಗಮದ ಅಧ್ಯಕ್ಷರಾಗಿ ಟಿ.ಡಿ.ರಾಜೇಗೌಡರ ಮತ್ತೆ ನೇಮಕ

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃಧ್ಧಿ ನಿಗಮದ ಅಧ್ಯಕ್ಷ ಸ್ಥಾನದಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರನ್ನು ಮುಂದುವರೆಯಲು ಆದೇಶವನ್ನು ನೀಡಲಾಗಿದೆ. ರಾಜೇಗೌಡರನ್ನು 2024 ರಲ್ಲಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಎರಡು ವರ್ಷದ ಅವಧಿಯ ನೇಮಕಾತಿ...

ಸಿ.ಡಿ.ಎ ಮಾಜಿ ಅಧ್ಯಕ್ಷ ಆನಂದ್ ಮೇಲೆ ಹಲ್ಲೆ …?

ಚಿಕ್ಕಮಗಳೂರು: ಮಾಜಿ ಸಚಿವ ಸಿ.ಟಿ.ರವಿ ಆಪ್ತ ಸುದರ್ಶನ್ ಬಲಗೈ ಬಂಟ ಹಾಲಿ ಮೂಗ್ತಿಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಆನಂದ್ ನ ರಸಲೀಲೆ ನಡೆಸುತ್ತಿದ್ದಾರೆ ಎಂದು ಕೆಲವರು ಹೋಮ್ ಸ್ಟೇಗೆ ನುಗ್ಗಿ ಗಲಾಟೆ...

Related Articles

ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನದದು ಕಳವು

ಚಿಕ್ಕಮಗಳೂರು : ತಾಲೂಕಿನ ಕಂಚೇನಹಳ್ಳಿಯಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು ರೈತ ಉಮೇಶ್ ಎಂಬುವವರ ಮನೆಯಿಂದ ಲಕ್ಷಾಂತರ...

ಲಾಭಾಂಶ ಆಮಿಷ ಯುವಕನಿಗೆ ಲಕ್ಷಾಂತರ ರೂಪಾಯಿ ವಂಚನೆ

ಚಿಕ್ಕಮಗಳೂರು: ಟ್ರೇಡಿಂಗ್ ಹೆಸರಿನಲ್ಲಿ ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ ಯುವಕನೊಬ್ಬನಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ...

ಸಿಡಿಎ ಅಧ್ಯಕ್ಷರಾಗಿ ಎಚ್‌.ಪಿ. ಮಂಜೇಗೌಡ ನೇಮಕ

ಚಿಕ್ಕಮಗಳೂರು: ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಸಿಡಿಎ) ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಪಿ. ಮಂಜೇಗೌಡ ಅವರನ್ನು...

ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ರಾಮಚಂದ್ರ ಬಿಗಿ ಪಟ್ಟು

ಚಿಕ್ಕಮಗಳೂರು: ಹಿರೇಮಗಳೂರು ರಾಮಚಂದ್ರ ಸಿ.ಡಿ.ಎ.ಅಧ್ಯಕ್ಷ ಸ್ಥಾನ ಪಡೆಯಲು ಬಿಗಿ ಪಟ್ಟು ಹಿಡಿದು ಒತ್ತಾಯ ಮಾಡುತ್ತಿದ್ದಾರೆ. ಕಳೆದ...