Home ಓದಿನ ಪ್ರಾಯದಲ್ಲಿ ದ್ವೇಷ – ಅಸೂಯೆಗೆ ಆಸ್ಪದ ಕೊಡದಿರಿ
HomechikamagalurLatest Newsnamma chikmagalur

ಓದಿನ ಪ್ರಾಯದಲ್ಲಿ ದ್ವೇಷ – ಅಸೂಯೆಗೆ ಆಸ್ಪದ ಕೊಡದಿರಿ

Share
????????????????????????????????????
Share

ಚಿಕ್ಕಮಗಳೂರು: ಓದಿನ ಪ್ರಾಯದಲ್ಲಿ ದ್ವೇಷ, ಅಸೂಯೆಗೆ ಆಸ್ಪದ ಕೊಡದೇ, ಮ ನದಾಳದಲ್ಲಿ ಜ್ಞಾನದೇಗುಲ ಸ್ಥಾಪಿಸಿ, ಕಲಿಕೆಗೆ ಒತ್ತು ನೀಡಬೇಕು. ರಾಷ್ಟ್ರ ಮೊದಲೆಂಬ ಚಿಂತನೆ ಮೈಗೂಡಿಸಿ ಕೊಂಡು ಜಗತ್ತಿನ ಎದುರು ಭಾರತವನ್ನು ಸದೃಡಗೊಳಿಸಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂ ಸ್ಥಾನದ ಮಠದ ಶ್ರೀ ನಿರ್ಮಲನಂದ ಸ್ವಾಮೀಜಿ ಹೇಳಿದರು.

ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ಪ್ರಥಮ ವರ್ಷದ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಎಐಟಿ ಕಾಲೇಜು ವತಿಯಿಂದ ಆಯೋಜಿಸಿದ್ಧ ‘ಫ್ರೆಶರ್ಸ್ ಡೇ-೨೦೨೫’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆರ್ಶೀವಚನ ನೀಡಿದರು.

ಮಕ್ಕಳು ಶಿಕ್ಷಣವಂತರಾಗಲು ಪಾಲಕರ ಶ್ರಮ ಬಹಳಷ್ಟಿದೆ. ಯುವಪೀಳಿಗೆ ಕೌಶಲ್ಯತೆ, ಕ್ರಿಯಾತ್ಮಕ ಚಟು ವಟಿಕೆ, ಶ್ರದ್ದೆ ಹಾಗೂ ಕಠಿಣ ಪರಿಶ್ರಮದಿಂದ ವ್ಯಾಸಂಗ ನಡೆಸಿದರೆ ಕುಟುಂಬ ಸೇರಿದಂತೆ ಭಾರತವು ಬಲಿಷ್ಟ ವಾಗಲಿದೆ. ಜೊತೆಗೆ ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರದ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪ್ರಸ್ತುತ ಕಾಲಘಟ್ಟದಲ್ಲಿ ವಿಜ್ಞಾನ ಕ್ಷೇತ್ರ ಮುಗಿಲೆತ್ತರಕ್ಕೆ ಬೆಳೆದುನಿಂತಿದೆ. ಜ್ಞಾನ, ತಂತ್ರಜ್ಞಾನ ವ್ಯಾಸಂಗಕ್ಕೆ ಸಮರ್ಪಕವಾಗಿ ವಿದ್ಯಾರ್ಥಿಗಳು ಬಳಸಿಕೊಂಡು ಸಾಧನೆ ಮಾಡಬೇಕು. ಕಲಿಕೆಯೆಂಬ ಹೋರಾಟದಲ್ಲಿ ಕೇ ವಲ ಅಂಕಗಳಿಗಷ್ಟೇ ಸೀಮಿತರಾಗದೇ, ಗುರು-ಹಿರಿಯರು ಧ್ಯೇಯಗಳನ್ನು ಎತ್ತಿಹಿಡಿಯವಂತ ಕೆಲಸವಾದರೆ ಸಾರ್ಥಕ ಬದುಕು ನಿಮ್ಮದಾಗಲಿದೆ ಎಂದು ತಿಳಿಸಿದರು.

ಪೂಜ್ಯ ಬಾಲಗಂಗಾಧರನಾಥ ಶ್ರೀಗಳು ೧೯೮೦ರ ವೇಳೆಯಲ್ಲಿ ನಾಡಿನ ಮಕ್ಕಳು ಅನಕ್ಷರತೆಯಿಂದ ಕೊರ ಗಬಾರದೆಂಬ ದೃಷ್ಟಿಯಿಂದ ಅಂದಿನ ಗ್ರಾಮೀಣ ಪ್ರದೇಶದ ಚಿಕ್ಕಮಗಳೂರಿನಲ್ಲಿ ಕಾಲೇಜು ಸ್ಥಾಪಿಸಿದ ಪರಿ ಣಾಮ ಲಕ್ಷಾಂತರ ಮಕ್ಕಳು ವಿದ್ಯಾವಂತರಾಗಿದ್ದಾರೆ. ಅಲ್ಲದೇ ಪೂಜ್ಯರು ದೇಶಗಟ್ಟಿಗೊಳಿಸುವ ಸಲುವಾಗಿ ವಿದ್ಯಾದಾನಕ್ಕೆ ಒತ್ತುಕೊಟ್ಟು ರಾಷ್ಟ್ರದ ಬೆಳವಣಿಗೆಗೆ ಶ್ರಮಿಸಿದವರು ಎಂದರು.

ಬಡವರು, ಕೂಲಿ ಕಾರ್ಮಿಕರು ವಿದ್ಯೆಯಿಂದ ವಂಚಿತರಾಗಬಾರದೆಂಬ ದೃಷ್ಟಿಯಿಂದ ಶ್ರೀಗಳು ಮುಂ ದಾಲೋಚಿಸಿ ಜಿಲ್ಲೆಯಲ್ಲಿ ಪರಿಣಿತ ಪ್ರಾಧ್ಯಾಪಕರನ್ನು ನೇಮಿಸಿಕೊಂಡು ಕಾಲೇಜು ಸ್ಥಾಪಿಸಿ ವಿದ್ಯೆಯನ್ನು ಕರು ಣಿಸಿದ ಮಹಾಚೇತನ. ಅವರ ಸನ್ಮಾರ್ಗದಲ್ಲಿ ವಿದ್ಯಾರ್ಥಿವೃಂದ ಸಾಗಬೇಕು. ದೊಡ್ಡಮಟ್ಟಿನಲ್ಲಿ ಸಾಧನೆ ಮಾ ಡಿ ಜಗತ್ತಿನ ಮುಂದೆ ಭಾರತ ಶಕ್ತಿಯುತಗೊಳಿಸಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ವಿವೇಕವಾಣಿಯಂತೆ ನಿಮ್ಮ ಬಾಳಿಗೆ, ನೀವೇ ಶಿಲ್ಪಿ ಗಳಾಗಲು ವಿದ್ಯಾರ್ಥಿಗಳು ಸಂಕಲ್ಪ ಮಾಡಿಕೊಳ್ಳಬೇಕು. ಕಲಿಕೆಯಲ್ಲಿ ಸತತ ಪರಿಶ್ರಮದಿಂದ ನಿಗಧಿತ ಗುರಿ ಯನ್ನು ಹೊಂದಿರಬೇಕು. ದೇಶಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಆತ್ಮನಿರ್ಭಾರತೆಯೊಂದಿಗೆ ಕೈಜೋಡಿಸಿ ದಾಗ ವಿಶ್ವದ ಮುಂದೆ ಭಾರತ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದರು.

ಸಮಾಜಕ್ಕೆ ಬೇಕಾದ ಆದರ್ಶ, ವ್ಯಕ್ತಿತ್ವಗಳನ್ನು ಸೃಷ್ಟಿಸುವುದರಲ್ಲಿ ಎಐಟಿ ವಿದ್ಯಾಸಂಸ್ಥೆ ಮಹತ್ತರ ಪಾತ್ರ ವನ್ನು ವಹಿಸುತ್ತಿದೆ. ದೃಢಸಂಕಲ್ಪ ಜೊತೆಗೆ ಸತತ ಪರಿಶ್ರಮ ಸೇರಿದಾಗ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ. ಭಾರತವಿಂದು ವಿಶ್ವಗುರುವಾಗುವತ್ತ ಹೆಜ್ಜೆ ಹಾಕುತ್ತಿದೆ. ಈ ವೇಳೆ ಜಗತ್ತಿಗೆ ಉದ್ಯೋಗದಾತರಾಗುವ ಹೊಣೆ ಭಾರತದ ಯುವಜನತೆ ಮೇಲಿದೆ ಎಂದು ತಿಳಿಸಿದರು.

ಸಿ.ಎಸ್.ಐ.ಆರ್. ಮುಖ್ಯ ವಿಜ್ಞಾನಿ ಡಾ|| ದಿನೇಶ್ ಎನ್.ನಾಗೇಗೌಡ ಮಾತನಾಡಿ ಜೀವನದ ಪ್ರತಿ ಕ್ಷೇತ್ರ ಗಳಲ್ಲೂ ಸವಾಲುಗಳಿವೆ. ಹಾಗೇಯ ವಿದ್ಯಾಕ್ಷೇತ್ರದಲ್ಲೂ ಏರು-ಪೇರುಗಳಿವೆ. ಬುದ್ದಿವಂತಿಕೆ, ಚಾಣಕ್ಯತನ ಹಾ ಗೂ ನಿರಂತರ ವ್ಯಾಸಂಗವೇ ಇಂಜಿನಿಯರ್‌ಗಳಿಗೆ ಭದ್ರಬುನಾದಿ ಹಾಗೂ ಭವಿಷ್ಯದಲ್ಲಿ ಬದುಕು ಕಟ್ಟಿಕೊಳ್ಳ ಲು ಸಾಧ್ಯವಾಗಲಿದೆ ಎಂದು ಹೇಳಿದರು.

ನಾಡಿನ ಕನ್ನಬಾಂಡಿ ಕಟ್ಟೆ ನಿರ್ಮಾತೃ ವಿಶ್ವೇಶ್ವರಯ್ಯ, ಬೇಲೂರು ಚೆನ್ನಕೇಶವ ದೇವಾಲಯ ಶಿಲ್ಪಿ ಜಕ ಣಾಚಾರಿಯವರು ಅಂದಿನ ಕಾಲದಲ್ಲೇ ಯಾವುದೇ ತಂತ್ರಜ್ಞಾನವಿಲ್ಲದೇ ಬುದ್ದಿಶಕ್ತಿಯಿಂದ ದೊಡ್ಡ ಇಂಜಿನಿ ಯರ್‌ಗಳಾಗಿ ಇಡೀ ವಿಶ್ವವೇ ಮೆಚ್ಚುವಂತ ಕೆಲಸವನ್ನು ಮಾಡಿದ್ದಾರೆ. ಅದರಂತೆ ಡಾ|| ಜೆ.ಪಿ.ಜೆ.ಅಬ್ದುಲ್ ಕಲಾಂ ಕೂಡಾ ಇಂಜಿನಿಯರ್‌ರಾಗಿ ಕಾರ್ಯನಿರ್ವಹಿಸಿದ್ದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಆದಿಚುಂಚನಗಿರಿ ಯೂನಿವರ್ಸಿಟಿ ರಿಜಿಸ್ಟರ್ ಡಾ|| ಸಿ.ಕೆ.ಸುಬ್ಬರಾಯ್, ಕಾಲೇಜು ಪ್ರಾಂಶುಪಾಲ ಡಾ|| ಸಿ.ಟಿ. ಜಯದೇವ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ವಕೀಲ ಪ್ರದೀಪ್‌ನಾಗರಾಜ್, ಕಾಲೇಜಿ ನ ವಿವಿಧ ವಿಭಾಗದ ಮುಖ್ಯಸ್ಥರಾದ ಡಾ|| ಜಿ.ಎಂ.ಸತ್ಯನಾರಾಯಣ್, ಡಾ|| ವೀರೇಂದ್ರ, ಡಾ|| ಸಂಪತ್, ಡಾ|| ಸುನೀತ, ಡಾ|| ದಿನೇಶ್, ಡಾ|| ಗೌತಮ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Don’t give room to hatred and jealousy during school age.

Share

Leave a comment

Leave a Reply

Your email address will not be published. Required fields are marked *

Don't Miss

ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯ

ಚಿಕ್ಕಮಗಳೂರು : ಇತಿಹಾಸ ಪ್ರಸಿದ್ಧ ಅಂತರಘಟ್ಟೆ ಜಾತ್ರಾ ಮಹೋತ್ಸವದಲ್ಲಿ ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯವಾಗಿದೆ. ರೇಸಿಗೆ ಬಿದ್ದ ಎತ್ತಿನಗಾಡಿಗಳ ಪೈಪೋಟಿ ಮಧ್ಯೆ ಎತ್ತಿನ ಗಾಡಿ ತೇರಿಗೆ ಡಿಕ್ಕಿಯೊಡೆದಿದೆ....

ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರ ಅಮಾನತು

ಚಿಕ್ಕಮಗಳೂರು: ಆಸ್ತಿ ಗುರುತಿನ ಸ್ವತ್ತಿನ ಚಕ್ಕುಬಂಧಿಯನ್ನು ಅಕ್ರಮವಾಗಿ ತಿದ್ದುಪಡಿ ಮಾಡಿರುವ ಹಿನ್ನೆಲೆಯಲ್ಲಿ ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಸೇವೆಯಿಂದ ಅಮಾನತ್ತುಗೊಳಿಸಿ ಬುಧವಾರ ಆದೇಶಿಸಿದ್ದಾರೆ. ಪಟ್ಟಣದ...

Related Articles

ಜಿಲ್ಲೆಯಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್ ಸ್ಥಾಪನೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಶನ್ ಸ್ಥಾಪಿಸಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ...

ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ

ಚಿಕ್ಕಮಗಳೂರು: ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ ಸಾಧನೆ ಮಾಡಿರುವ ಶಾಸಕರು ಉಳಿದಿರುವ...

ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನ ವಶ

ಚಿಕ್ಕಮಗಳೂರು : ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಕೆಎಂ ರಸ್ತೆಯ...

ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನದದು ಕಳವು

ಚಿಕ್ಕಮಗಳೂರು : ತಾಲೂಕಿನ ಕಂಚೇನಹಳ್ಳಿಯಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು ರೈತ ಉಮೇಶ್ ಎಂಬುವವರ ಮನೆಯಿಂದ ಲಕ್ಷಾಂತರ...