Home Latest News ಡಿ.ಸಿ.ಸಿ.ಬ್ಯಾಂಕ್ ಚುನಾವಣೆ – ದಿನಕ್ಕೊಂದು ಬಣ್ಣ, ಕ್ಷಣಕ್ಕೊಂದು ಬಣ್ಣ – ಕಾಂಗ್ರೆಸಿಗರ ಛೂಬಾಣ ?
Latest NewschikamagalurHomenamma chikmagalur

ಡಿ.ಸಿ.ಸಿ.ಬ್ಯಾಂಕ್ ಚುನಾವಣೆ – ದಿನಕ್ಕೊಂದು ಬಣ್ಣ, ಕ್ಷಣಕ್ಕೊಂದು ಬಣ್ಣ – ಕಾಂಗ್ರೆಸಿಗರ ಛೂಬಾಣ ?

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಚುನಾವಣೆ ಸೆಪ್ಟೆಂಬರ್ 13 ಕ್ಕೆ ನಿಗಧಿಯಾಗಿದೆ.ಕೂಲ್,ಕೂಲ್ ಚುನಾವಣೆ ನಡೆಯಬಹುದು ಎನ್ನುವಾಗ ದಿನಕ್ಕೊಂದು ಬಣ್ಣ, ಕ್ಷಣಕ್ಕೊಂದು ಬಣ್ಣ ಎಂಬ ಸನ್ನಿವೇಶ ಸೃಷ್ಟಿಯಾಗುತ್ತಿದೆ.

ಕಾಂಗ್ರೆಸ್ ಶಾಸಕರುಗಳಾದ ಜಿ.ಹೆಚ್.ಶ್ರೀನಿವಾಸ್, ಆನಂದ್ ಮತ್ತು ತಮ್ಮಯ್ಯ ಮುಖ್ಯಮಂತ್ರಿ ಬಳಿ ಹೋಗಿ ಚುನಾವಣೆ ನಡೆಸದಂತೆ ಮನವಿ ಮಾಡಿದ್ದಾರೆ ಆದರೆ ಈಗಾಗಲೇ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿರುವುದರಿಂದ ಚುನಾವಣೆ ನಿಲ್ಲಿಸುವುದು ಕಷ್ಟ, ಕಷ್ಟ. ಆದರೂ ಸರ್ಕಾರದ ತೀರ್ಮಾನ ಹೇಳುವುದಕ್ಕೆ ಸಾಧ್ಯವಿಲ್ಲ. ಕೊನೆಗೆ ನ್ಯಾಯಾಲಯದ ತೀರ್ಮಾನ ಅಂತಿಮ ಸೇರು ಸಾವಸೇರು ಎಂಬಂತೆ ಆಗಬಹುದು.

ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿರುವುದರಿಂದ ಸಹಕಾರ ಸಂಘಗಳು ಮತ್ತು ಇತರ ಸಂಘಗಳಿಂದ ಪ್ರತಿನಿಧಿಗಳ ಆಯ್ಕೆ ಮಾಡಲಾಗುತ್ತಿದೆ.ಆದರೆ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಸಮಸ್ಯೆ ಪ್ರಾರಂಭವಾಗಿದೆ.ಇಬ್ಬರು ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ.ಮತ್ತು ಎಸ್.ಎಲ್.ಬೋಜೇಗೌಡ ಚುನಾವಣೆಗೆ ಸ್ಪರ್ಧೆ ಮಾಡುವ ತಯಾರಿ ನಡೆಸಿರುವುದು ಕಗ್ಗಂಟು ಸೃಷ್ಟಿಗೆ ಕಾರಣವಾಗಿದೆ.ಸಿ.ಟಿ.ರವಿ ಮೂಗ್ತಿಹಳ್ಳಿ ಸಂಘದಿಂದ ಎಂಟ್ರಿ ಕೊಟ್ಟಿರುವುದು ಬೋಜೇಗೌಡ ಉದ್ದೇಬೋರನಹಳ್ಳಿ ಸಂಘದಿಂದ ಬರುವ ಸಾಧ್ಯತೆ ಹೆಚ್ಚಾಗಿರುವುದು ಸಮಸ್ಯೆ ಸೃಷ್ಟಿಸುವ ಸಾಧ್ಯತೆ ಹೆಚ್ಚಾಗಿದೆ.

ಇದರ ಮಧ್ಯೆ ಹಾಲಿ ಸದಸ್ಯರಾಗಿರುವ ನಿರಂಜನ್ ಮತ್ತು ಸತೀಶ್ ನಡೆಯ ಮೇಲೆ ಹೊಸ ದಿಕ್ಕಿನಡೆ ತಿರಗಬಹುದು.ಯಾರು ಯಾರು ಯಾವ ಆಟ ಆಡುತ್ತಾರೆ ಎಂಬ ಲೆಕ್ಕಾಚಾರ ಕೂಡ ನಡೆಯುತ್ತಿದೆ. ಸಿ.ಟಿ.ರವಿ ಸಮಯ ನೋಡಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.ಬೋಜೇಗೌಡರು ಕೂಡ ಸೇರಿ ಪ್ಲಾನ್ ಮಾಡಬಹುದು.ಆದರೆ ಇವುಗಳನ್ನು ನಿಯಂತ್ರಿಸುವ ಶಕ್ತಿ ಕೂಡ ತಳ್ಳಿ ಹಾಕುವಂತೆ ಇಲ್ಲ.

ಆಡಳಿತಾರೂಢ ಪಕ್ಷ ಕಾಂಗ್ರೆಸ್ ಸಹಕಾರ ಕ್ಷೇತ್ರದಲ್ಲಿ ನಿತ್ರಾಣ ಗೊಂಡಿರುವುದರಿಂದ ಬಿಜೆಪಿ ಬಡಿದಾಟದ ಲಾಭ ಪಡೆಯಲು ಪ್ರಯತ್ನ ಮಾಡಬಹುದು. ಬ್ಯಾಂಕ್ ಸೂಪರ್ ಸೀಡ್ ಮಾಡಿಸಬೇಕು ಎಂದು ಪ್ರಯತ್ನ ಅಂತಿಮವಾಗಿ ನ್ಯಾಯಾಲಯದ ತೀರ್ಪು ಹೀಗಾಗಿ ಸೇರಿಗೆ ಸವಾಸೇರು ಎಂಬಂತೆ ಆಗಿದೆ.

ತರೀಕೆರೆ ಕಡೂರು, ಶೃಂಗೇರಿ ಕ್ಷೇತ್ರದಲ್ಲಿ ಬಹುತೇಕ ಬಿಜೆಪಿಗೆ ಸಮಸ್ಯೆ ಇಲ್ಲ. ಮೂಡಿಗೆರೆ ಯಲ್ಲೂ ಸಮಸ್ಯೆ ಇಲ್ಲ ಆದರೆ ಇಲ್ಲಿ ತಟಸ್ಥವಾಗಿದ್ದಾರೆ. ತರೀಕೆರೆ ಶಾಸಕ ಶ್ರೀನಿವಾಸ್ ರೇವಣಸಿದ್ದೇಶ್ವರ ಸೊಸೈಟಿಯಿಂದ ಪ್ರತಿನಿಧಿಯಾಗಿರುವುದು ಕುತೂಹಲ ಹುಟ್ಟಿಸಿದರೆ ಕಡೂರು ಶಾಸಕ ಸುಮ್ಮನೆ ಇರುವುದಿಲ್ಲ ಚಿಕ್ಕಮಗಳೂರು ಶಾಸಕ ತಮ್ಮಯ್ಯ ಇತ್ತ ಬೋಜೇಗೌಡರನ್ನು ಬಿಡುವಂತಿಲ್ಲ ಸಿ.ಟಿ.ರವಿ ರವಿ ಸಹಿಸುವಂತಿಲ್ಲ.ಅಧಿಕಾರವಿದ್ದರು ಹೊಂದಾಣಿಕೆ ರಾಜಕಾರಣ ಸಮಸ್ಯೆ ಸೃಷ್ಟಿಸಿದೆ.

ಹಾಲು ಒಕ್ಕೂಟದ ಸಂಘಗಳಿಂದ ಸೋನಾಲ್ ಸ್ಪರ್ಧೆಗೆ ಜಗದೀಶ್ ಅಡ್ಡಲಾಗಿರುವುದು ಖಚಿತ. ಟಿ.ಎ.ಪಿ.ಸಿ.ಎಂ.ಸಿ ಯಿಂದ ಜೀವರಾಜ್ ತೀರ್ಮಾನ ಅಂತಿಮ ಇನ್ನುಳಿದಂತೆ ಇತರೆ ಸಹಕಾರ ಸಂಘಗಳಿಂದ ಹಾಲಿ ಸದಸ್ಯರಾದ ಟಿ.ಎಲ್. ರಮೇಶ್‌ ಚುನಾವಣೆ ನಡೆಸುವಷ್ಟೇ ಪ್ರಯತ್ನ ನಡೆಸಿದ್ದಾರೆ. ಆದರೆ ಈಶ್ವರಹಳ್ಳಿ ಮಹೇಶ್ ಮುಂದಿಟ್ಟು ಬಿಜೆಪಿ ಜನತಾದಳ ಆಟ ಆಡುತ್ತಾರೆ.

ಒಟ್ಟಾರೆ ಡಿಸಿಸಿ ಬ್ಯಾಂಕ್ ಚುನಾವಣೆ ಕುತೂಹಲ ಹುಟ್ಟಿಸಿದೆ ಯಾರು,ಯಾರು ಯಾವ,ಯಾವ ಆಟಾ ನಡೆಸುತ್ತಾರೆ ಯಾರಿಗೆ ಯಾರು ಪಾಠ ಕಲಿಸುತ್ತಾರೆ ಎಂಬುದು ರಹಸ್ಯವಾಗಿ ಉಳಿದಿಲ್ಲ. ಆಟ ನಡೆಯುತ್ತಿದೆ ಕಾಲ ಎಲ್ಲವನ್ನೂ ತಿಳಿಸುತ್ತದೆ ಕಾದು ನೋಡುವ.

DCC Bank Election – One color for each day  one color for each moment – Congressman’s trick?

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...