ಚಿಕ್ಕಮಗಳೂರು: ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಪರಿಶಿಷ್ಟ ಜಾತಿ ಮತ್ತು ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘ ಹಾಗೂ ವಿವಿಧ ಪ್ರಗತಿಪರ ಮುಖಂಡರುಗಳು ನಗರದ ಆಜಾ ದ್ಪಾರ್ಕ್ ವೃತ್ತದಲ್ಲಿ ಭಾನುವಾರ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಿದರು.
ಇದಕ್ಕೂ ಮುನ್ನ ತೇಗೂರು ಸಮೀಪದ ಬುದ್ಧ ವಿಹಾರ ಪಾಲ್ಗೊಂಡು, ನಂತರ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ಆಜಾದ್ಪಾರ್ಕ್ ನಲ್ಲಿ ಮುಖಂಡರುಗಳು ದಿನಾಚರಣೆ ಅಂಗವಾಗಿ ಪರಸ್ಪರ ಸಿಹಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ಕ ಎನ್.ರಾಜು, ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ್, ಸಂಘದ ಅಧ್ಯಕ್ಷ ಜವರಯ್ಯಮಾಗಡಿ, ಖಜಾ ಂಚಿ ಎಲ್.ಎಸ್.ರೇವಣ್ಣ, ಪ್ರಧಾನ ಕಾರ್ಯದರ್ಶಿ ವೀರಭದ್ರಯ್ಯ, ಉಪಾಧ್ಯಕ್ಷರಾದ ಅಣ್ಣಯ್ಯ, ಇಂದ್ರಮ್ಮ, ಕ್ರೀಡಾ ಕಾರ್ಯದರ್ಶಿ ಎಂ.ಆರ್.ಗಂಗಾಧರ್, ಸಹ ಕಾರ್ಯದರ್ಶಿಗಳಾದ ಡಿ.ಇ.ಅಣ್ಣಪ್ಪ, ಹೆಚ್.ಜೆ.ಪರಮೇ ಶ್ವರ್ ಮತ್ತಿತರರು ಹಾಜರಿದ್ದರು.
Constitution Day Celebration at Azad Park
Leave a comment