ಚಿಕ್ಕಮಗಳೂರು: ಹಿರೇಮಗಳೂರು ರಾಮಚಂದ್ರ ಸಿ.ಡಿ.ಎ.ಅಧ್ಯಕ್ಷ ಸ್ಥಾನ ಪಡೆಯಲು ಬಿಗಿ ಪಟ್ಟು ಹಿಡಿದು ಒತ್ತಾಯ ಮಾಡುತ್ತಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಕಟ್ಟಾಳು ರಾಮಚಂದ್ರ ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ರಾಮಚಂದ್ರ ಎಂದು ದುಡಿಯುತ್ತಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿ ಇರಲಿ ಬಿಡಲಿ ನನ್ನ ಕಾಂಗ್ರೆಸ್ ಎನ್ನುವ ರಾಮಚಂದ್ರ ಇದುವರೆವಿಗೂ ಯಾವ ಸ್ಥಾನ ಮಾನಕ್ಕಾಗಿ ಆಸೆ ಪಟ್ಟವರಲ್ಲಾ ರಾಮಚಂದ್ರ ಈಗ ಮೈ ಕೊಡವಿ ನಿಂತಿದ್ದಾರೆ. ಇದರಿಂದ ಕಾಂಗ್ರೆಸ್ ಮತ್ತು ಶಾಸಕ ಹೆಚ್.ಡಿ.ತಮ್ಮಯ್ಯಗೆ ಬಿಸಿ ತುಪ್ಪವಾಗಿದೆ.
ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಪ್ರಾರಂಭವಾದಾಗಿನಿಂದ ಎಲ್ಲಾ ಜಾತಿಯವರು ಅಧ್ಯಕ್ಷ ರಾಗಿದ್ದಾರೆ ಆದರೆ ಪರಿಶಿಷ್ಟ ಜಾತಿಯವರಿಗೆ ಅಧ್ಯಕ್ಷ ಸ್ಥಾನ ದೊರೆತಿಲ್ಲ ಈಗಲಾದರು ಅವಕಾಶ ಮಾಡಿಕೊಡಬೇಕು ಎಂಬ ಅದರಲ್ಲೂ ರಾಮಚಂದ್ರರವರಿಗೆ ಅವಕಾಶ ಕೊಡಬೇಕು ಎನ್ನುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಸಚಿವರ ಬಳಿಗೆ ತೆರಳಿ ಮನವಿ ಸಲ್ಲಿಸುತ್ತಿದ್ದಾರೆ. ಸಿ.ಡಿ.ಎ.ಅಧ್ಯಕ್ಷರ ಅವಧಿ ಮುಗಿದಿದ್ದು ಈಗಲಾದರೂ ಅವಕಾಶ ಕೊಡಿ ಎಂದು ದಲಿತ ಮುಖಂಡರ ಸಮೇತ ಮತ್ತೊಮ್ಮೆ ಮನವಿ ಸಲ್ಲಿಸಿ ಫೈಟ್ ಗೆ ತಯಾರಾಗಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ಕುರ್ಚಿ ದಂಗಲ್ ನಡೆಯುತ್ತಿರುವುದರಿಂದ 22 ಜನ ಶಾಸಕರ ನಿಗಮ ಮತ್ತು ಮಂಡಳಿ ಅಧ್ಯಕ್ಷರ ಅವಧಿ ಮುಗಿದಿದ್ದು ಮತ್ತೆ ಅವರನ್ನೇ ಮುಂದುವರೆಸಲಜ ಆದೇಶ ನೀಡಿ ಸದ್ಯಕ್ಕೆ ಬಾಚಾವ್ ಆಗಿದ್ದಾರೆ.
ಜಿಲ್ಲಾ ಮಟ್ಟದ ಮತ್ತು ಸ್ಥಳೀಯ ಪ್ರಾಧಿಕಾರದ ಅವಧಿ ಮುಗಿದಿರುವುದರಿಂದ ಇದೇ ನನ್ನ ಕೊನೆಯ ಪ್ರಯತ್ನ ಪರಿಶಿಷ್ಟ ಜಾತಿಯವರಿಗೆ ಈಗಲಾದರೂ ಅವಕಾಶ ಕೊಡಿ ಎನ್ನುವ ನನ್ನಂತ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಿದರೆ ತುಳಿತಕ್ಕೆ ಒಳಗಾದವರನ್ನು ಗುರ್ತಿಸಿದಂತೆ ಆಗುತ್ತದೆ ಎಂದು ಬಿಗ್ ಫೈಟ್ ಮಾಡುತ್ತಿರುವ ಪರಿಶಿಷ್ಟ ಜಾತಿ ಮುಖಂಡರಗಳ ಒಂದೇ ಹೆಸರು ರಾಮಚಂದ್ರ ಎನ್ನುತ್ತಿದ್ದಾರೆ.
ಪ್ರಥಮರಿಗೆ ಪರಿಶಿಷ್ಟ ಜಾತಿಯವರಿಗೆ ಸಿ.ಡಿ.ಎ ಅಧ್ಯಕ್ಷ ಸ್ಥಾನ ನೀಡಿದರೆ ಕಾಂಗ್ರೆಸ್ ದಾಖಲೆ ಬರೆಯುವ ಅವಕಾಶವಿದೆ ಎಂದು ಒತ್ತಡ ತರುತ್ತಿದ್ದಾರೆ. ನ್ಯೂಸ್ ಕಿಂಗ್ ಜೊತೆ ಮಾತನಾಡಿದ ರಾಮಚಂದ್ರ ನಾನು ಪಕ್ಷಕ್ಕೆ ಎಂದು ದ್ರೋಹ ಬಗೆದಿಲ್ಲ ಸೋತಾಗಲು ಪಕ್ಷದ ನಿಷ್ಠೆ ಹೊಂದಿ ಕೈಲಾದ ಕೆಲಸ ಮಾಡಿದ್ದೇನೆ ಇದು ನನ್ನ ಕೊನೆಯ ಪ್ರಯತ್ನ ಕೊಟ್ಟರೆ ಕಾಂಗ್ರೆಸ್ ಗೆ ಮತ್ತಷ್ಟು ಬಲ ತುಂಬುವೆ ಎನ್ನುತ್ತಾರೆ.
ರಾಮಚಂದ್ರರಂತಹ ಕಾರ್ಯಕರ್ತರನಿಗೆ ಅವಕಾಶ ಮಾಡಿಕೊಡುವ ಜವಾಬ್ದಾರಿ ಪಕ್ಷ ಮತ್ತು ಶಾಸಕರ ಕರ್ತವ್ಯ. ರಾಮಚಂದ್ರ ಬಿಗಿ ಪಟ್ಟು. ಚಿಕ್ಕಮಗಳೂರು: ಹಿರೇಮಗಳೂರು ರಾಮಚಂದ್ರ ಸಿ.ಡಿ.ಎ.ಅಧ್ಯಕ್ಷ ಸ್ಥಾನ ಪಡೆಯಲು ಬಿಗಿ ಪಟ್ಟು ಹಿಡಿದು ಒತ್ತಾಯ ಮಾಡುತ್ತಿದ್ದಾರೆ.
ಕಳೆದ ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಕಟ್ಟಾಳು ರಾಮಚಂದ್ರ ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ರಾಮಚಂದ್ರ ಎಂದು ದುಡಿಯುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇರಲಿ ಬಿಡಲಿ ನನ್ನ ಕಾಂಗ್ರೆಸ್ ಎನ್ನುವ ರಾಮಚಂದ್ರ ಇದುವರೆವಿಗೂ ಯಾವ ಸ್ಥಾನ ಮಾನಕ್ಕಾಗಿ ಆಸೆ ಪಟ್ಟವರಲ್ಲಾ
ರಾಮಚಂದ್ರ ಈಗ ಮೈ ಕೊಡವಿ ನಿಂತಿದ್ದಾರೆ. ಇದರಿಂದ ಕಾಂಗ್ರೆಸ್ ಮತ್ತು ಶಾಸಕ ಹೆಚ್.ಡಿ.ತಮ್ಮಯ್ಯಗೆ ಬಿಸಿ ತುಪ್ಪವಾಗಿದೆ. ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಪ್ರಾರಂಭವಾದಾಗಿನಿಂದ ಎಲ್ಲಾ ಜಾತಿಯವರು ಅಧ್ಯಕ್ಷ ರಾಗಿದ್ದಾರೆ ಆದರೆ ಪರಿಶಿಷ್ಟ ಜಾತಿಯವರಿಗೆ ಅಧ್ಯಕ್ಷ ಸ್ಥಾನ ದೊರೆತಿಲ್ಲ ಈಗಲಾದರು ಅವಕಾಶ ಮಾಡಿಕೊಡಬೇಕು ಎಂಬ ಅದರಲ್ಲೂ ರಾಮಚಂದ್ರರವರಿಗೆ ಅವಕಾಶ ಕೊಡಬೇಕು ಎನ್ನುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಸಚಿವರ ಬಳಿಗೆ ತೆರಳಿ ಮನವಿ ಸಲ್ಲಿಸುತ್ತಿದ್ದಾರೆ. ಸಿ.ಡಿ.ಎ.ಅಧ್ಯಕ್ಷರ ಅವಧಿ ಮುಗಿದಿದ್ದು ಈಗಲಾದರೂ ಅವಕಾಶ ಕೊಡಿ ಎಂದು ದಲಿತ ಮುಖಂಡರ ಸಮೇತ ಮತ್ತೊಮ್ಮೆ ಮನವಿ ಸಲ್ಲಿಸಿ ಫೈಟ್ ಗೆ ತಯಾರಾಗಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ಕುರ್ಚಿ ದಂಗಲ್ ನಡೆಯುತ್ತಿರುವುದರಿಂದ 22 ಜನ ಶಾಸಕರ ನಿಗಮ ಮತ್ತು ಮಂಡಳಿ ಅಧ್ಯಕ್ಷರ ಅವಧಿ ಮುಗಿದಿದ್ದು ಮತ್ತೆ ಅವರನ್ನೇ ಮುಂದುವರೆಸಲಜ ಆದೇಶ ನೀಡಿ ಸದ್ಯಕ್ಕೆ ಬಾಚಾವ್ ಆಗಿದ್ದಾರೆ.
ಜಿಲ್ಲಾ ಮಟ್ಟದ ಮತ್ತು ಸ್ಥಳೀಯ ಪ್ರಾಧಿಕಾರದ ಅವಧಿ ಮುಗಿದಿರುವುದರಿಂದ ಇದೇ ನನ್ನ ಕೊನೆಯ ಪ್ರಯತ್ನ ಪರಿಶಿಷ್ಟ ಜಾತಿಯವರಿಗೆ ಈಗಲಾದರೂ ಅವಕಾಶ ಕೊಡಿ ಎನ್ನುವ ನನ್ನಂತ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಿದರೆ ತುಳಿತಕ್ಕೆ ಒಳಗಾದವರನ್ನು ಗುರ್ತಿಸಿದಂತೆ ಆಗುತ್ತದೆ ಎಂದು ಬಿಗ್ ಫೈಟ್ ಮಾಡುತ್ತಿರುವ ಪರಿಶಿಷ್ಟ ಜಾತಿ ಮುಖಂಡರಗಳ ಒಂದೇ ಹೆಸರು ರಾಮಚಂದ್ರ ಎನ್ನುತ್ತಿದ್ದಾರೆ.
ಪ್ರಥಮರಿಗೆ ಪರಿಶಿಷ್ಟ ಜಾತಿಯವರಿಗೆ ಸಿ.ಡಿ.ಎ ಅಧ್ಯಕ್ಷ ಸ್ಥಾನ ನೀಡಿದರೆ ಕಾಂಗ್ರೆಸ್ ದಾಖಲೆ ಬರೆಯುವ ಅವಕಾಶವಿದೆ ಎಂದು ಒತ್ತಡ ತರುತ್ತಿದ್ದಾರೆ. ನ್ಯೂಸ್ ಕಿಂಗ್ ಜೊತೆ ಮಾತನಾಡಿದ ರಾಮಚಂದ್ರ ನಾನು ಪಕ್ಷಕ್ಕೆ ಎಂದು ದ್ರೋಹ ಬಗೆದಿಲ್ಲ ಸೋತಾಗಲು ಪಕ್ಷದ ನಿಷ್ಠೆ ಹೊಂದಿ ಕೈಲಾದ ಕೆಲಸ ಮಾಡಿದ್ದೇನೆ ಇದು ನನ್ನ ಕೊನೆಯ ಪ್ರಯತ್ನ ಕೊಟ್ಟರೆ ಕಾಂಗ್ರೆಸ್ ಗೆ ಮತ್ತಷ್ಟು ಬಲ ತುಂಬುವೆ ಎನ್ನುತ್ತಾರೆ.
ರಾಮಚಂದ್ರರಂತಹ ಕಾರ್ಯಕರ್ತರನಿಗೆ ಅವಕಾಶ ಮಾಡಿಕೊಡುವ ಜವಾಬ್ದಾರಿ ಪಕ್ಷ ಮತ್ತು ಶಾಸಕರ ಕರ್ತವ್ಯ.
CDA fight in Congress
Leave a comment