Home namma chikmagalur chikamagalur ಖಂಡ್ರೆ ಸಭೆಯಿಂದ ಕಾಡು ಪ್ರಾಣಿಗಳ “ಅನಾಹುತ” ನಿಲ್ಲಿಸಲು ಸಾಧ್ಯವೇ ?
chikamagalurHomeLatest Newsnamma chikmagalur

ಖಂಡ್ರೆ ಸಭೆಯಿಂದ ಕಾಡು ಪ್ರಾಣಿಗಳ “ಅನಾಹುತ” ನಿಲ್ಲಿಸಲು ಸಾಧ್ಯವೇ ?

Share
Share

ಅರಣ್ಯ ಸಚಿವ ಖಂಡ್ರೆ(ಕಂಡರೆ) ಆನೆ,ಹುಲಿ.ಸಿಂಹ,ಇಲಿ,ಪಲ್ಲಿಗಳು ನಡುಗುತ್ತವೆ ಎಂಬ ಭ್ರಮೆ ಯಲ್ಲಿ ಬಾಳೆ ಹೊನ್ನೂರಲ್ಲಿ ರೈತರು,ಬೆಳೆಗಾರರು ಮತ್ತು ವಿವಿಧ ಮುಖಂಡರುಗಳ ಸಭೆ ನಡೆಸಲಾಗಿದೆ.

ಖಂಡ್ರೆ ಬೆಟ್ಟ(ಗುಡ್ಡ) ಬಗೆದು ಇಲಿ ಹಿಡಿಯುವ ಪ್ರಯತ್ನ ನೋಡಿದರೆ ನಗೆ ಬರುತ್ತಿದೆ.ಮೂಲ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಬೇಕಾಗಿದೆ ಎನ್ನಿಸುತ್ತದೆ. ಕಾಡು ಪ್ರಾಣಿಗಳು ಕಾಡು ಬಿಟ್ಟು ನಾಡಿನಲ್ಲಿ ಸಂಚಾರ ಮಾಡುತ್ತಿರುವುದು ಮುಖ್ಯವಾಗಿ ಅರಣ್ಯ ಪ್ರದೇಶ ನಾಶವಾಗುತ್ತಿರುವುದು ಮುಖ್ಯ ಕಾರಣ.

ಇನ್ನೊಂದು ಕಾಡಿನಲ್ಲಿ ಪ್ರಾಣಿಗಳಿಗೆ ಬೇಕಾದ ಆಹಾರದ ಕೊರತೆ.ನೀರಿನ ಅಭಾವ ಜೊತೆಗೆ ಅರಣ್ಯ ಪ್ರದೇಶದಲ್ಲಿ ಹೋಮ್ ಸ್ಟೇ, ರೆಸಾರ್ಟ್ ರಸ್ತೆಗಳ ಅಭಿವೃದ್ಧಿ ಮತ್ತು ವಾಹನಗಳು ಹಾಗೂ ಜನರ ಓಡಾಟ ಹೆಚ್ಚಾಗಿರುವುದು ಮುಖ್ಯವಾದ ಕಾರಣಗಳು.ಇವಗಳ ಬಗ್ಗೆ ಗಮನ ಹರಿಸದೆ ಎಷ್ಟು ಸಭೆ ನಡೆಸಿದರೆ ಪ್ರಯೋಜನ ಆಗುವುದಿಲ್ಲ.

ಹೆಣದ ಮುಂದೆ ರಾಜಕಾರಣ ಮಾಡುವ ಜೀವರಾಜ್ ಅಂಡ್ ಟೀಮ್ ಸಭೆಗೆ ಬಾರದೆ ನಾಪತ್ತೆಯಾಗಿದ್ದು ಮಾತ್ರ ಸೋಜಿಗದ ವಿಷಯ ಎನ್ನಲು ಸಾಧ್ಯವಿಲ್ಲ. ಇವರುಗಳು ಸಭೆಗೆ ಬಂದು ಸಮಸ್ಯೆ ಬಗ್ಗೆ ಹೇಳದಿರುವುದು ನೋಡಿದರೆ ಕಾಡು ಪ್ರಾಣಿಗಳು ಜನರ ಜೀವ ತೆಗೆದರೆ ರಾಜಕಾರಣ ಮಾಡಬಹುದು ಎಂದು ತಿಳಿದಂತೆ ಕಾಣುತ್ತಿದೆ ಎಂದು ಹೇಳಲಾಗುತ್ತಿದೆ.

ಖಂಡ್ರೆ ಕೂಡ ಜನರ ಸಮಸ್ಯೆ ನೆಪದಲ್ಲಿ ಸಭೆ ನಡೆಸಿ ಹೋಗುವುದಕ್ಕಿಂತ ಬಾಳೆ ಹೊನ್ನೂರು ಸ್ವಾಮೀಜಿಯ ಕೃಪಕಾಟಕ್ಷದ ಜೊತೆಗೆ ಚಿಕ್ಕಮಗಳೂರಿನ ಬಸವ ಮಂದಿರದ ಕಾರ್ಯಕ್ರಮ ಮುಖ್ಯ ಎನ್ನಿಸುತ್ತಿದೆ.

ಖಂಡ್ರೆಗೆ ನಿಜವಾದ ಕಾಳಜಿ ಇದ್ದರೆ ಪ್ರಾಣಿಗಳಿಂದ ಆಗುತ್ತಿರುವ ಅನಾಹುತ ತಡೆಯ ಬೇಕಾದರೆ ಒತ್ತುವರಿಯಾಗಿರುವ ಅರಣ್ಯ ಪ್ರದೇಶ ಗುರ್ತಿಸಿ ತೆರುವು ಗೊಳಿಸ ಬೇಕು.ಅರಣ್ಯ ಇಲಾಖೆಯವರು ಪ್ರಾಣಿಗಳ ರಕ್ಷಣೆಗೆ ಬೇಕಾದ ಅಭಿವೃದ್ಧಿ ಕೆಲಸದಲ್ಲಿ ಲೂಟಿ ಮಾಡುತ್ತಿರುವುದನ್ನು ತಡೆಯಬೇಕು

ಇದಕ್ಕೆ ಆದ್ಯತೆ ಕೊಡುವುದು ಬಿಟ್ಟು ಕಾಟಚಾರಕ್ಕೆ ಸಭೆ ನಡೆಸಿ ಕಾಫಿ,ಕುಡಿದು ತಿಂಡಿ ತಿಂದು ಹಾರ,ತುರಾಯಿ ಹಾಕಿಸಿ ಕೊಂಡು ಹೋದರೆ ಪ್ರಯೋಜನ ಏನು? ಈಗಾಗಲೇ ಜಿಲ್ಲೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನ ಆನೆ ತುಳಿತದಿಂದ ಸಾವಪ್ಪಿದರೆ ಕಾಡು ಕೋಣಗಳಿಂದ ಹಲವರಿಗೆ ಅನಾಹುತವಾಗಿದೆ.

ಕಾಡು ಹಂದಿಗಳು ರೈತರು ಬೆಳೆದ ಬೆಳೆ ನಾಶಮಾಡಿವೆ.ಇದಕ್ಕೆ ತಕ್ಷಣ ಪರಿಹಾರ ನೀಡ ಬೇಕು. ಖಂಡ್ರೆ, ಖಂಡ್ರೆ ಕಂಡರೆ ಕಾಡು ಪ್ರಾಣಿಗಳು ಹೋಗುವುದಿಲ್ಲ ಸಭೆ ನಡೆಸಿದರೆ ಪ್ರಯೋಜನ ಆಗುವುದಿಲ್ಲ ಎಂಬ ಸಾಮಾನ್ಯ ತಿಳುವಳಿಕೆ ಇಲ್ಲದವರಿಂದ ನಿರೀಕ್ಷೆ ಮಾಡುವುದು ಮೂರ್ಖತನ ಎನ್ನಲೇ ಬೇಕಾಗುತ್ತದೆ.

Can the Khandre Sabha stop the “disaster” of wild animals?

Share

Leave a comment

Leave a Reply

Your email address will not be published. Required fields are marked *

Don't Miss

ಇಬ್ಬರು ಅಮಾಯಕರನ್ನು ಬಲಿಪಡೆದಿದ್ದ ಕಾಡಾನೆ ಸೆರೆ

ಚಿಕ್ಕಮಗಳೂರು: ಕಳೆದ ಒಂದು ವಾರದಿಂದ ಮಲೆನಾಡಿಗರ ನಿದ್ದೆಗೆಡಿಸಿ, ಇಬ್ಬರು ಅಮಾಯಕರನ್ನು ಬಲಿಪಡೆದಿದ್ದ ರಕ್ಕಸ ಕಾಡಾನೆ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ. ಭಾನುವಾರ ಬೆಳಿಗ್ಗೆ ಮತ್ತೊಬ್ಬ ಕಾರ್ಮಿಕ ಮಹಿಳೆಯನ್ನು ಭೀಕರವಾಗಿ ಕೊಂದ...

ಆಸ್ತಿ ವಿವಾದ – ಪೊಲೀಸ್ ಠಾಣೆಯ ಮುಂದೆಯೇ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಆಸ್ತಿ ವಿವಾದವೊಂದು ಭೀಕರ ಸ್ವರೂಪ ಪಡೆದುಕೊಂಡಿದೆ. ತಂದೆ ತಾಯಿ ಹಾಗೂ ತಂಗಿಯನ್ನು ಕಳೆದುಕೊಂಡು ಅನಾಥನಾಗಿದ್ದ ಯುವಕನೋರ್ವ ಪೊಲೀಸ್ ಠಾಣೆಯ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಾಫಿನಾಡನ್ನು ಬೆಚ್ಚಿಬೀಳಿಸಿದೆ. ನಗರದ ಪುನೀತ್‌...

Related Articles

ಭೀಕರ ಕೊಲೆ ಆರೋಪಿಗೆ ಜೈಲು ಶಿಕ್ಷೆ-ದಂಡ

ಮೂಡಿಗೆರೆ: ತಾಲೂಕಿನ ಕುನ್ನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣದ ಆರೋಪಿಗೆ ಚಿಕ್ಕಮಗಳೂರಿನ ಜಿಲ್ಲಾ ಮತ್ತು...

ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಎಸ್.ಎಲ್.ಭೋಜೇಗೌಡ

ಚಿಕ್ಕಮಗಳೂರು: ದುಬೈ ವಿಮಾನ ನಿಲ್ದಾಣದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಸಿಲುಕಿದ್ದಾರೆ. ದುಬೈ ವಿಮಾನ ನಿಲ್ದಾಣದಿಂದ...

ಬಾಳೆಹೊನ್ನೂರಿನಲ್ಲಿ ನಡೆದ ಸಭೆಯಲ್ಲಿ ಅರಣ್ಯ ಸಚಿವರ ಭಾಷಣಕ್ಕೆ ಅಡ್ಡಿ

ಎನ್.ಆರ್ ಪುರ: ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ...

ಹಳೇ ವೈಷಮ್ಯದ ಹಿನ್ನೆಲೆ ವ್ಯಕ್ತಿಯ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ

ಚಿಕ್ಕಮಗಳೂರು: ಹಳೇ ವೈಷಮ್ಯದ ಹಿನ್ನೆಲೆ ವ್ಯಕ್ತಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು...