Home namma chikmagalur chikamagalur ಕಾಂಗ್ರೆಸ್‌ನ ಮುಸ್ಲಿಂ ಮುಖಂಡ ರಾಹಿಲ್ ಷರೀಫ್‌ ಬಂದನಕ್ಕೆ ಬಿಜೆಪಿ ಆಗ್ರಹ
chikamagalurHomeLatest Newsnamma chikmagalur

ಕಾಂಗ್ರೆಸ್‌ನ ಮುಸ್ಲಿಂ ಮುಖಂಡ ರಾಹಿಲ್ ಷರೀಫ್‌ ಬಂದನಕ್ಕೆ ಬಿಜೆಪಿ ಆಗ್ರಹ

Share
Share

ಚಿಕ್ಕಮಗಳೂರು : ಇತ್ತೀಚೆಗೆ ದಲಿತ ಮಹಿಳೆಯೋರ್ವರ ಮೇಲೆ ಹಲ್ಲೆ ನಡೆಸಿರುವ ಕಾಂಗ್ರೆಸ್‌ನ ಮುಸ್ಲಿಂ ಮುಖಂಡ ರಾಹಿಲ್ ಷರೀಫ್‌ನನ್ನು ಕೂಡಲೇ ಬಂಧಿಸಬೇಕೆಂದು ಬಿಜೆಪಿ ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಕೆ.ಪಿ ವೆಂಕಟೇಶ್ ಆಗ್ರಹಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿಂದು ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ಒಂದು ತಿಂಗಳ ಅವಧಿಯಲ್ಲಿ ಒಟ್ಟು ೫ ದಲಿತದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.

ಚಿಕ್ಕಮಗಳೂರು ವಿಧಾನಸಭಾಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಸ್ಥಳೀಯ ಶಾಸಕರೂ ಮತ್ತು ಪೋಲಿಸ್ ಇಲಾಖೆಯ ವೈಫಲ್ಯದಿಂದ ದಲಿತರಿಗೆ ರಕ್ಷಣೆ ಇಲ್ಲದಂತಾಗಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಬಿಜೆಪಿ ಎಸ್ಸಿ ಮೋರ್ಚಾದ ವತಿಯಿಂದ ನಗರಬಂದ್‌ಗೆ ಕರೆನೀಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇತ್ತೀಚೆಗೆ ಕಾಂಗ್ರೆಸ್‌ನ ಮುಸ್ಲಿಂ ಮುಖಂಡ ರಾಹೀಲ್ ಷರೀಫ್ ಚೇತನಾ ಎಂಬ ದಲಿತ ಮಹಿಳೆ ಹಾಗೂ ಅವರ ಪತಿಗೂ ಮಚ್ಚಿನಿಂದ ಬೀಸಿ ಹಲ್ಲೆ ಮಾಡಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ದಲಿತ ಜನಾಂಗಕ್ಕೆ ಜಾತಿ ನಿಂದನೆ ಮಾಡಿರುತ್ತಾನೆ.

ಈ ಪ್ರಕರಣದಲ್ಲಿ ಆ ರಾಹೀಲ್ ಷರೀಫ್ ಎ-೧ ಆಗಿದ್ದರೂ ಸಹ ಪೊಲೀಸ್ ಇಲಾಖೆಯವರು ೮ ಜನರ ಮೇಲೆ ಎಫ್‌ಐಆರ್ ದಾಖಲಿಸಿರುತ್ತಾರೆ. ಇದರಲ್ಲಿ ರಾಹೀಲ್ ಷರೀಫ್ ಎ-೧ ಆರೋಪಿಯಾಗಿದ್ದರೂ ಇಲ್ಲಿಯವರೆಗೂ ಬಂಧಿಸಿರುವುದಿಲ್ಲಎಂದು ಆರೋಪಿಸಿದರು.

ಹಿಂದೆ ಇದೇ ಇದೇ ವ್ಯಕ್ತಿ ಡಾ.ಬಿ. ಆರ್. ಅಂಬೇಡ್ಕರ್ ರಸ್ತೆಯಲ್ಲಿ ವಾಸವಾಗಿರುವ ದಲಿತ ಯುವಕ ಅವರ ಸ್ನೇಹಿತೆಯನ್ನು ಮೋಟಾರ್ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ಎಂಬ ನೆಪದಲ್ಲಿ ಅಡ್ಡಗಟ್ಟಿ ಹಲ್ಲೆಯನ್ನು ನಡೆಸಿರುತ್ತಾನೆ.

ಇವನಿಗೆ ರಾಜಕೀಯ ಬೆಂಬಲವಿರುವುದರಿಂದ ಚಿಕ್ಕಮಗಳೂರು ಶಾಸಕರ ಕುಮ್ಮಕ್ಕು ಇರುವುದರಿಂದ ನಿರಂತರವಾಗಿ ಘಟನೆಗಳು ನಡೆಯುತ್ತಿದೆ. ಹಾಗೂ ಫೆಬ್ರವರಿ ತಿಂಗಳಿನಲ್ಲಿ ಮುಸ್ಲಿಂ ಕಿಡಿಗೇಡಿಗಳಿಂದ ದಲಿತರ ಮೇಲೆ ೫ ದೌರ್ಜನ್ಯ ಘಟನೆಗಳು ನಡೆದರೂ ದಲಿತರ ಓಟ್ ಬ್ಯಾಂಕ್ ಪಡೆದು ದಲಿತರಿಗೆ ರಕ್ಷಣೆ ಕೊಡದ ಶಾಸಕ ಎಚ್.ಡಿ ತಮ್ಮಯ್ಯರವರು ವರ್ತನೆ ಖಂಡನೀಯ ಎಂದರು.

ಇದರ ಹಿಂದೆ ಸಿ.ಟಿ.ರವಿ ೨೦ ವರ್ಷಶಾಸಕರಾಗಿದ್ದ ಅವಧಿಯಲ್ಲಿ ಇಂತಹ ಘಟನೆಗಳಿಗೆ ಅವಕಾಶ ಮಾಡಿಕೊಡುತ್ತಿರಲಿಲ್ಲ.ದಲಿತರಿಗೆ ಸಮಾನತೆ, ಅಧಿಕಾರ, ಗೌರವ, ಪ್ರೀತಿ ಮತ್ತು ಅಭಿವೃದ್ಧಿ ಇಷ್ಟನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದ್ದರು. ಈಗಿನ ಶಾಸಕರು ದಲಿತರ ಬಗ್ಗೆ ಕಾಳಜಿ ಇಲ್ಲದ ಶಾಸಕರಾಗಿದ್ದಾರೆ.

ಇವುಗಳ ಬಗ್ಗೆ ಸಮೂದಾಯದವರು ವಿಮರ್ಶೆ ಮಾಡಿಕೊಳ್ಳ ಬೇಕಾಗುತ್ತದೆ ಎಂದರು. ಗೋಷ್ಟಿಯಲ್ಲಿ ಮುಖಂಡರಾದ ಕೊಲ್ಲಭೋವಿ,ಕೇಶವಮೂರ್ತಿ,ಬೀರಪ್ಪ,ಯತೀಶ್,ಹಂಪಯ್ಯ,ರೇವನಾಥ್, ಕೇಶವ ಇದ್ದರು.

BJP demands arrest of Congress’ Muslim leader Raheel Sharif

Share

Leave a comment

Leave a Reply

Your email address will not be published. Required fields are marked *

Don't Miss

ಶೃಂಗೇರಿ ಕ್ಷೇತ್ರದಲ್ಲಿ ಆನೆಗಳ ಕಾಟ-ರಾಜಕೀಯದವರ ತಿಕ್ಕಾಟ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಗೂ ಕಾಡು ಪ್ರಾಣಿಗಳಿಗೂ ಅವಿನಾಭಾವ ಸಂಬಂಧ. ಆನೆಗಳು, ಕಾಡು ಕೋಣಗಳು,ಜಿಂಕೆ, ಸಾರಂಗ, ಚಿರತೆ,ಹುಲಿಗಳು ಸಾಮಾನ್ಯ. ಆದರೆ ಎಂದೂ ಮನುಷ್ಯರ ಜೊತೆಗೆ ಸಂಘರ್ಷ ಇರಲಿಲ್ಲ.ಆದರೆ ಇಂದು ‌ಮನುಷ್ಯನ ಜೀವ ತೆಗೆಯುತ್ತಿರುವ...

ಜೀವಹಾನಿ ತಪ್ಪಿಸಲು ಕರ್ನಾಟಕ ರಾಜ್ಯ ರೈತ ಸಂಘ ಮನವಿ

ಚಿಕ್ಕಮಗಳೂರು: ಜಿಲ್ಲೆಯ ಕಾಡಂಚಿನ ಗ್ರಾಮಗಳೂ ಸೇರಿದಂತೆ ಕಾಡುಪ್ರಾಣಿಗಳಿಂದ ಆಗುತ್ತಿರುವ ಜೀವಹಾನಿಯನ್ನು ತಪ್ಪಿಸಲು ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಶಾಖೆ ಇಂದು...

Related Articles

ಅಫ್ ರೇಟ್-ಚೀಫ್ ರೇಟ್ ಅಜ್ಜಂಪುರದಲ್ಲಿ ವಂಚಕರು ಜಾಲ

ಅಜ್ಜಂಪುರ: ಅಫ್ ರೇಟ್ ಚೀಫ್ ರೇಟ್ ಎಂದು ಜನರನ್ನು ನಂಬಿಸಿ ವಂಚನೆ ಮಾಡುವವರು ಅಂಗಡಿ ತೆರೆದು...

ಸಂತ್ರಸ್ತರಿಗೆ ನೆರವು ನೀಡಲು ರಾಜ್ಯ ಸರ್ಕಾರವು ತುರ್ತು ಕ್ರಮ

ಚಿಕ್ಕಮಗಳೂರು: ಮಧ್ಯಪ್ರಾಚ್ಯದ ದೇಶಗಳಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಅಂತರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದು,...

ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಹಿಲ್ ಶರೀಫ್ ಪಕ್ಷದಿಂದ ಉಚ್ಚಾಟನೆ

ಚಿಕ್ಕಮಗಳೂರು: ಜಿಲ್ಲಾ ಯುವ ಕಾಂಗ್ರೆಸ್ ಘಟಕದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಅಸಭ್ಯ ವರ್ತನೆಯ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ...

ಮೂಡಿಗೆರೆ ಪೊಲೀಸ್ ಠಾಣೆಯ ಒಳಗೆ ಕತ್ತಿ ಹಿಡಿದು ದಾಂಧಲೆ

ಮೂಡಿಗೆರೆ: ವೆಲ್ಡಿಂಗ್ ವಿಚಾರದ ಗಲಾಟೆಯು ಕೊಲೆಯಲ್ಲಿ ಅಂತ್ಯವಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ....