ಚಿಕ್ಕಮಗಳೂರು: ಭಾರತೀಯ ಜನತಾ ಪಕ್ಷದಲ್ಲಿ ಸಸ್ಪೆಂಡ್ ಯುಗ ಪ್ರಾರಂಭವಾಗಿದೆ. ಇನ್ನೂ ಎಷ್ಟು ಜನಕ್ಕೆ ಸಸ್ಪೆಂಡ್ ಸಿಟಿ.ಹೊಡೆಯಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ.ಯಾರನ್ನು ಸಸ್ಪೆಂಡ್ಮಾಡಬೇಕು ಯಾರಿಗೆ ಅತಿಥ್ಯ ನೀಡಬೇಕು ಎಂಬುದು ಪಕ್ಷಕ್ಕೆ ಬಿಟ್ಟ ವಿಚಾರ. ಆದರೆ ಅತಿಥ್ಯ ನೀಡುವಾಗ ಅವರ ಘನ ಕಾರ್ಯಗಳ ಅವಲೋಕನ ಮಾಡಬೇಕಲ್ಲವೇ?
ನಿರಂಜನ್ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಮತ್ತು ಹಿಂದೆ ವಿಧಾನ ಪರಿಷತ್ ಮತ್ತು ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದಾರೆ ಎಂದು ಕಾರಣ ನೀಡಲಾಗಿದೆ. ಹೌದು ಡಿ.ಸಿ.ಸಿ. ಬ್ಯಾಂಕ್ ಚುನಾವಣೆಯಲ್ಲಿ ರಾಜಕೀಯ ಸಲ್ಲದು ಎಂದು ಭಾಷಣ ಬಿಗಿಯುವವರು ಪಕ್ಷ ಹೇಳಿದ ಅಭ್ಯರ್ಥಿ ವಿರುದ್ದ ಸ್ಪರ್ಧೆ ಮಾಡಿರುವುದಕ್ಕೆ ಸಸ್ಪೆಂಡ್ ಭಾಗ್ಯ ಕೊಡಲಾಗಿದೆ.
ಆನಂದ್ ನಗರದ ಸಿ,ಡಿ,ಎ ಅಧ್ಯಕ್ಷನಾಗಿದ್ದವನು ಮಹಿಳೆ ಯೊಂದಿಗೆ ಇರುವಾಗ ಬಿಜೆಪಿಯವರು ತದಕಿ ಹಾದಿ ರಂಪ ಬೀದಿ ರಂಪವಾಗಿ ಎಲ್ಲೆಡೆಯೂ ವಿಡಿಯೋ ಹರಿದಾಡಿದರೂ ಪಕ್ಷಕ್ಕೆ ಮುಜುಗರ ತಂದಿಲ್ಲಾವೇ? ಆದರೆ ಇದುವರೆವಿಗೂ ಆತನ ಸಸ್ಪೆಂಡ್ ಆಗದಿರುವುದರ ರಹಸ್ಯ ಏನಿರಬಹುದು? ಆನಂದ್ ಹಿನ್ನೆಲೆ ಕೆದಕಿದರೆ ಬಹಳಷ್ಟು ವಿಷಯಗಳಿವೆ ಎಂದು ಬಿಜೆಪಿಯಲ್ಲಿ ಮಾತನಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಸಿ.ಟಿ.ರವಿ ಬ್ಯಾಂಕ್ ನ ಅಧ್ಯಕ್ಷ ಸ್ಥಾನ ಸ್ವೀಕರಿಸಿದ ದಿನ ನಿರಂಜನ್ ಗೆ ಸಸ್ಪೆಂಡ್ ಪತ್ರ ತಲುಪಿದರೆ ಆನಂದ್ ಪತ್ರಿಕೆಗಳು ಮತ್ತು ನ್ಯೂಸ್ ಚಾನಲ್ ಗಳು ಸುದ್ದಿ ಪ್ರಸಾರ ಮಾಡಬಾರುದು ಎಂದು ಕೋರ್ಟ್ ಆದೇಶದ ಪ್ರತಿ ಕೊಡಿಸುತ್ತಾರೆ.
ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂದು ಜನ ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುತ್ತಿದ್ದಾರೆ.ಹೇಳುವುದು ವೇದ ತಿನ್ನುವುದು ಬದನೆಯಕಾಯಿ ಎಂದು ಹಿರಿಯರೊಬ್ಬರು ಹೇಳಿದ ಮಾತು ತಲೆಯಲ್ಲಿ ಹುಳ ಬಿಟ್ಟಂತೆ ಆಗಿದೆ.
Bhaja Bhajantri Niranjan suspended in BJP! Guest for Anand?
Leave a comment