Home namma chikmagalur chikamagalur ಬಿ.ಜೆ.ಪಿಯಲ್ಲಿ ಭಾಜಾ ಭಜಂತ್ರಿ ನಿರಂಜನ್ ಸಸ್ಪೆಂಡ್ ! ಆನಂದ್ ಗೆ ಅತಿಥ್ಯ ?
chikamagalurHomeLatest Newsnamma chikmagalur

ಬಿ.ಜೆ.ಪಿಯಲ್ಲಿ ಭಾಜಾ ಭಜಂತ್ರಿ ನಿರಂಜನ್ ಸಸ್ಪೆಂಡ್ ! ಆನಂದ್ ಗೆ ಅತಿಥ್ಯ ?

Share
Share

ಚಿಕ್ಕಮಗಳೂರು: ಭಾರತೀಯ ಜನತಾ ಪಕ್ಷದಲ್ಲಿ ಸಸ್ಪೆಂಡ್ ಯುಗ ಪ್ರಾರಂಭವಾಗಿದೆ. ಇನ್ನೂ ಎಷ್ಟು ಜನಕ್ಕೆ ಸಸ್ಪೆಂಡ್ ಸಿಟಿ.ಹೊಡೆಯಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ.ಯಾರನ್ನು ಸಸ್ಪೆಂಡ್ಮಾಡಬೇಕು ಯಾರಿಗೆ ಅತಿಥ್ಯ ನೀಡಬೇಕು ಎಂಬುದು ಪಕ್ಷಕ್ಕೆ ಬಿಟ್ಟ ವಿಚಾರ. ಆದರೆ ಅತಿಥ್ಯ ನೀಡುವಾಗ ಅವರ ಘನ ಕಾರ್ಯಗಳ ಅವಲೋಕನ ಮಾಡಬೇಕಲ್ಲವೇ?

ನಿರಂಜನ್ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಮತ್ತು ಹಿಂದೆ ವಿಧಾನ ಪರಿಷತ್ ಮತ್ತು ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದಾರೆ ಎಂದು ಕಾರಣ ನೀಡಲಾಗಿದೆ. ಹೌದು ಡಿ.ಸಿ.ಸಿ. ಬ್ಯಾಂಕ್ ಚುನಾವಣೆಯಲ್ಲಿ ರಾಜಕೀಯ ಸಲ್ಲದು ಎಂದು ಭಾಷಣ ಬಿಗಿಯುವವರು ಪಕ್ಷ ಹೇಳಿದ ಅಭ್ಯರ್ಥಿ ವಿರುದ್ದ ಸ್ಪರ್ಧೆ ಮಾಡಿರುವುದಕ್ಕೆ ಸಸ್ಪೆಂಡ್ ಭಾಗ್ಯ ಕೊಡಲಾಗಿದೆ.

ಆನಂದ್ ನಗರದ ಸಿ,ಡಿ,ಎ ಅಧ್ಯಕ್ಷನಾಗಿದ್ದವನು ಮಹಿಳೆ ಯೊಂದಿಗೆ ಇರುವಾಗ ಬಿಜೆಪಿಯವರು ತದಕಿ ಹಾದಿ ರಂಪ ಬೀದಿ ರಂಪವಾಗಿ ಎಲ್ಲೆಡೆಯೂ ವಿಡಿಯೋ ಹರಿದಾಡಿದರೂ ಪಕ್ಷಕ್ಕೆ ಮುಜುಗರ ತಂದಿಲ್ಲಾವೇ? ಆದರೆ ಇದುವರೆವಿಗೂ ಆತನ ಸಸ್ಪೆಂಡ್ ಆಗದಿರುವುದರ ರಹಸ್ಯ ಏನಿರಬಹುದು? ಆನಂದ್ ಹಿನ್ನೆಲೆ ಕೆದಕಿದರೆ ಬಹಳಷ್ಟು ವಿಷಯಗಳಿವೆ ಎಂದು ಬಿಜೆಪಿಯಲ್ಲಿ ಮಾತನಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಸಿ.ಟಿ.ರವಿ ಬ್ಯಾಂಕ್ ನ ಅಧ್ಯಕ್ಷ ಸ್ಥಾನ ಸ್ವೀಕರಿಸಿದ ದಿನ ನಿರಂಜನ್ ಗೆ ಸಸ್ಪೆಂಡ್ ಪತ್ರ ತಲುಪಿದರೆ ಆನಂದ್ ಪತ್ರಿಕೆಗಳು ಮತ್ತು ನ್ಯೂಸ್ ಚಾನಲ್ ಗಳು ಸುದ್ದಿ ಪ್ರಸಾರ ಮಾಡಬಾರುದು ಎಂದು ಕೋರ್ಟ್ ಆದೇಶದ ಪ್ರತಿ ಕೊಡಿಸುತ್ತಾರೆ.

ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂದು ಜನ ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುತ್ತಿದ್ದಾರೆ.ಹೇಳುವುದು ವೇದ ತಿನ್ನುವುದು ಬದನೆಯಕಾಯಿ ಎಂದು ಹಿರಿಯರೊಬ್ಬರು ಹೇಳಿದ ಮಾತು ತಲೆಯಲ್ಲಿ ಹುಳ ಬಿಟ್ಟಂತೆ ಆಗಿದೆ.

Bhaja Bhajantri Niranjan suspended in BJP! Guest for Anand?

Share

Leave a comment

Leave a Reply

Your email address will not be published. Required fields are marked *

Don't Miss

ಬಿಜೆಪಿ ಹೊಸದಾಗಿ ಗಾಂಧೀಜಿ ಬಗ್ಗೆ ಮಾತನಾಡಲು ಹೊರಟಿರುವುದು ಹಾಸ್ಯಾಸ್ಪದ

ಚಿಕ್ಕಮಗಳೂರು: ‘ಗಾಂಧಿ ಹೆಸರಿನಲ್ಲಿ ಕಾಂಗ್ರೆಸ್ಸಿಗರು ನುಂಗಣ್ಣರು’ ಎಂದು ಬಿಜೆಪಿ ನೀಡಿರುವ ಜಾಹೀರಾತು ಮತ್ತು ಟೀಕೆಗಳ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಚಿಕ್ಕಮಗಳೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮಹಾತ್ಮ ಗಾಂಧೀಜಿಯವರ...

ಸಂತೆ ಸಮಸ್ಯೆ ಬಗೆಹರಿದಿದ್ದಲ್ಲಿ ವ್ಯಾಪಾರ ನಗರಸಭೆ ಆವರಣಕ್ಕೆ

ಚಿಕ್ಕಮಗಳೂರು:  ಸಂತೆ ಮೈದಾನಕ್ಕೆ ಅವಶ್ಯವಿರುವ ಮೂಲ ಸೌಕರ್ಯವನ್ನು ನಗರಸ ಭೆ ಆಡಳಿತ ಪೂರೈಸಬೇಕು. ನಿರ್ಲಕ್ಷಿಸಿದರೆ ಸಂಪೂರ್ಣ ಸಂತೆ ವ್ಯಾಪಾರವನ್ನು ನಗರಸಭಾ ಆವರಣಕ್ಕೆ ಸ್ಥಳಾಂತರಿಸುತ್ತೇವೆ ಎಂದು ಸಮಾಜ ಸೇವಾ ಕಾರ್ಯಕರ್ತರ ವೇದಿಕೆ ರಾಜ್ಯಾಧ್ಯಕ್ಷ...

Related Articles

ಮಕ್ಕಳ ರಕ್ಷಣೆಗಾಗಿ ಮಕ್ಕಳ ರಕ್ಷಣಾ ಸಿಬ್ಬಂದಿಗಳ ಮನವಿ

ಚಿಕ್ಕಮಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲೆಯ ಮಕ್ಕಳ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಕ್ಕಳ ರಕ್ಷಣಾ ಸಿಬ್ಬಂದಿಗಳು...

ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದ ಸರ್ಕಾರಿ ನೌಕರ ಪತ್ತೆ

ಚಿಕ್ಕಮಗಳೂರು: ಕಡೂರು ಶಾಸಕರ ಪಿಎ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿದ್ದ ಸರ್ಕಾರಿ ನೌಕರ ಇಂದು ...

ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಇಬ್ಬರ ಸಾವು

ಚಿಕ್ಕಮಗಳೂರು: ಜಿಲ್ಲೆಯ ಎರಡು ಸಂಭವಿಸಿದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಯರೇಹಳ್ಳಿ ಗ್ರಾಮದಿಂದ ಧರ್ಮಸ್ದಳಕ್ಕೆ...

ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಡಾ.ಎ.ಎಸ್.ಶಂಕರ್ ನಾರಾಯಣ್

ತರೀಕೆರೆ: ತರೀಕೆರೆ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೆಂಗಳೂರು ಆಕಾಶ ವಾಣಿ ಕಾರ್ಯಕ್ರಮ ನಿರ್ದೇಶಕರಾದ ಡಾ.ಎ.ಎಸ್.ಶಂಕರ್...