Home ಬಿ.ಎಲ್.ಶಂಕರ್ ಗೆ ಮತ್ತೆ ಮತ್ತೆ ಮಿಸ್…?
Homechikamagalurnamma chikmagalurPolitical News

ಬಿ.ಎಲ್.ಶಂಕರ್ ಗೆ ಮತ್ತೆ ಮತ್ತೆ ಮಿಸ್…?

Share
Share

ಚಿಕ್ಕಮಗಳೂರು: ರಾಜ್ಯ ಸಭೆ ಅಥವಾ ವಿಧಾನ ಪರಿಷತ್ ಸ್ಥಾನಗಳಿಗೆ ಆಯ್ಕೆ ಮಾಡುವಾಗ ಬಿ.ಎಲ್.ಶಂಕರ್ ಹೆಸರು ಎವರೆಸ್ಟ್ ಶಿಖರದ ತುದಿ ಮುಟ್ಟಿರುತ್ತದೆ ಇನ್ನೂ ಖಚಿತ ಎನ್ನುವಾಗ ಶಂಕರ್ ಹೆಸರು ತೆರೆಮರೆಗೆ ಸರಿದು ಮಾಯಾವಾಗುತ್ತದೆ.

ಮುಖ್ಯ ಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಶಂಕರ್ ಪರ ಪ್ರಬಲವಾಗಿ ನಿಂತು ವಿಧಾನ ಪರಿಷತ್ ಗೆ ಕಳುಹಿಸಿ ಸಭಾಪತಿ ಮಾಡುವ ಲೆಕ್ಕಾಚಾರವನ್ನು ಹೈಕಮ್ಯಾಂಡ್ ಎಳ್ಳುನೀರು ಬಿಟ್ಟಿದೆ.ಇದರಿಂದಾಗಿ ಶಂಕರ್ ಗೆ ಮತ್ತೆ ಮತ್ತೆ ಮಿಸ್ ಹೊಡೆಯುತ್ತಿರುವುದು ಏಕೆ .

ಶಂಕರ್ ಸದಾಕಾಲವೂ ಚಟುವಟಿಕೆಯಲ್ಲಿ ಇರುತ್ತಾರೆ.ಕಾಲೇಜು ದಿನಗಳಿಂದ ಸಂಘಟನೆ,ಹೋರಾಟ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಇಪ್ಪತ್ತೈದನೇ ವಯಸ್ಸಿನಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಯುವಜನ ಸೇವಾ ಮಂತ್ರಿಯಾಗಿ ದೇವೇಗೌಡರ ನೀಲಿ ಕಣ್ಣಿನ ಹುಡುಗನಾಗಿ ಸಕ್ರಿಯವಾಗಿದ್ದರು.ಬೆಳಗ್ಗೆ ವಿಧಾನ ಪರಿಷತ್ ಸದಸ್ಯರಾಗಿ ಸಂಜೆ ಮಂತ್ರಿಯಾದ ಶಂಕರ್ ಎಷ್ಟು ಗಟ್ಟಿಯಾಗಿದ್ದರು ಎಂಬುದಕ್ಕೆ ಸಾಕ್ಷಿ.

ದೇವೇಗೌಡರ ಜೊತೆಗೆ ಸಂಬಂಧ ಹಳಸಿದ ಮೇಲೆ ರಾಜಕೀಯವಾಗಿ ಮೂಲೆ ಗುಂಪಾಗಿ ಚಿತ್ರಕಲಾ ಪರಿಷತ್ ಅಧ್ಯಕ್ಷರಾಗಿ ಚಿಕ್ಕಮಗಳೂರು ರಾಜಕಾರಣದ ಸೂತ್ರಧಾರರಾಗಿದ್ದಾರೆ.

ಸ್ಪರ್ಧೆ ಮಾಡಿದ ಚುನಾವಣೆಯಲ್ಲಿ ಸೋಲು ಖಚಿತ ಎನ್ನುವ ಪರಿಸ್ಥಿತಿ ಕಳೆದ ಇಪ್ಪತ್ತೈದು ವರ್ಷಗಳಿಂದ ದೇವೇಗೌಡರ ಶಾಪದಿಂದ ಮುಕ್ತರಾಗಿಲ್ಲ.ಇನ್ನೂ ಕಾಂಗ್ರೆಸ್ ನ ಹಲವರು ಒಳಗೆ ಬತ್ತಿ ಇಡುತ್ತಿದ್ದಾರೆ ಎನ್ನುವವರು ಇದ್ದಾರೆ ಜಿಲ್ಲೆಯ ಶಾಸಕರುಗಳು ಶಂಕರ್ ಬರದಂತೆ ತಡೆದಿದ್ದಾರೆ ಎನ್ನುವವರು ಇದ್ದಾರೆ.ಶಂಕರ್ ಪವರ್‌ ಸೆಂಟರ್ ನಲ್ಲಿ ಇದ್ದರೆ ಜನರಿಂದ ಚುನಾಯಿತರಾದ ನಾವು ಇವರ ಬಳಿ ಹೋಗಬೇಕು ಎಂಬ ಲೆಕ್ಕಾಚಾರದಲ್ಲಿ ಮುಖ್ಯ ಮಂತ್ರಿ ಬಳಿ ಅಲವತ್ತು ಕೊಂಡು ಕಾಲು ಎಳೆದಿದ್ದಾರೆ ಎನ್ನುತ್ತಾರೆ.

ಕಳೆದ ಎರಡು ತಿಂಗಳಿಂದ ಶಂಕರ್ ಗೆ ಶುಭಾಶಯ ಕೇಳಿ,ಕೇಳಿ ಸಾಕಾಗಿದೆ ಅಂತೂ ಇಂತೂ ಶಂಕರ್ ಗೆ ವಿಧಾನ ಪರಿಷತ್ ಗೆ ಹೋಗುವ ಭಾಗ್ಯ ಬರಲಿಲ್ಲ. ಜಿಲ್ಲೆಯ ಮಾಜಿ ಮಂತ್ರಿ ಬೇಗಾನೆ ರಾಮಯ್ಯನವರ ಮಗಳು ಅನಿವಾಸಿ ಭಾರತೀಯ ಉಪಾಧ್ಯಕ್ಷೆ ಆರತಿಕೃಷ್ಣರನ್ನು ವಿಧಾನ ಪರಿಷತ್ ಗೆ ಕಳುಹಿಸಲು ಹೈಕಮ್ಯಾಂಡ್ ತೀರ್ಮಾನ ಮಾಡಿರುವುದರಿಂದ ಶಂಕರ್ ಗೆ ಮತ್ತೆ,ಮತ್ತೆ ಪ್ರಯತ್ನ ಮಾಡುವುದು ಬಿಟ್ಟು ಬೇರೆ ಯಾವ ಗ್ಯಾರಂಟಿ ಇಲ್ಲ.

B.L. Shankar misses again and again…?

Share

Leave a comment

Leave a Reply

Your email address will not be published. Required fields are marked *

Don't Miss

ಪುನಗು ಬೆಕ್ಕು ಬೇಟೆಯಾಡಿದವನ ಬಂಧನ

ಚಿಕ್ಕಮಗಳೂರು:  ತಾಲೂಕಿನ ಉದ್ದೆಬೋರನಹಳ್ಳಿ ವ್ಯಾಪ್ತಿಯ ಪಾದುಮನೆ ಗ್ರಾಮದಲ್ಲಿ ಪುನುಗು ಬೆಕ್ಕು ಬೇಟೆಯಾಡಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಪುನುಗು ಬೆಕ್ಕು ಬೇಟೆಯಾಡಿ ಅದರ ಚರ್ಮ ಸುಲಿದು ಮಾಂಸ ತೆಗೆಯುವ ವೇಳೆಗೆ...

ಜಿಲ್ಲೆಯಲ್ಲಿ ಮಳೆಯ ಆರ್ಭಟ – ಕಾಫಿಬೆಳೆ ನಾಶ – ರಸ್ತೆ ಹುಡುಕಾಡುವ ಕಾಟ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಎಡ ಬಿಡದೆ ಮಳೆ ಸುರಿಯುತ್ತಿದೆ ಅದರಲ್ಲೂ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಮಳೆಯ ಆರ್ಭಟದಿಂದ ಕಾಫಿ ಕೊಳೆಯಲು ಆರಂಭವಾಗಿದೆ ಎಂದು ಕಾಫಿ ಬೆಳೆಗಾರರ...

Related Articles

ಪ್ರೀತಿ ನಿರಾಕರಣೆ-ಯುವತಿ ಮೇಲೆ ಚಾಕುವಿನಿಂದ ಹಲ್ಲೆ

ಚಿಕ್ಕಮಗಳೂರು: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಸಿಟ್ಟಿಗೆದ್ದ ಯುವಕನೋರ್ವ ಯುವತಿ ಮೇಲೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ...

ದೊಡ್ಡ ಮನೆ ಡಿಚ್ಚಿ ಯಾರಿಗೆ – ಕೈ ಕಸರತ್ತು ? ಬಿಜೆಪಿಯಲ್ಲಿ ತಳಮಳ !

ಅಜ್ಜಂಪುರ: ಪಟ್ಟಣ ಪಂಚಾಯತಿ ಚುನಾವಣೆ ನಡೆದು ಇಪ್ಪತ್ತು ದಿನಗಳಾಗಿದೆ ಆದರೆ ಅಧ್ಯಕ್ಷ/ ಉಪಾಧ್ಯಕ್ಷರ ಚುನಾವಣೆ ವಿಳಂಬ...

ಜನರಿಗೆ ವಾಸ್ತವ ಸಂಗತಿ ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯಾದ್ಯಂತ ಪ್ರವಾಸ

ಚಿಕ್ಕಮಗಳೂರು : ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ನೀಡುತ್ತಿರುವ ಜನಪರ ಯೋಜನೆಗಳ ಪ್ರಚಾರ ಕೈಗೊಳ್ಳುವುದರೊಂದಿಗೆ ವಿರೋಧ...

ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ ಆರೋಪಿಗಳನ್ನು ಗಡಿಪಾರು ಮಾಡಬೇಕು

ಚಿಕ್ಕಮಗಳೂರು: ‘ಅಲ್ಲಂಪುರ ನಿವಾಸಿ ಓಂಕಾರಮೂರ್ತಿ ಮೇಲಿನ ಹಲ್ಲೆ ಸಂಬಂಧ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ‘ಬಿ’...