ಚಿಕ್ಕಮಗಳೂರು: ಮಾಜಿ ಸಚಿವ ಸಿ.ಟಿ.ರವಿ ಆಪ್ತ ಸುದರ್ಶನ್ ಬಲಗೈ ಬಂಟ ಹಾಲಿ ಮೂಗ್ತಿಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಆನಂದ್ ನ ರಸಲೀಲೆ ನಡೆಸುತ್ತಿದ್ದಾರೆ ಎಂದು ಕೆಲವರು ಹೋಮ್ ಸ್ಟೇಗೆ ನುಗ್ಗಿ ಗಲಾಟೆ ಮಾಡಿ ತದಿಕಿದ್ದಾರೆ ಎಂದು ತಿಳಿದುಬಂದಿದೆ.
ಸೊಸೈಟಿಯಲ್ಲಿ ಕೆಲಸ ಮಾಡುವವರ ಜೊತೆಗೆ ಸಂಬಂಧ ಇದೆ ಎಂದು ಆನಂದ್ ನನ್ನು ಹಿಂಬಾಲಿಸಿ ಲಕ್ಯಾ ಕ್ರಾಸ್ ನ ಬಳಿ ಇರುವ ಹೋಮ್ ಸ್ಟೇಗೆ ನುಗ್ಗಿ ಗಲಾಟೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮತ್ತವರ ಮೂಲದ ಹೆಣ್ಣಿನೊಂದಿಗೆ ಕೆಲ ವರ್ಷಗಳಿಂದ ಆಕ್ರಮ ಸಂಬಂಧ ಇಟ್ಟುಕೊಂಡು ಓಡಾಡುತ್ತಿದ್ದರು ಎಂದು ಸೊಸೈಟಿ ಕಿಟಕಿ,ಬಾಗಿಲುಗಳು ಹೇಳುತ್ತಿವೆ.
ಆನಂದ್ ಸಿ.ಡಿ.ಎ ಅಧ್ಯಕ್ಷನಾಗಿದ್ದಾಗ ಆತನ ಗತ್ತು ಗೈರತ್ತು ನೋಡಿದರೆ ಆಶ್ಚರ್ಯ ಅನುಮಾನ ಉಂಟಾಗುತ್ತಿತ್ತು.ಈತ ಎರಡನೇ ಸುದರ್ಶನ್ ಎಂಬಂತೆ ವರ್ತನೆ ಮಾಡುತ್ತಿದ್ದ ಎಂದು ಹಲವರು ದೂರುತ್ತಿದ್ದರು.
ಸಿ.ಟಿ.ರವಿ ಈತನನ್ನು ನಂಬಿ ಅಧಿಕಾರ ಕಳೆದುಕೊಂಡರು ಎನ್ನುವುದಕ್ಕೆ ಈತ ಸಿ.ಡಿ.ಎ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ ಈಗಿನ ಶಾಸಕ ಹೆಚ್.ಡಿ.ತಮ್ಮಯ್ಯ ಸಿ.ಡಿ.ಎ ಅಧ್ಯಕ್ಷರಾಗುತ್ತಿದ್ದರು ಆದರೆ ಆನಂದ್ ಅಧಿಕಾರ ಶಾಶ್ವತ ಎಂದು ತಿಳಿದಿದ್ದರಿಂದ ತಮ್ಮಯ್ಯ ಪಕ್ಷ ತೊರೆದು ಹೋಗಿ ಸಿ.ಟಿ.ರವಿಯವರನ್ನು ಸೋಲಿಸಿ ಶಾಸಕರಾಗಿದ್ದು ದಾಖಲೆ.
ವಾಹನ ಮಾಲೀಕರ ಸಂಘದ ಅಧ್ಯಕ್ಷನಾಗಿ ನಿವೇಶನ ಕೊಡಿಸುವೆ ಎಂದು ಹಣ ಕಟ್ಟಿಸಿ ನಿವೇಶನ ಕೊಡಿಸದೆ ನಾಲ್ಕು ವರ್ಷಗಳ ನಂತರ ಹಣ ವಾಪಸ್ಸು ನೀಡಿದ್ದರ ಬಗ್ಗೆ ಸಾಮಾನ್ಯ ಸಭೆಯಲ್ಲಿ ಪ್ರಶ್ನೆ ಮಾಡಿ ಉಗಿಯಲಾಗಿತ್ತು.
ಆನಂದ್ ನ ಇತಿಹಾಸ ಗೊತ್ತಿದ್ದರೂ ಆತನ ಮೂಲಕ ದೋ ನಂಬರ್ ದಂದೆ ನಡೆಸಲು ಈತನನ್ನು ಇಟ್ಟುಕೊಳ್ಳಲಾಗಿತ್ತು ಎಂದು ಜನ ಮಾತನಾಡುತ್ತಿದ್ದರು.ಸಿ.ಟಿ.ರವಿ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾಗಲು ಆಕ್ರಮ ಮಾಡಿದ್ದು ಈತನೇ ಕಾರಣ ಎನ್ನಲಾಗುತ್ತದೆ. ಈತನಿಂದ ಇನ್ನೇನು ಕಾದಿದೆಯೋ ಕಾದು ನೋಡಬೇಕು.
ಆನಂದ್ ಆನಂದ ಅನುಭವಿಸುವ ಸಮಯದಲ್ಲಿ ಈ ತರಹ ಘಟನೆ ನಡೆದಿರುವುದು ಆನಂದ್ ಇನ್ನೂ ಏನೇನೂ ಭಂಗ ತರುತ್ತಾನೆ ಎಂಬುದನ್ನು ಕಾದು ನೋಡಬೇಕು.
ಬಿಜೆಪಿ ಯವರೇ ಈತನ ಆಕ್ರಮ ತಡೆ ಒಡ್ಡಲು ಹೋಗಿದ್ದು ವಿಶೇಷ.
Attack on CDA ex-president Anand…?
Leave a comment