Home Latest News Antaraghatte Durgamba Fair:ಬಾಂಧವ್ಯ ಬೆಸೆಯುವ ಅಮ್ಮನ ಹಬ್ಬದಲ್ಲಿ ಕುರಿ-ಎತ್ತುಗಳ ಖರೀದಿ ಭರಾಟೆ
Latest NewsHomeKadur

Antaraghatte Durgamba Fair:ಬಾಂಧವ್ಯ ಬೆಸೆಯುವ ಅಮ್ಮನ ಹಬ್ಬದಲ್ಲಿ ಕುರಿ-ಎತ್ತುಗಳ ಖರೀದಿ ಭರಾಟೆ

Share
ಅಮ್ಮನ ಹಬ್ಬದಲ್ಲಿ ಕುರಿ-ಎತ್ತುಗಳ ಖರೀದಿ ಭರಾಟೆ
ಅಮ್ಮನ ಹಬ್ಬದಲ್ಲಿ ಕುರಿ-ಎತ್ತುಗಳ ಖರೀದಿ ಭರಾಟೆ
Share

ಚಿಕ್ಕಮಗಳೂರು : ರಾಜ್ಯದಲ್ಲಿ ನಡೆಯುವ ಅತಿದೊಡ್ಡ ಜಾತ್ರೆಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಅಂತರಘಟ್ಟೆ ದುರ್ಗಾಂಬಾ ಜಾತ್ರೆಯು ವಿಶಿಷ್ಠತೆಯಿಂದ ಕೂಡಿದೆ.ಫೆಬ್ರವರಿ ತಿಂಗಳ 7 ನೇ ತಾರೀಖು ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಜನ ಸೇರಿ ರಥೋತ್ಸವದಲ್ಲಿ ಭಾಗಿಯಾಗುತ್ತಾರೆ.

ಜಾತ್ರೆ ನಡೆಯುವ ನಾಲ್ಕು ದಿನಗಳ ಮೊದಲು ಈ ಭಾಗದ ಕಡೂರು, ಬೀರೂರು, ತರೀಕೆರೆ, ಅಜ್ಜಂಪುರ, ಶಿವನಿ,ಅಂತರಘಟ್ಟೆ ಜೊತೆಗೆ ಹಳ್ಳಿ ಹಳ್ಳಿಗಳಲ್ಲಿ ಅಮ್ಮನ ಹಬ್ಬ ಆಚರಿಸಿ ಮಾಂಸಾಹಾರಿ ಮತ್ತು ಸಸ್ಯಹಾರಿ ವಿಶೇಷ ಭೋಜನ ಬಹಳ ವಿಶೇಷವಾಗಿರುತ್ತದೆ.
ಸಸ್ಯಹಾರಿಗಳು ಬಹಳ ಕಡಿಮೆ ಆದರೆ ಮಾಂಸಹಾರಿ ಭೋಜನಕ್ಕೆ ಆದ್ಯತೆ ಹೆಚ್ಚು.

ಒಂದು ವಾರಗಳ ತನಕ ನಡೆಯುವ ಹಬ್ಬದ ವಿಶೇಷ ಏನೆಂದರೆ ಒಂದೇ ದಿನ ಹಬ್ಬ ಆಚರಿಸುವುದಿಲ್ಲ .ಒಂದೇ ದಿನದ ಬದಲು ಬೇರೆ,ಬೇರೆ ದಿನ ಹಬ್ಬ ಆಚರಿಸುವುದರಿಂದ ನೆಂಟರು,ಇಷ್ಟರು ಬಂಧು,ಬಳಗ ಮತ್ತು ಸ್ನೇಹಿತರು ಬಂದು ಹೋಗುವುದಕ್ಕೆ ಅನುಕೂಲ ಆಗುತ್ತದೆ ಎಂದು ಮಂಗಳವಾರ ಶುರು ಮಾಡಿ ಮುಂದಿನ ಮಂಗಳವಾರದ ತನಕ ಹಬ್ಬ ಆಚರಿಸುತ್ತಾರೆ.

ಹಬ್ಬದ ವಿಶಿಷ್ಟ ಮತ್ತು ವಿಶೇಷ, ರಾಜ್ಯದ ವಿವಿಧ ಕಡೆಗಳಿಂದ ಕುರಿ ಮಾರಾಟ ಮಾಡಲು ಬರುತ್ತಾರೆ.ಹಾವೇರಿ,ಶಿಗ್ಗಾವಿ, ಬೆಳಗಾವಿ ಮತ್ತು ಮಂಡ್ಯ ಜಿಲ್ಲೆಗಳಿಂದ ಕುರಿ ತಂದು ವಿಶಾಲ ಜಾಗದಲ್ಲಿ ವಹಿವಾಟು ನಡೆಸುತ್ತಾರೆ.ಹತ್ತರಿಂದ ಐವತ್ತು ಸಾವಿರದ ತನಕ ಕುರಿ ವ್ಯವಹಾರ ನಡೆಸುತ್ತಾರೆ. ಕೆಲವರು ಎರಡು ಮೂರು ಮನೆಯವರು ಸೇರಿಕೊಂಡು ಕುರಿ ಪಾಲು ಹಾಕಿಕೊಳ್ಳುವದು ಉಂಟು.ಈ ಭಾಗದಲ್ಲಿ ಕೋಟಿ,ಕೋಟಿ ವ್ಯಾಪಾರ ಮಾಡುತ್ತಾರೆ ಇದರ ಜೊತೆಗೆ ಮೇಕೆ,ಕೋಳಿ,ಕೋಳಿ ಮೊಟ್ಟೆ ಹಾಗೂ ಮಧ್ಯ ಲೆಕ್ಕವಿಲ್ಲದಷ್ಟು ವ್ಯಾಪಾರವಾಗುತ್ತದೆ.

ಹಬ್ಬಕ್ಕೆ ಬರುವ ಬಂಧು,ಬಳಗ ಮತ್ತು ಸ್ನೇಹಿತರಿಗಳಿಗೆ ನೀಡುವ ಆತಿಥ್ಯ ಎಂದು ಮರೆಯಲು ಸಾಧ್ಯವಿಲ್ಲ. ಗೊತ್ತು, ಪರಿಚಯವಿರಬೇಕು ಎಂಬ ನಿಯಮವಿಲ್ಲ ಎಲ್ಲರನ್ನೂ ಕರೆದು ಒಂದು ತುತ್ತಾದರು ಊಟ ಮಾಡಿ ಎಂಬ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸಸ್ಯಹಾರವು ಇರುತ್ತದೆ ಆದರೆ ಕಡಿಮೆ, ಹೋಗಿ ಊಟ ಮಾಡದಿದ್ದರೆ ಒಂದು ಹಣ್ಣನ್ನು ಕೊಟ್ಟು ಕಳುಹಿಸುವ ಸಂಪ್ರದಾಯವಿದೆ.ಒಟ್ಟಾರೆ ಬಾಂಧವ್ಯ ಬೆಸೆಯುವ ಹಬ್ಬ ಎನ್ನಲೇ ಬೇಕು.

ಅಂತರಘಟ್ಟೆಯಲ್ಲಿ ನಡೆಯುವ ರಥೋತ್ಸವಕ್ಕೆ ಎತ್ತಿನ ಗಾಡಿ ಓಡಿಸುವ ಪದ್ದತಿ ಇದ್ದು ಲಕ್ಷ, ಲಕ್ಷ ಕೊಟ್ಟು ಹೊರಿ ( ಎತ್ತುಗಳು) ಖರೀದಿಸಿ ಶೃಂಗಾರ ಮಾಡಿ ಗಾಡಿ ಓಡಿಸುವ ಪದ್ದತಿ ಇದೆ. ಇತ್ತೀಚಿನ ವರ್ಷಗಳಲ್ಲಿ ಬೈಕ್,ಕಾರು,ಟ್ರಾಕ್ಟರ್ ಹಾವಳಿ ಹೆಚ್ಚುತ್ತಿದೆ ಆದರೂ ಅಂತರಘಟ್ಟಮ್ಮನ ಜಾತ್ರೆ ಮಾತ್ರ ರಾಜ್ಯದ ಐದಾರು ಜಿಲ್ಲೆಯ ಜನ ಸೇರುವುದು ಒಂದು ವಾರಗಳ ವಿಶೇಷ ಭೋಜನ ಭಕ್ಷ್ಯ ಸವಿಯುವ ಪರಿ ವರ್ಣನೆ ಮಾಡಲು ಸಾಧ್ಯವಿಲ್ಲ ಅದನ್ನು ಅನುಭವಿಸಿದರೆ ಮಾತ್ರ ಚೆಂದ,ಚೆಂದ.

Antaraghatte Durgamba Fair

Share

Leave a comment

Leave a Reply

Your email address will not be published. Required fields are marked *

Don't Miss

ನರಹಂತಕ ಆನೆ ಸೆರೆಗೆ ಸಾಕಾನೆಗಳ ತಂಡ ಆಗಮನ

ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಕಾರ್ಮಿಕ ಬಲಿ; ಸೆರೆಗೆ ಸಾಕಾನೆಗಳ ತಂಡ ಆಗಮನ ಚಿಕ್ಕಮಗಳೂರು ತಾಲ್ಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಕೂಲಿ ಕಾರ್ಮಿಕ...

ನೈತಿಕ ಪೊಲೀಸ್ ಗಿರಿ ಪ್ರಕರಣ – ಗಂಭೀರವಾಗಿ ಪರಿಗಣನೆ

ಚಿಕ್ಕಮಗಳೂರು: ಕಾಫಿನಾಡಿನ ಸಂತೇ ಮೈದಾನದ ಬಳಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣವನ್ನು ಜಿಲ್ಲಾ ಪೊಲೀಸ್ ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್...

Related Articles

ಪ್ರವಾಸ ಮುಂದೂಡಲು ಜಿಲ್ಲಾಡಳಿತ ಮನವಿ

ಚಿಕ್ಕಮಗಳೂರು:  ಐ.ಡಿ. ಪೀಠ ಹಾಗೂ ಸುತ್ತಮುತ್ತಲಿನ ತಾಲ್ಲೂಕಿನ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ ಹಾಗೂ...

ಫೆ.೨೮-ಮಾ.೧೭ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ

ಚಿಕ್ಕಮಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಫೆಬ್ರವರಿ ೨೮ ರಿಂದ ಮಾರ್ಚ್ ೧೭ರವರೆಗೆ ನಡೆಯಲಿದ್ದು, ಪರೀಕ್ಷೆಗಳನ್ನು...

ಕಾಡುಕೋಣ ದಾಳಿಗೆ ಕೃಷಿಕನಿಗೆ ಗಾಯ

ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಜನತೆಗೆ ಈಗ ಕಾಡುಕೋಣಗಳ ಉಪಟಳ ಹೊಸ ಆತಂಕ ತಂದೊಡ್ಡಿದೆ. ಕೊಪ್ಪ ತಾಲೂಕಿನ...

ಕಾಫಿನಾಡಿನ ಹಲವೆಡೆ ಕಾಡಾನೆಗಳ ಸಂಚಾರ – ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ

ಚಿಕ್ಕಮಗಳೂರು: ಕಾಫಿನಾಡಿನ ಹಲವೆಡೆ ಕಾಡಾನೆಗಳ ಸಂಚಾರ ತೀವ್ರಗೊಂಡಿದ್ದು, ಅರಣ್ಯ ಇಲಾಖೆ ಹಾಗೂ ಆನೆ ಕಾರ್ಯಪಡೆ (ETF)...