ತರೀಕೆರೆ : ತಾಲ್ಲೂಕಿನ ಹುಣಸಘಟ್ಟ ಗ್ರಾಮದ ಯೂನಿಯನ್ ಬ್ಯಾಂಕ್ನಲ್ಲಿ ಸಾಲ ಪಡೆದಿದ್ದ ಮುದುಗುಂಡಿ ತಾಂಡ್ಯದ ತಿಮ್ಮಾನಾಯ್ಕ್ ಎಂಬುವರು ಗುರುವಾರ ಸಂಜೆ ವಿ? ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ.
ಸಾಲದ ಮರು ಪಾವತಿ ವಿಚಾರದಲ್ಲಿ ಮೇ. ೨೮ ರಂದು ಜನರಲ್ ಮ್ಯಾನೇಜರ್ ಮತ್ತು ಬ್ಯಾಂಕ್ ವ್ಯವಸ್ಥಾಪಕರು ಸೇರಿ ಒ ಟಿ ಎಸ್ ಮುಖೇನಾ ಸಾಲ ಮರು ಪಾವತಿಗಾಗಿ ಕರೆದಿದ್ದು, ತಿಮ್ಮಾನಾಯ್ಕ್ ರವರ ಸಾಲದ ಮೊತ್ತ ರೂ. ೧೪ ಲಕ್ಷವಿದ್ದು, ಬಡ್ಡಿ ಇತರೆ ಸೇರಿ ರೂ. ೩೭ ಲಕ್ಷ ಆಗಿದ್ದು ಅದರಲ್ಲಿ ರೂ. ೩೧ ಲಕ್ಷ ಪಾವತಿ ಮಾಡುವಂತೆ ಬ್ಯಾಂಕ್ ನವರು ಒತ್ತಡ ಹೇರಿದ್ದು,
ಸಾಲದ ವಿಚಾರವಾಗಿ ಒಂದು ವ?ದ ಹಿಂದೆ ಡಿ ಆರ್ ಟಿ ಬೆಂಗಳೂರು ಕೋರ್ಟ್ ಗೆ ಧಾವೆ ಹಾಕಿದ್ದು, ಈ ಬಗ್ಗೆ ನಿಮ್ಮ ಜಮೀನನ್ನು ಹರಾಜು ಹಾಕುವುದಾಗಿ ತಿಳಿಸಿದ್ದು, ಈ ವಿಚಾರವಾಗಿ ಮನನೊಂದು ವಿ? ಸೇವಿಸಿದ್ದು, ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ ಎಂದು ಮೃತರ ಕುಟುಂಬ ಮೂಲಗಳು ತಿಳಿಸಿವೆ.
ಕಳೆದ ತಿಂಗಳಲ್ಲಿ ಇದೇ ರೀತಿ ಇದೇ ಬ್ಯಾಂಕಿನಿಂದ ಸಾಲ ಪಡೆದ ರೈತ ಹೊಸಹಳ್ಳಿ ತಾಂಡ್ಯದ ರೈತ ಹೆಚ್.ಎಲ್. ಮಂಜ್ಯಾನಾಯ್ಕ್ ರವರು ತಗಾದೆ ನೋಟಿಸ್ ನಿಂದ ಮನನೊಂದು ವಿ? ಸೇವಿಸಿ ಸಾವನ್ನಪ್ಪಿರುವ ಘಟನೆ ಮಾಸುವ?ರಲ್ಲಿ ಮತ್ತೋಂದು ಪ್ರಕರಣ ಮರುಕಳಿಸಿರುವುದು ವಿಪರ್ಯಾಸವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Another farmer falls victim to bank loan harassment
Leave a comment