Home namma chikmagalur ಎಐ ತಂತ್ರಜ್ಞಾನಗಳು ರೋಬೋಟ್‌ಗಳಿಗೆ ಬುದ್ದಿವಂತಿಕೆಗೆ ಪೂರಕ
namma chikmagalurchikamagalurHomeLatest News

ಎಐ ತಂತ್ರಜ್ಞಾನಗಳು ರೋಬೋಟ್‌ಗಳಿಗೆ ಬುದ್ದಿವಂತಿಕೆಗೆ ಪೂರಕ

Share
Share

ಚಿಕ್ಕಮಗಳೂರು: ಮೆಕ್ಯಾನಿಕಲ್ ಇಂಜಿನಿಯರಿಂಗ್ ರೋಬೋಟ್‌ಗಳ ಯಾಂತ್ರಿಕ ಭಾಗಗಳ ನ್ನು ವಿನ್ಯಾಸಿಸಲು ಹಾಗೂ ಎಐ ತಂತ್ರಜ್ಞಾನಗಳು ರೋಬೋಟ್‌ಗಳಿಗೆ ಬುದ್ಧಿವಂತಿಕೆ ನೀಡಲು ಪೂರಕವಾಗಿ ದೆ ಎಂದು ಎಐಟಿ ಕಾಲೇಜು ಪ್ರಾಂಶುಪಾಲ ಡಾ|| ಸಿ.ಟಿ.ಜಯದೇವ್ ಹೇಳಿದರು.

ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ನಡೆದ ಮೆಕ್ಯಾನಿಕಲ್ ಇಂಜಿನಿ ಯರಿಂಗ್ ಹಾಗೂ ರೊಬೊಟಿಕ್ ಮತ್ತು ಎಐ ಇಂಜಿನಿಯರಿಂಗ್ ಯಾಂತ್ರಿಕ-೨೦೨೫ರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃತಕ ಬುದ್ದಿಮತ್ತೆ, ಯಂತ್ರಕಲಿಕೆ ಮತ್ತು ಸಂವೇಧಕ ತಂತ್ರಜ್ಞಾನಗಳಲ್ಲಿನ ಪ್ರಗತಿಗಳು ರೋಬೊಟಿಕ್ಸ್ ನೊಳಗಿನ ಸಾಧ್ಯತೆಗಳು ಮತ್ತು ಅನ್ವಯಿಕೆಗಳನ್ನು ನಿರಂತರವಾಗಿ ವಿಸ್ತರಿಸುತ್ತದೆ. ಅಲ್ಲದೇ ಮುಂದುವರಿಸಲು ಒಂದು ರೋಮಾಂಚಕಾರಿ ಹಾಗೂ ಕ್ರಿಯಾತ್ಮಕ ಕ್ಷೇತ್ರವಾಗಿದೆ ಎಂದು ತಿಳಿಸಿದರು.

ರೋಬೋಟಿಕ್ ವ್ಯವಸ್ಥೆಗಳ ಪರಿಕಲ್ಪನೆ, ಅಭಿವೃದ್ದಿ ಮತ್ತು ಅನುಷ್ಟಾನದಲ್ಲಿ ಪರಿಣತಿ, ವ್ಯಾಪಕ ಕೌಶಲ್ಯ ಹೊಂದಿರುವ ವೃತ್ತಿಪರ, ಸ್ವತಂತ್ರ್ಯವಾಗಿ ಅಥವಾ ಕನಿಷ್ಟ ಮಾನವ ಹಸ್ತಕ್ಷೇಪದೊಂದಿಗೆ ವ್ಯಾಪಕ ಶ್ರೇಣಿಯ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಬುದ್ದಿವಂತ ಯಂತ್ರಗಳನ್ನು ರಚಿಸುವುದು ಪ್ರಾಥಮಿಕ ಉದ್ದೇಶವಾಗಿದೆ ಎಂದರು.

ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಅತ್ಯಂತ ಹಳೆಯ ಮತ್ತು ಬಹುಮುಖ ವಿಭಾಗಗಳಲ್ಲಿ ಒಂದಾ ಗಿದೆ. ಭವಿ?ದ ವಾಹನಗಳನ್ನು ವಿನ್ಯಾಸಗೊಳಿಸುವುದು, ಇಂಧನ ವ್ಯವಸ್ಥೆಗಳನ್ನು ಸುಧಾರಿಸುವುದು, ರೋಬೋಟಿಕ್ ಯಾಂತ್ರೀಕರಣವನ್ನು ಅಭಿವೃದ್ಧಿಪಡಿಸುವುದು, ಮೆಕ್ಯಾನಿಕಲ್ ಎಂಜಿನಿಯರಿಂಗ್ ವ್ಯಾಪ್ತಿ ಯು ಊಹಿಸಬಹುದಾದ ಉದ್ಯಮವಾಗಿದೆ ಎಂದು ತಿಳಿಸಿದರು.

ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ|| ಜಿ.ಎಂ.ಸತ್ಯನಾರಾಯಣ್ ಮಾತನಾಡಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ರೊಬೊಟಿಕ್ ಕೋರ್ಸ್ ರೊಬೊಟಿಕ್ಸ್ ವಿನ್ಯಾಸ, ಪ್ರೋಗ್ರಾಮಿಂಗ್ ಮತ್ತು ಅನು?ನದ ಸಮಗ್ರ ತಿಳುವಳಿಕೆಯನ್ನು ನೀಡುತ್ತದೆ. ವೈವಿಧ್ಯಮಯ ತಾಂತ್ರಿಕ ಪಾತ್ರಗಳಿಗೆ ಕೌಶಲ್ಯ ಅಭಿ ವೃದ್ಧಿಯನ್ನು ಬೆಳೆಸುತ್ತದೆ ಎಂದರು.

ಮಾಹಿತಿ ತಂತ್ರಜ್ಞಾನದ ಮುಖ್ಯಸ್ಥ ಡಾ|| ಎಸ್.ಸಂಪತ್ ಮಾತನಾಡಿ ಇಂದಿನ ಆಧುನಿಕತೆ ಯುಗದಲ್ಲಿ ಪ್ರಪಂಚವು ಹೊಸ ಹೊಸ ತಂತ್ರಜ್ಞಾನಗಳಿಂದ ಪ್ರತಿ ಕ್ಷೇತ್ರದಲ್ಲೂ ಪ್ರಗತಿಯನ್ನು ಕಾಣುತ್ತಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನಗಳೆಡೆ ಹೆಚ್ಚು ಆಸಕ್ತಿ ವಹಿಸುವುದನ್ನು ಕಲಿಯಬೇಕಿದೆ ಎಂದು ತಿಳಿಸಿದರು.
ಇದೇ ವೇಳೆ ವಿವಿಧ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂ ಗ್‌ನಲ್ಲಿ ಅತ್ಯುತ್ತಮವಾಗಿ ತೇರ್ಗಡೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ಬಳಿಕ ವಿದ್ಯಾ ರ್ಥಿಗಳಿದ ಸ್ವಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ಡಾ|| ವೀರೇಂದ್ರ, ಆಟಿಫಿಶಿಯ ಲ್ ಇಂಟಲಿಜೆಂಟ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗದ ಮುಖ್ಯಸ್ಥೆ ಡಾ|| ಎಂ.ಆರ್.ಸುನೀತಾ, ಸಿವಿಲ್ ಇಂಜಿನಿಯರ್ ಮುಖ್ಯಸ್ಥ ಡಾ|| ಕಿರಣ್, ಡಾಟಾ ಸೈನ್ಸ್ ಮುಖ್ಯಸ್ಥ ಡಾ|| ಎಂ.ಜಿ.ಆದರ್ಶ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರೇಷ್ಮಾ ನಿರೂಪಿಸಿದರು. ವಿನುತ ಸಂಗಡಿಗರು ಪ್ರಾರ್ಥಿಸಿದರು. ಡಾ|| ಜಿ.ಎಂ.ಸತ್ಯನಾರಾಯಣ್ ಸ್ವಾಗತಿಸಿದರು.

AI technologies help robots become more intelligent

Share

Leave a comment

Leave a Reply

Your email address will not be published. Required fields are marked *

Don't Miss

ಧಾರಾಕಾರ ಮಳೆ ನಡುವೆ ಗಿರಿಪ್ರದೇಶಕ್ಕೆ ಪ್ರವಾಸಿಗರ ಧಾಂಗುಡಿ

ಚಿಕ್ಕಮಗಳೂರು: ನಗರ ಸಮೀಪದ ಗಿರಿಪ್ರದೇಶದಲ್ಲಿ ಧಾರಾಕಾರ ಮಳೆಸುರಿಯುತ್ತಿದ್ದು, ಇದರ ನಡುವೆಯೇ ಗಿರಿಭಾಗಕ್ಕೆ ಭಾರೀ ಪ್ರವಾಸಿಗರ ದಂಡು ಭೇಟಿಕೊಟ್ಟಿದೆ. ಕಾರು, ಬೈಕ್, ಟಿಟಿ ಸೇರಿದಂತೆ ೧೮೫೦ ವಾಹನಗಳು ಗಿರಿಭಾಗಕ್ಕೆ ಪ್ರವಾಸಿಗರನ್ನು ಕರೆದೊಯ್ದಿದೆ. ಭಾರೀ...

ಮೈಮೆಲೆ ಬಿಸಿನೀರು ಬಿದ್ದು ಹೆಣ್ಣುಮಗುವಿಗೆ ಗಾಯ

ಚಿಕ್ಕಮಗಳೂರು: ಜಿಲ್ಲಾಮಕ್ಕಳ ಘಟಕದ ದತ್ತು ಸಂಸ್ಥೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಒಂದು ವರ್ಷ ಮೂರು ತಿಂಗಳ ಹೆಣ್ಣುಮಗುವಿಗೆ ಸುಟ್ಟಗಾಯವಾಗಿದ್ದು ಇದರಿಂದ ಹೆಣ್ಣುಮಗು ನರಳುವಂತಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಗರದ ಗಾಂಧಿನಗರದಲ್ಲಿರುವ ದತ್ತು...

Related Articles

ವಸೂಲಿವೀರ ಅದಕ್ಷ ಡಿ.ಡಿ.ಪಿ.ಐ ಪುಟ್ಟರಾಜುಗೆ ಕಡ್ಡಾಯ ರಜೆ

ಚಿಕ್ಕಮಗಳೂರು; ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಾರ್ವಜನಿಕ ಶಿಕ್ಷಣ ಅಧಿಕಾರಿ ಪುಟ್ಟರಾಜು ಕಡ್ಡಾಯ ರಜೆ ಮೇಲೆ...

ನಯನ ಮೋಟಮ್ಮ ಕ್ಷೇತ್ರ ದರ್ಶನಕ್ಕೆ ಬಾರಮ್ಮ

ಮೂಡಿಗೆರೆ: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಎಡಬಿಡದೆ ಮಳೆ ಬರುತ್ತಿದ್ದು ಅನಾಹುತದ ಸಂಭವಿಸಿ ಹಲವರು ಪ್ರಾಣ...

ಜು.28ಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಮೇಳ

ಚಿಕ್ಕಮಗಳೂರು: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ವಸಾಹತು ಹಿಂಭಾಗ, ಜಿಲ್ಲಾ ಪಂಚಾಯಿತಿ ಹತ್ತಿರ, ಜ್ಯೋತಿನಗರ, ಚಿಕ್ಕಮಗಳೂರು)...

ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಕುದುರೆಮುಖ, ಮುಳ್ಳಯ್ಯನ...