ಚಿಕ್ಕಮಗಳೂರು : ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚರಂಡಿ ವಿಚಾರವಾಗಿ ಉಂಟಾದ ಸಣ್ಣ ಕಿಡಿ ಇದೀಗ ದೊಡ್ಡ ಜಗಳಕ್ಕೆ ನಾಂದಿ ಹಾಡಿದ್ದು, ಕೇಸ್ ಹಾಗೂ ಕೌಂಟರ್ ಕೇಸ್ ದಾಖಲಾಗಿವೆ.
ಏಪ್ರಿಲ್ 4ರ ಸಂಜೆ ಸಣೇಗೌಡ ಎಂಬುವವರು ಯಶೋಧ ಎಂಬುವವರ ಮನೆಯ ಗೋಡೆಯ ಪಕ್ಕದಲ್ಲಿ ಚರಂಡಿಗಾಗಿ ಗುಂಡಿ ತೆಗೆಯುತ್ತಿದ್ದಾಗ ಈ ವಿವಾದ ಆರಂಭವಾಗಿದೆ. ಮಳೆ ಬಂದರೆ ಗೋಡೆ ಕುಸಿಯುತ್ತದೆ ಎಂದು ಯಶೋಧ ಆಕ್ಷೇಪಿಸಿದರೆ, ಗುಂಡಿ ತೋಡದಿದ್ದರೆ ನೀರು ತಮ್ಮ ಮನೆಗೆ ನುಗ್ಗುತ್ತದೆ ಎಂದು ಸಚ್ಚೇಗೌಡ ವಾದಿಸಿದ್ದು, ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಲ್ಲದೆ, ದೈಹಿಕ ಹಲ್ಲೆ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಎರಡೂ ಕಡೆಯವರು ಪೊಲೀಸರ ಮೆಟ್ಟಿಲೇರಿದ್ದಾರೆ. ಸಣ್ಣೀಗೌಡ, ಲಕ್ಷ್ಮಮ್ಮ ಮತ್ತು ಯಶೋಧ, ಸುಮಿತ್ರಾ ಅವರುಗಳು ಪರಸ್ಪರ ದೂರು ನೀಡಿದ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಶೇಷವೆಂದರೆ, ಈ ಜಗಳದ ನಡುವೆ ಜಾತಿ ನಿಂದನೆಯ ಆರೋಪವೂ ಕೇಳಿಬಂದಿದ್ದು, ಪೊಲೀಸರು ಅಟ್ರಾಸಿಟಿ ಪ್ರಕರಣವನ್ನೂ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ನೆರೆಹೊರೆಯವರ ನಡುವಿನ ಸಣ್ಣ ಚರಂಡಿ ವಿವಾದ ಈಗ ಪೊಲೀಸ್ ಠಾಣೆಯ ಅಂಗಳದಲ್ಲಿ ದೊಡ್ಡ ಕಾನೂನು ಸಮರಕ್ಕೆ ಕಾರಣವಾಗಿದೆ.
Atrocity case registered over sewage issue
Leave a comment