Home namma chikmagalur chikamagalur ಗಣೇಶನ ಮರ್ಡರ್ ಕೇಸ್ ಗೆ “ಟ್ವಿಸ್ಟ್” ಕೊಡುತ್ತಿರುವ “ಸೆಕ್ಸ್ ಸಿ.ಡಿಗಳು”! ಆರೋಪಿ ಕತ್ತೆಸಂದೀಪನ ಬಂಧನ ಯಾವಾಗ ?
chikamagalurCrime NewsHomeKadurLatest Newsnamma chikmagalur

ಗಣೇಶನ ಮರ್ಡರ್ ಕೇಸ್ ಗೆ “ಟ್ವಿಸ್ಟ್” ಕೊಡುತ್ತಿರುವ “ಸೆಕ್ಸ್ ಸಿ.ಡಿಗಳು”! ಆರೋಪಿ ಕತ್ತೆಸಂದೀಪನ ಬಂಧನ ಯಾವಾಗ ?

Share
Share

ಕಡೂರು: ಸಖರಾಯಪಟ್ಟಣದಲ್ಲಿ ಗಣೇಶನ ಕೊಲೆಯಾಗಿ ಒಂದು ವರೆ ತಿಂಗಳಾಯಿತು ಅದರೂ ಗಣೇಶನ ಬಗ್ಗೆ ಹೊಸ,ಹೊಸ ವಿಷಯಗಳು ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿರುವುದು ಹಲವು ವಿಚಾರಗಳು ಹರಿದಾಡುತ್ತಿರುವುದು ಏಕೆ ?

ಗಣೇಶನ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.ಇನ್ನೂ ಕೂಡ ತನಿಖೆ ಮುಂದುವರೆದಿದೆ .ಇಪ್ಪತ್ತಕ್ಕೂ ಹೆಚ್ಚು ಜನರಿಗೆ ನೋಟೀಸ್ ನೀಡಿ ತನಿಖೆ ಮಾಡಿದ್ದಾರೆ.ಆದರೆ ಕೊಲೆ ಪ್ರಯತ್ನದಡಿ ಕತ್ತೆ ಸಂದೀಪ್ ಮತ್ತಿತರನ್ನು ಬಂಧಿಸದಿರುವುದು ಏಕೆ ?

ಗಣೇಶನ ಹೈ ಪೋನ್ ತೆರೆಯಲು ಗಣೇಶ ತನ್ನ ಕಣ್ಣ ರೆಪ್ಪೆ ಬಳಸುತ್ತಿದ್ದ ಹೀಗಾಗಿ ಹೈ ಪೋನ್ ತೆರೆಯಲು ಎಫ್ಎಸ್,ಎಲ್ ಗೆ ಕಳುಹಿಸಲಾಗಿತ್ತು ಆತನ ಸಂಪೂರ್ಣ ವಿಚಾರ ಪೊಲೀಸರಿಗೆ ತಿಳಿದಿದೆ.ಆದರೆ ಕೊಲೆಗೂ ಮೊಬೈಲ್ ನಲ್ಲಿ ಇರುವ ಮಾಹಿತಿಗೂ ಸಂಬಂಧ ವಿಲ್ಲ ಎಂದು ತಿಳಿದುಬಂದಿದೆ.

ಗಣೇಶನ ಮೊಬೈಲ್ ನಲ್ಲಿ ಹಲವು ಪ್ರತಿಷ್ಠಿತರ ಸೆಕ್ಸ್ ಚಿತ್ರಗಳಿವೆ ಎಂದು ಸಾರ್ವಜನಿಕರು ಮಾತನಾಡುತ್ತಿರುವುದು ಹಲವರಿಗೆ ಬ್ಲಾಕ್ ಮೇಲ್ ಮಾಡಿದ್ದಾನೆ ಎಂಬ ಸುದ್ದಿಗಳು ಹರಿದಾಡುತ್ತಿವೆ.ಹಲವರು ಇವನ ಕಿರುಕುಳಕ್ಕೆ ಹೆದರಿದ್ದರು ಜೊತೆಗೆ ಲ್ಯಾಂಡ್ ಡೀಲಿಂಗ್ ನಲ್ಲಿ ಲಕ್ಷಂತರ ರೂಗಳು ಬಂದಿವೆ.ಕೊಲೆಗೆ ಲ್ಯಾಂಡ್ ನ ವ್ಯವಹಾರ ಹಂಚಿಕೆಯ ವ್ಯತ್ಯಾಸ ಕೂಡ ಕಾರಣ ಎಂಬುದು ಪ್ರಮುಖ ಸಂಗತಿ.

ಗಣೇಶನ ಪ್ರತಿಯೊಂದು ವ್ಯವಹಾರ, ಚಲನವಲನಗಳು ವಿಡಿಯೋ ತೆಗೆದಿರುವ ಸಂಪೂರ್ಣ ಮಾಹಿತಿ ಕತ್ತೆ ಸಂದೀಪ್ ಗೆ ಗೊತ್ತಿದೆ ಎಂಬುದು ಬಹಿರಂಗ ಸತ್ಯ. ಕೊಲೆಯಾದ ದಿನ ಕೂಡ ಗಣೇಶನ ಜೊತೆಯಲ್ಲಿ ಇದ್ದ ಸಂದೀಪ್ ನಿಗೆ ಸಣ್ಣ ಪೆಟ್ಟು ಕೂಡ ಬಿದ್ದಿಲ್ಲ ಎಂಬುದು ಹಲವು ಸಂಶಯವನ್ನು ಉಂಟುಮಾಡುತ್ತಿದೆ.ಅಂದು ಊರು ಬಿಟ್ಟವನು ಇಂದಿಗೂ ಊರಿಗೆ ಬಂದಿಲ್ಲ. ಗಣೇಶನ ಹತ್ತಿರ ಹಣ ಮತ್ತು ಬಂಗಾರ ಪಡೆದಿರುವ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ.ದೂರಿನಲ್ಲಿ ಪ್ರಥಮ ಆರೋಪಿ ಆದರೂ ಬಂಧನವಾಗಿಲ್ಲ ಎಂದರೆ ಸಂಶಯ ಸಹಜವಾಗಿಯೇ ಬರುತ್ತದೆ.

ಕತ್ತೆ ಸಂದೀಪ್ ತರೀಕೆರೆಯ ನೆಂಟರ ಮನೆಯಲ್ಲಿ ಇರುವ ಗುಮಾನಿ ಇದೆ.ಹೀಗಾಗಿ ಗಣೇಶನ ಮುಗಿಸಲು ಕೈ ಜೋಡಿಸಿರ ಬಹುದು ಎಂದು ಜನ ಮಾತನಾಡುತ್ತಿದ್ದಾರೆ. ಈತನಿಂದ ಹಲವು ಮಾಹಿತಿಗಳು ಹೊರಬರುವುದು ಖಚಿತವಾಗಿದ್ದರೂ ಪೊಲೀಸ್ ರ ಮೇಲೆ ಒತ್ತಡ ಇರಬಹುದು ಎಂದು ವಿಶ್ಲೇಷಣೆ ನಡೆಯುತ್ತಿದೆ.

ಗಣೇಶನ ಕೊಲೆ ಮಾಡಿದ ಮೇಲೆ ಸಖರಾಯಪಟ್ಟಣದಲ್ಲಿ ಜನ ಸಂಜೆ ಆರು ಗಂಟೆಗೆ ಮನೆ ಸೇರಿಕೊಳ್ಳುತ್ತಿರುವ ಬಗ್ಗೆ ಹಿರಿಯ ಮುಖಂಡ ಮಂಜುನಾಥ್ ಹಂಚಿಕೊಂಡಿದ್ದಾರೆ.ಇಪ್ಪತ್ತೈದಕ್ಕೂ ಹೆಚ್ಚು ಜನ ಡ್ರಗ್ ದಾಸರಾಗಿದ್ದು ಯಾವಾಗ ಏನೋ ಎಂಬ ಆತಂಕ ಇರುವುದರ ಬಗ್ಗೆ ಪೊಲೀಸರು ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು.

“Sex CDs” are giving a “twist” to Ganesh’s murder case!

Share

Leave a comment

Leave a Reply

Your email address will not be published. Required fields are marked *

Don't Miss

ನಾಮಫಲಕದಲ್ಲಿ ಶೇ.೬೦ರಷ್ಟು ಕನ್ನಡಕ್ಕೆ ಪ್ರಾಧಾನ್ಯತೆಗೆ ಸೂಚನೆ

ಚಿಕ್ಕಮಗಳೂರು: ಮುಂದಿನ ಒಂದು ವಾರದೊಳಗೆ ಉದ್ಯಮದ ಎಲ್ಲಾ ನಾಮಫಲಕಗಳಲ್ಲಿ ಸರ್ಕಾರದ ನಿಯಮಗಳ ಅನ್ವಯ ಶೇ. ೬೦ರಷ್ಟು ಕನ್ನಡ ನಾಮಫಲಕ ಇರುವಂತೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ನಗರಸಭೆಯಿಂದ ನಾಮಫಲಕಗಳನ್ನು ತೆರವುಗೊಳಿಸಿ ಕಾನೂನು ರೀತಿ...

ಮದುವೆ ಮನೆಯಲ್ಲಿ ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಸುಮಾರು ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಸಂಬಂಧಿಕರ...

Related Articles

ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ-20 ಸಾವಿರ ನಗದು ಕಳವು

ಚಿಕ್ಕಮಗಳೂರು: ಮನೆಯ ಬೀರುವಿನಲ್ಲಿ ಇರಿಸಿದ್ದ ಸುಮಾರು ೨೮ ಗ್ರಾಂ ಚಿನ್ನಾಭರಣ ಹಾಗೂ ?೨೦ ಸಾವಿರ ನಗದು...

ವೃದ್ದಾಪ್ಯ, ಅಂಗವಿಕಲ ವೇತನ ವಿಳಂಬ ಖಂಡಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದಾಪ್ಯ, ವಿಧವಾ, ವಿಕಲಚೇತನ ಹಾಗೂ ಬಿಪಿಎಲ್ ಕಾರ್ಡ್ ರದ್ದು ಪಡಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ...

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ....

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ...