Home namma chikmagalur ಮಾಗಡಿ ಕೆರೆಯಲ್ಲಿ ಕೆರೆಯಲ್ಲಿ 20 ಲಕ್ಷ ರೂ ಬೆಲೆಯ ಚಿನ್ನಾಭರಣ ಪತ್ತೆ
namma chikmagalurchikamagalurCrime NewsHomeLatest News

ಮಾಗಡಿ ಕೆರೆಯಲ್ಲಿ ಕೆರೆಯಲ್ಲಿ 20 ಲಕ್ಷ ರೂ ಬೆಲೆಯ ಚಿನ್ನಾಭರಣ ಪತ್ತೆ

Share
Share

ಚಿಕ್ಕಮಗಳೂರು: ಮದುವೆ ಮನೆಗೆ ಹೋಗುತ್ತಿದ್ದ ಅಕ್ಕಸಾಲಿಗನ ಕಾರು ಆಯತಪ್ಪಿ ಕೆರೆಯಲ್ಲಿ ಮುಳುಗಿತ್ತು. ಅದೃಷ್ಟವಶಾತ್ ಅಕ್ಕಸಾಲಿಗ ಬದುಕುಳಿದ. ಕಾರನ್ನೂ ಮೇಲಕ್ಕೆ ತರಲಾಯಿತು. ಆದರೆ…. ಮದುವೆ ಮನೆಗೆ ಕೊಂಡೊಯ್ಯುತ್ತಿದ್ದ ಚಿನ್ನಾಭರಣ ಇದ್ದ ಬ್ಯಾಗು ನೀರಲ್ಲಿ ಮುಳುಗಿತ್ತು.

ಯೂಟ್ಯೂಬ್ ನಲ್ಲಿ ಎಂದೋ ನೋಡಿದ್ದ ನೆನಪು. ತಕ್ಷಣಕ್ಕೆ ಮುಳುಗು ತಜ್ಞ ಈಶ್ವರ ಮಲ್ಪೆ ತಂಡದ ನೆನಪಾಯಿತು. ಕರೆ ಬಂದದ್ದೇ ತಡ, ಈಶ್ವರ್ ತಂಡ ಇತ್ತ ಪಯಣಿಸಿತು. ಕೆರೆಗೆ ಇಳಿದು ಗಂಟೆಗಟ್ಟಲೆ ಶೋಧಿಸಿದಾಗ ಬ್ಯಾಗು ಸಿಕ್ಕಿತು.

ಸಾರ್ವಜನಿಕರು ಪೊಲೀಸರ ಸಮ್ಮುಖದಲ್ಲಿ ಬ್ಯಾಗು ತೆರೆದಾಗ ಸಿಕ್ಕಿದ್ದು ಬರೋಬರಿ ೨೦ ಲಕ್ಷ ರೂ ಬೆಲೆಯ ಚಿನ್ನಾಭರಣ. !!

ಇದು ನಡೆದದ್ದು ಇಲ್ಲಿಗೆ ಸಮೀಪದ ಮಾಗಡಿ ಕೆರೆಯಲ್ಲಿ. ಮಲೆಬೆನ್ನೂರಿನ ಸದಾನಂದ ಮದುವೆಯ ಆಭರಣವನ್ನು ಕೊಡಲು ಬೇಲೂರಿಗೆ ಹೋಗುತ್ತಿದ್ದಾಗ ಬ್ರೇಕ್ ವೈಫಲ್ಯದಿಂದ ಆಯತಪ್ಪಿ ಕಾರು ಕೆರೆಗೆ ಉರುಳಿತ್ತು. ಹೇಗೋ ಕಾರಿನಿಂದ ಹೊರಬಂದರೂ, ಜೊತೆಗೆ ಬ್ಯಾಗ್ ತರಲು ಆಗಿರಲಿಲ್ಲ.

ಈ ಕೌತುಕ ಕಾರ್ಯಾಚರಣೆ ವೇಳೆ ಕೆರೆ ದಡದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಸ್ಥಳಕ್ಕೆ ಪೊಲೀಸರೂ ಆಗಮಿಸಿದ್ದರು. ಬ್ಯಾಗ್ ಸಿಕ್ಕಿದೊಡನೆ ಪೊಲೀಸರ ಸಮ್ಮುಖದಲ್ಲಿ ಈಶ್ವರ್ ಮಲ್ಪೆ, ವಾರಸುದಾರರಿಗೆ ಒಪ್ಪಿಸಿದರು.

Gold ornaments worth Rs 20 lakh found in Magadi Lake

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ನೀರುಗಂಟಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಚಿಕ್ಕಮಗಳೂರು: ಅಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಹೇಮಾವತಿ ನದಿಯ ಅಕ್ರಮವಾಗಿ ಮರಳು ಸಾಗಣೆ ಪ್ರಕರಣ ಪತ್ತೆ

ಮೂಡಿಗೆರೆ: ಜೀವನದಿ ಹೇಮಾವತಿಯ ಒಡಲಿಗೆ ಕನ್ನ ಹಾಕಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲದ ಮೇಲೆ ಗೋಣಿಬೀಡು...

ಕಾಫಿನಾಡಿನಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮವು ಸಡಗರ ಹಾಗೂ ಸೌಹಾರ್ದತೆಯಿಂದ ಕಳೆಗಟ್ಟಿತ್ತು. ಕೆಂಪನಹಳ್ಳಿಯ...

ಕಾಫಿ ತೋಟದಲ್ಲಿ ಮರಗಸಿ – ಕಾರ್ಮಿಕನ ಸಾವು

ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ...