ಕಡೂರು; ಉದ್ದೇಶ ಪೂರ್ವಕವೋ ? ಆಕಸ್ಮಿಕವೋ ಮಾಜಿ ಶಾಸಕ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಅಳಿಯ ಸಂದೇಶ್ ಮೇಲೆ ಸಂತೋಷ ಮತ್ತಿತರರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ.ಪೊಲೀಸ್ ಠಾಣೆಯ ಕೊಗಳತೆಯ ದೂರದಲ್ಲಿ ಇರುವ ಬಸವೇಶ್ವರ ವೃತ್ತದಲ್ಲಿ ಘಟನೆ ನಡೆದಿದೆ.
ಪೊಲೀಸರಿಗೆ ಕರೆ ಮಾಡಿ ಹೇಳಿದರು ಕ್ಯಾರೆ ಎನ್ನದಿರುವುದು ನೋಡಿದರೆ ಇದರಲ್ಲಿ ಪ್ರಭಾವ ಇರುವುದು ಕಂಡುಬರುತ್ತದೆ. ಶಾಸಕ ಆನಂದ್ ಘಟನೆ ಖಂಡಿಸಿದ್ದಾರೆ ನಿಜ ಪೊಲೀಸ್ ವ್ಯವಸ್ಥೆ ಇಷ್ಟು ಹದಗೆಡಲು ಕಾರಣ ಏನುಎಂದು ತಿಳಿದಿಲ್ಲದವರ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಸಂತೋಷ ಹಲ್ಲೆ ನಡೆಸಿದ್ದರ ಬಗ್ಗೆ ಸಾವಿರಾರು ಜನ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ಮಾಡಿದ ಮೇಲೆ ಸ್ಥಳಕ್ಕೆ ಬಂದ ಎಸ್.ಪಿ.ಅಮಟೆಯವರು ದೂರು ದಾಖಲಿಸಿ ತನಿಖಾ ತಂಡ ರಚಿಸಿ ಆರೋಪಿಗಳನ್ನು ಹಿಡಿಯಲು ಸೂಚನೆ ನೀಡಿದ್ದಾರೆ ಆಗದರೆ ಇಲ್ಲಿನ ಪೊಲೀಸ್ ವ್ಯವಸ್ಥೆ ಹೇಗಿದೆ ? ಮಾಜಿ ಶಾಸಕರಿಗೆ ಈ ಪರಿಸ್ಥಿತಿಯಾದರೆ ಜನಸಾಮಾನ್ಯರ ಸ್ಥಿತಿ ಏನಾಗಿದೆ.ಕಡೂರಿನಲ್ಲಿ ವಾರಕ್ಕೆರಡು ಇಂತಹ ಘಟನೆಗಳು ನಡೆಯುತ್ತಿವೆ ಎಂದು ಜನರ ಅಳಲು.
ಸಂತೋಷನ ಗುಂಪು ಈಗಾಗಲೇ ಇಂತಹ ಹಲವು ಕೃತ್ಯದಲ್ಲಿ ಭಾಗಿಯಾಗಿದ್ದು ಪೊಲೀಸ್ ರು ಎಡೆಮುರಿ ಕಟ್ಟಿ ರೌಡಿ ಪಟ್ಟಿಗೆ ಸೇರಿಸಲು ತಯಾರಿ ನಡೆದಿದ್ದಾಗ ಠಾಣಧಿಕಾರಿ ಎತ್ತಂಗಡಿ ಮಾಡಿಸಿದ್ದು ಯಾರು ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಎಸ್.ಪಿ.ಅಮಟೆಯವರು ಘಟನೆಗಳು ನಡೆದ ಸ್ಥಳಕ್ಕೆ ಭೇಟಿ ನೀಡುತ್ತಾರೆ ನಿಜ ಆದರೆ ಸ್ಥಳೀಯ ಪೊಲೀಸ್ ಆಡಳಿತದ ಪರಿಸ್ಥಿತಿ ಏಕೆ ಹೀಗಾಗಿದೆ ಅಂದರೆ ಒತ್ತಡ ಯಾರದ್ದು ಎಂದು ಜನ ಅನುಮಾನ ವ್ಯಕ್ತಪಡಿಸುತ್ತಾರೆ.
ಕಾನೂನು ಎಲ್ಲರಿಗೂ ಒಂದೇ ಎಂಬುದಕ್ಕಿಂತ ಅಧಿಕಾರಸ್ಥರಿಗೆ ಒಂದು ಕಾನೂನು ಇದೆಯೇ. ಪೊಲೀಸ್ ಇಲಾಖೆ ಕಾನೂನು ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಜನ ದೂರುತ್ತಿರುವುದು ಮಾತ್ರ ಸತ್ಯ
ಜಿಲ್ಲೆಯಲ್ಲಿ ಆಡಳಿತ ಪಕ್ಷದ ಮರ್ಜಿಯಲ್ಲಿ ಪೊಲೀಸ್ ರು ನಡೆದುಕೊಂಡರೆ ವಿರೋಧ ಪಕ್ಷದವರು ಬಾಯಿ ಮುಚ್ಚಿ ಕುಳಿತಿರುವುದು ಕಾನೂನು ಸುವ್ಯವಸ್ಥೆ ಕುಸಿದು ಜನ ನೋವು ಅನುಭವಿಸುತ್ತಿದ್ದಾರೆ.
ಸಮಯದ ಮಿತಿ ಇಲ್ಲದೆ ನಡೆಯುತ್ತಿರುವ ಲಿಕ್ಕರ್ ಶಾಪ್ ಗಳು ಹೇರಳವಾಗಿ ಸಿಗುತ್ತಿರುವ ಗಾಂಜಾ ಅಧಿಕಾರಸ್ಥರಿಗೆ ಜೈ, ಜೈ
ಅನ್ನುವ ಮಂದಿಗಳಿಂದ ಪದೇ,ಪದೇ ಗಲಾಟೆಗೆ ಕಾರಣ ಎನ್ನಲಾಗಿದೆ.
What is the law and order situation in the police department?
Leave a comment