ಚಿಕ್ಕಮಗಳೂರು: ತಾಲ್ಲೂಕು ಲಕ್ಯಾ ಹೋಬಳಿ ದೇವಗೊಂಡನಹಳ್ಳಿಯ ಸೀತಮ್ಮ ಮತ್ತು ಲಕ್ಷ್ಮಣ್ಗೌಡ ಎಂಬುವವರ ಪುತ್ರ ಮೂರ್ತಿ ಎಂಬಾತ ದನ ಮೇಯಿಸಲು ಹೋಗಿದ್ದಾಗ ಆಕಸ್ಮಿಕ ಹಳ್ಳದ ನೀರಿನಲ್ಲಿ ಕೊಚ್ಚಿಹೋಗಿದ್ದ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ ೫ ಲಕ್ಷ ರೂ ಚೆಕ್ನ್ನು ಶಾಸಕ ತಮ್ಮಯ್ಯ ಹಸ್ತಾಂತರಿಸಿದರು.
ಇಂದು ಮೃತನ ಕುಟುಂಬಕ್ಕೆ ತೆರಳಿದ ಅವರು, ಕಂದಾಯ ಸಚಿವ ಕೃಷ್ಣಭೈರೇಗೌಡರ ಆದೇಶದಂತೆ ಚೆಕ್ನ್ನು ತಹಶೀಲ್ದಾರ್ ಮೂಲಕ ಇಂದು ವಿತರಿಸಿದರು.
ಮೃತನ ಕುಟುಂಬಕ್ಕೆ ಸಾಂತ್ವಾನ ಹೇಳಿದ ಅವರು, ಮಗನ ಅಗಲಿಕೆಯಿಂದಾಗುವ ಆರ್ಥಿಕ ಸಂಕಷ್ಟವನ್ನು ಭರಿಸುವ ವ್ಯವಸ್ಥೆಯನ್ನು ರಾಜ್ಯಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದರು.
ಸಂಬಂಧಿಕರು ಹಾಗೂ ಸಂಕಷ್ಟ ಹೇಳಿಕೊಂಡು ಬರುವವರ ಮಾತಿಗೆ ಮರುಳಾಗದೆ ಈ ಹಣವನ್ನು ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇಟ್ಟು ಇದರಿಂದ ಬರುವ ಬಡ್ಡಿಯಲ್ಲಿ ಜೀವನ ಸಾಗಿಸಲು ಸಲಹೆ ನೀಡಿದರು.
ಸರಳ ಕಾರ್ಯಕ್ರಮಗಳ ಮೂಲಕ ಕುಟುಂಬಕ್ಕೆ ಹಣ ಉಳಿತಾಯ ಮಾಡಿಕೊಳ್ಳಿ ಎಂದು ಮಹಾನ್ ದಾರ್ಶನಿಕರು ಹೇಳಿರುವುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರೇಷ್ಮಾಶೆಟ್ಟಿ, ಗ್ರಾ.ಪಂ ಸದಸ್ಯರಾದ ಯೋಗೀಶ್, ಗೌರಮ್ಮ, ನಾಗೇಗೌಡ, ಲಕ್ಷ್ಮಮ್ಮ, ಗ್ರಾಮಸ್ಥರಾದ ಸಗನೇಗೌಡ, ಕೆಂಗೇಗೌಡ, ಸಣ್ಣೇಗೌಡ, ಅಚ್ಚುತರಾವ್, ಮೊಗಣ್ಣಗೌಡ ಮತ್ತಿತರರು ಉಪಸ್ಥಿತರಿದ್ದರು.
Distribution of Rs 5 lakh check to the family of the deceased in Devagondanahalli
Leave a comment