Home namma chikmagalur ರೋಟರಿ ಕಾಫಿ ಲ್ಯಾಂಡ್ ನಿಂದ ಡ್ರೈವ್ ಸೇಫ್ಟಿ-ಪೂನಾ ಡ್ರೈವ್ -2025
namma chikmagalurchikamagalurHomeLatest News

ರೋಟರಿ ಕಾಫಿ ಲ್ಯಾಂಡ್ ನಿಂದ ಡ್ರೈವ್ ಸೇಫ್ಟಿ-ಪೂನಾ ಡ್ರೈವ್ -2025

Share
Share

ಚಿಕ್ಕಮಗಳೂರು: ರೋಟರಿ ಜಿಲ್ಲಾ ಯೋಜನೆಗಳಲ್ಲಿ ಒಂದಾದ ಸುರಕ್ಷಿತಾ ವಾಹನ ಚಾಲನೆಯ ಅರಿವನ್ನು ಸಾರ್ವಜನಿಕರಲ್ಲಿ ಮೂಡಿಸಲು ಡ್ರೈವ್ ಸೇಪ್ಟಿ-ಪೂನಾ ಡ್ರೈವ್ -2025 ಸೆಪ್ಟೆಂಬರ್ ೩ ರಿಂದ ಸೆ.೭ ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ರೋ. ನಾಗೇಶ್ ಕೆಂಜಿಗೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೋಟರಿ ಕಾಫಿ ಲ್ಯಾಂಡ್ ಕ್ಲಬ್ ೨೫ ವರ್ಷðಗಳನ್ನು ಪೂರೈಸಿದ್ದು, ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ರೋಟರಿ ರಸ್ತೆ ಸುರಕ್ಷತಾ ಜಾಥಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸುಮಾರು ೨೫೦೦ ಕಿ.ಮೀ ಪೂರ್ಣಗೊಳಿಸಲು ಕ್ಲಬ್‌ನ ೨೫ ಸದಸ್ಯರು ೬ ವಾಹನಗಳಲ್ಲಿ ಸೆ.೩ ರಂದು ಚಿಕ್ಕಮಗಳೂರಿನಿಂದ ಹೊರಟು ಚಿತ್ರದುರ್ಗ, ಹೊಸಪೇಟೆ, ವಿಜಯಪುರ ಮಾರ್ಗವಾಗಿ ಶಿರಡಿ, ಪೂನಾ ತಲುಪಿ ಸತಾರಾ, ಬೆಳಗಾವಿ ಮಾರ್ಗವಾಗಿ ಚಿಕ್ಕಮಗಳೂರನ್ನು ಸೆ.೭ ರಂದು ಸಂಜೆ ತಲುಪಲಿದೆ ಎಂದರು.

ಈ ಮಾರ್ಗದಲ್ಲಿ ಬರುವ ಎಲ್ಲಾ ರೋಟರಿ ಕ್ಲಬ್‌ಗಳ ಜೊತೆ ಯೋಜನೆಯ ಉದ್ದೇಶಗಳನ್ನು ವಿನಿಮಯ ಮಾಡಿಕೊಳ್ಳುವುದು ಅಲ್ಲದೆ ಸಾರ್ವಜನಿಕರಿಗೆ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿಚಾರ ವಿನಿಮಯ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.

ರೋಟರಿ ಜಿಲ್ಲೆಯ ಮತ್ತೊಂದು ಕಾರ್ಯಕ್ರಮವಾದ ಪರಿಸರ ರಕ್ಷಣೆಯ ಜಾಗೃತಿಗಾಗಿ ವಿವಿಧ ಅರಣ್ಯ ಜಾತಿಯ ಬೀಜಗಳನ್ನು ಸೀಡ್ ಬೀಜಗಳಾಗಿ ಪರಿವರ್ತಿಸಿ, ಸಾರ್ವಜನಿಕರೊಂದಿಗೆ ವಿವಿಧ ರೋಟರಿ ಕ್ಲಬ್ ಸದಸ್ಯರೊಂದಿಗೆ ಆಯಾಕಟ್ಟಿನ ಜಾಗಗಳಲ್ಲಿ ಬಿತ್ತಿರಿಸಲಾಗುವುದು. ಸಾರ್ವಜನಿಕರಿಗೆ ಪರಿಸರ ರಕ್ಷಣೆಯ ಮಹತ್ವವನ್ನು ಕುರಿತು ವಿಚಾರಗೋಷ್ಠಿಗಳನ್ನು ನಡೆಸಲಾಗುವುದು ಎಂದು ಹೇಳಿದರು.

ಸೆ.೨ ರಂದು ಸಂಜೆ ೪-೩೦ ಕ್ಕೆ ನಗರದ ಎಂ.ಎಲ್.ವಿ ರೋಟರಿ ಹಾಲ್‌ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ವಿಕ್ರಮ ಅಮಟೆ, ಜಿಲ್ಲಾ ರಾಜ್ಯಪಾಲ ಕೆ.ಪಾಲಾಕ್ಷ, ಸಹಾಯಕ ಗೌವರ್ನರ್ ಟಿ.ಎಂ.ಪ್ರವೀಣ್ ನಹರ್, ವಲಯ ಸೇನಾನಿ ಹೆಚ್.ಕೆ.ಮಂಜುನಾಥ್ ಸಮ್ಮುಖದಲ್ಲಿ ಸಾಂಕೇತಿಕವಾಗಿ ಕಡಿಮೆ ದರದಲ್ಲಿ ಹೆಲ್ಮೆಟ್‌ಗಳನ್ನು ಆಜಾದ್ ಪಾರ್ಕ್ನಲ್ಲಿ ವಿತರಿಸುವುದರೊಂದಿಗೆ ಉದ್ಘಾಟಿಸಲಾಗುವುದು ಎಂದರು.

ಸುಮಾರು ೨೫ ವಾಹನಗಳು ನಗರದ ಎಂ.ಎಲ್.ವಿ ರೋಟರಿ ಹಾಲ್‌ನಿಂದ ಪ್ರಾರಂಭಗೊAಡು ಆಜಾದ್ ಪಾರ್ಕ್, ಐ.ಜಿ ರಸ್ತೆ ಮೂಲಕ ಎಂ.ಜಿ ರಸ್ತೆ ಮಾರ್ಗವಾಗಿ ಸಂಚರಿಸಿ ಸಾರ್ವಜನಿಕರಿಗೆ ವಾಹನ ಚಾಲನೆಯ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕಾಳಿ ಲ್ಯಾಂಡ್ ಯೋಜನಾ ನಿರ್ದೇಶಕ ಪಿ.ತನೋಜ್ ಕುಮಾರ್, ಡ್ರೆöÊವ್‌ನ ನಿರ್ದೇಶಕ ನಾಸೀರ್ ಹುಸೇನ್, ಕಾರ್ಯದರ್ಶಿ ಎಂ.ಆನAದ್ ಉಪಸ್ಥಿತರಿದ್ದರು.

Drive Safety-Puna Drive-2025 from Rotary Coffee Land

Share

Leave a comment

Leave a Reply

Your email address will not be published. Required fields are marked *

Don't Miss

ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯ

ಚಿಕ್ಕಮಗಳೂರು : ಇತಿಹಾಸ ಪ್ರಸಿದ್ಧ ಅಂತರಘಟ್ಟೆ ಜಾತ್ರಾ ಮಹೋತ್ಸವದಲ್ಲಿ ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯವಾಗಿದೆ. ರೇಸಿಗೆ ಬಿದ್ದ ಎತ್ತಿನಗಾಡಿಗಳ ಪೈಪೋಟಿ ಮಧ್ಯೆ ಎತ್ತಿನ ಗಾಡಿ ತೇರಿಗೆ ಡಿಕ್ಕಿಯೊಡೆದಿದೆ....

ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರ ಅಮಾನತು

ಚಿಕ್ಕಮಗಳೂರು: ಆಸ್ತಿ ಗುರುತಿನ ಸ್ವತ್ತಿನ ಚಕ್ಕುಬಂಧಿಯನ್ನು ಅಕ್ರಮವಾಗಿ ತಿದ್ದುಪಡಿ ಮಾಡಿರುವ ಹಿನ್ನೆಲೆಯಲ್ಲಿ ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಸೇವೆಯಿಂದ ಅಮಾನತ್ತುಗೊಳಿಸಿ ಬುಧವಾರ ಆದೇಶಿಸಿದ್ದಾರೆ. ಪಟ್ಟಣದ...

Related Articles

ಜಿಲ್ಲೆಯಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್ ಸ್ಥಾಪನೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಶನ್ ಸ್ಥಾಪಿಸಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ...

ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ

ಚಿಕ್ಕಮಗಳೂರು: ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ ಸಾಧನೆ ಮಾಡಿರುವ ಶಾಸಕರು ಉಳಿದಿರುವ...

ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನ ವಶ

ಚಿಕ್ಕಮಗಳೂರು : ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಕೆಎಂ ರಸ್ತೆಯ...

ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನದದು ಕಳವು

ಚಿಕ್ಕಮಗಳೂರು : ತಾಲೂಕಿನ ಕಂಚೇನಹಳ್ಳಿಯಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು ರೈತ ಉಮೇಶ್ ಎಂಬುವವರ ಮನೆಯಿಂದ ಲಕ್ಷಾಂತರ...