Home namma chikmagalur ಕನ್ನಡ ಸಾಹಿತ್ಯ ಪರಿಷತ್ತಿನ ಶ್ಲಾಘನೀಯ ಕಾರ್ಯಾಗಾರ
namma chikmagalurchikamagalurHomeLatest News

ಕನ್ನಡ ಸಾಹಿತ್ಯ ಪರಿಷತ್ತಿನ ಶ್ಲಾಘನೀಯ ಕಾರ್ಯಾಗಾರ

Share
Share

ತರೀಕೆರೆ: ಕನ್ನಡ ಸಾಹಿತ್ಯ ಪರಿಷತ್ತು ಇಂದು ನಗೆಪಟಾಲಿಗೆ ಸಿಕ್ಕಿದೆ.ಬರೀ ಸಮ್ಮೇಳನ, ಹಾರ,ತುರಾಯಿ ಮತ್ತು ಬೇಕು ಬೇಡದವರಿಗೆ ಜಗಮಗಿಸುವ ಕನ್ನಡ ಕಸ್ತೂರಿ, ಚಿಂತಕ,ಮಂತಕ,ವಾಗ್ಮಿ, ಸಂಘಟನ ಚತುರ,ಮಾತಿನ ಮಲ್ಲಾ,ಸಾಹಿತ್ಯ ಅರಾಧಕ ಎಂಬ ಪ್ರಶಸ್ತಿ ಕೊಟ್ಟು ಡೋಲು ಬಾರಿಸಿದ್ದೆ ಹೆಚ್ಚು. ಅವರನ್ನು, ಇವರು,ಇವರನ್ನು, ಅವರು ಹೊಗಳಿ ಹೊಗಳಿ ಹೊಸ,ಹೊಸ ವೇಷದಲ್ಲಿ ಬರೀ ವಸೂಲಿ ಮಾಡಲು ಅಟ್ಟಕ್ಕೆ ಏರಿಸಿದ ಜಾತ್ರೆ ಕಾರ್ಯಕ್ರಮಗಳನ್ನು ನೋಡಿದ್ದೆ ಹೆಚ್ಚು.

ತರೀಕೆರೆ ತಾಲ್ಲೂಕು ಸಾಹಿತ್ಯ ಪರಿಷತ್ತು ಇದಕ್ಕೆ ಭಿನ್ನವಾಗಿ ಕಾರ್ಯಾಗಾರ ಆಯೋಜನೆ ಮಾಡುತ್ತಿರುವುದನ್ನು ಯಾರಾದರೂ ಮೆಚ್ಚ ಬೇಕು. ಇದೇ ತಿಂಗಳು29 ಮತ್ತು 30 ರಂದು ರಂಗೇನಹಳ್ಳಿಯಲ್ಲಿ ತರೀಕೆರೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಹಲವು ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಾಡಿನ ಖ್ಯಾತ ಸಾಹಿತಿಗಳು ಮತ್ತು ವಿಚಾರವಂತರನ್ನು ಕರೆಯಿಸಿ ಎರಡು ದಿನಗಳ ಕಾರ್ಯಾಗಾರ ಮಾಡುತ್ತಿರುವುದನ್ನು ಶ್ಲಾಘಿಸ ಬೇಕು.

29 ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿ ಮಾಧ್ಯಮದಲ್ಲಿ ಕನ್ನಡ ಭಾಷೆ ಬಳಕೆ ಕುರಿತು ಪತ್ರಕರ್ತ ಬಿ.ಎಂ.ಹನೀಫ್ ಹಾಗೂ ಶಿಕ್ಷಣ ಮತ್ತು ಸಮಾಜ ಕುರಿತು ಭಾಷ ತಜ್ಞ ಮಲ್ಲಿಕಾರ್ಜುನ ಮೇಟಿ ದಲಿತ ಅಭಿವ್ಯಕ್ತಿ ಹೋರಾಟ ಕುರಿತು ರಂಗ ವಿಜ್ಞಾನಿ ಮತ್ತು ಪ್ರಾಧ್ಯಾಪಕ ಸಿ.ಜಿ.ಲಕ್ಷ್ಮೀಪತಿ ಉಪನ್ಯಾಸ ನೀಡಲಿದ್ದಾರೆ.ಈ ಕಾರ್ಯಾಗಾರದ ಸಂಪನ್ಮೂಲ ನಿರ್ವಹಣೆಯನ್ನು ತುಂಬಳಿ ರಾಮಯ್ಯ ನಿರ್ವಹಣೆ ಮಾಡಲಿದ್ದಾರೆ.

30 ರಂದು ಕನ್ನಡ ವಿಷಯ ಕುರಿತು ಪ್ರಖ್ಯಾತ ಬರಹಗಾರರು ಚಿಂತಕರಾದ ಪ್ರೊಫೆಸರ್ ತರೀಕೆರೆ ರಹಮತ್ ಉಪನ್ಯಾಸ ನೀಡಲಿದ್ದಾರೆ , ಎಚ್‌ ಆರ್‌ ಸ್ವಾಮಿ ಕನ್ನಡ ಪರಂಪರೆಯಲ್ಲಿ ವೈಜ್ಞಾನಿಕ ಮನೋಭಾವದ ವಿಷಯ ಕುರಿತು ಮಾತನಾಡಲಿದ್ದಾರೆ.ಸಾಹಿತ್ಯ ಅಭಿವ್ಯಕ್ತಿಯಲ್ಲಿ ಕನ್ನಡ ಕುರಿತು ಉಪನ್ಯಾಸಕರು ಬರಹಗಾರರಾದ ಸವಿತಾ ಬನ್ನಾಡಿ ಉಪನ್ಯಾಸ ರಂಗ ಭೂಮಿಯಲ್ಲಿ ಕನ್ನಡ ವಿಷಯ ಕುರಿತು ಡಾ. ವೆಂಕಟೇಶ್ವರ ಉಪನ್ಯಾಸ ನೀಡಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಮತ್ತು ಡಾ/ರಾಜಪ್ಪ ದಳವಾಯಿ ಮಾತನಾಡಲಿದ್ದಾರೆ. ಕಾರ್ಯಾಗಾರದಲ್ಲಿ ನಡೆಯುವ ಚಿಂತನ- ಮಂಥನ ದ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಹೊರತರುವುದು ಇಡೀ ಕಾರ್ಯಕ್ರಮ ಮತ್ತಷ್ಟು ಕನ್ನಡದ ಕೆಲಸಕ್ಕೆ ಸಾಕ್ಷಿ ಆಗಲಿದೆ.

ಕನ್ನಡದ ಕೆಲಸಕ್ಕೆ ಕನ್ನಡದ ಮನಸ್ಸುಗಳು ,ವಿದ್ಯಾರ್ಥಿಗಳು, ಸಾಹಿತ್ಯ ಆಸಕ್ತರು ಸ್ಪಂದಿಸುವುದರ ಮೂಲಕ ವಿಶೇಷ ಅಪರೂಪದ ಕಾರ್ಯಾಗಾರ ಯಶಸ್ವಿಯಾಗಲು ಸಹಕರಿಸ ಬೇಕು. ತರೀಕೆರೆ ಕನ್ನಡ ಸಾಹಿತ್ಯ ಪರಿಷತ್ತು ನಡೆ ಕಾರ್ಯಾಗಾರ ಮತ್ತು ವಿಶೇಷ ಅಭಿಯಾನಕ್ಕೆ ಮೆಚ್ಚುಗೆ ಮತ್ತು ಸದಾ ಅಭಿನಂದನೆ ಸಲ್ಲಬೇಕು.

Commendable workshop of Kannada Sahitya Parishat

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...