Home ಯುವ ಜನತೆ ಓದುವ ಹವ್ಯಾಸ ಬೆಳೆಸಿಕೊಳ್ಳಿ : ಅಂಚೆ ನಾಗಭೂಷಣ್
HomeLatest Newsnamma chikmagalurTarikere

ಯುವ ಜನತೆ ಓದುವ ಹವ್ಯಾಸ ಬೆಳೆಸಿಕೊಳ್ಳಿ : ಅಂಚೆ ನಾಗಭೂಷಣ್

Share
Share

ತರೀಕೆರೆ: ಯುವಜನತೆ ಹಾಗು ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವುದರಿಂದ ಜ್ಞಾನದ ಜೊತೆಗೆ ಸ್ವಾಭಿಮಾನದಿಂದ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಅಂಚೆ ಪ್ರತಿಷ್ಠಾನ ದ ಅಧ್ಯಕ್ಷರಾದ ಹಿರಿಯ ಪತ್ರಕರ್ತ ಅಂಚೆ ನಾಗಭೂಷಣ್ ಅಭಿಪ್ರಾಯ ಪಟ್ಟರು.

ತರೀಕೆರೆಯಲ್ಲಿ 1967 ರಲ್ಲಿ ನಡೆದ ಪ್ರಪ್ರಥಮ ರಾಜ್ಯ ಜಾನಪದ ಸಮ್ಮೇಳನದಲ್ಲಿ ಬಿಡುಗಡೆಯಾಗಿದ್ದ” ಹೊನ್ನ ಬಿತ್ತೇವು ಹೊಲಕೆಲ್ಲ” ಅಕರ ಗ್ರಂಥದ ಮರುಮುದ್ರಣದ ಪುಸ್ತಕಗಳನ್ನು ಖರೀದಿಸಿ ಮಾತನಾಡಿದರು.

ಅಂಚೆ ಪ್ರತಿಷ್ಠಾನದ ವತಿಯಿಂದ 25,000 ರೂಗಳ ಪುಸ್ತಕಗಳನ್ನು ಪಡೆದ ಅವರು ತರೀಕೆರೆ ತಾಲ್ಲೂಕಿನ ಎಲ್ಲರ ಮನೆಯಲ್ಲಿ, ಶಾಲೆಗಳಲ್ಲಿ ಮತ್ತು ಗ್ರಂಥಾಲಯದಲ್ಲಿ ಇಟ್ಟು ಕೊಂಡು ಓದುವ ಪುಸ್ತಕ ಇದಾಗಿದೆ ಎಂದರು.

ಸಮ್ಮೇಳನ ನಡೆದಾಗ 19 ವರ್ಷದ ಯುವಕನಾಗಿ ಬಹು ಹತ್ತಿರದಿಂದ ಗೊ.ರು.ಚನ್ನಬಸಪ್ಪ ಮತ್ತು ಜಾನಪದ ಕೋಗಿಲೆ ಕೆ.ಆರ್.ಲಿಂಗಪ್ಪ ಮತ್ತು ಊರಿನವರ ಸಹಕಾರದಿಂದ ಸಂಘಟನೆ ಎಲ್ಲರೂ ಮೆಚ್ಚುವಂತಾಯಿತು ಎಂದರಲ್ಲದೆ ಹೊನ್ನ ಬಿತ್ತೇವು ಹೊಲಕೆಲ್ಲ ಪುಸ್ತಕ ಇಂದಿಗೂ ಕೂಡ ಉತ್ಕೃಷ್ಟವಾಗಿದ್ದು ಇದರಿಂದ ವಿಶ್ವದ ಏಕೈಕ ಜಾನಪದ ವಿಶ್ವ ವಿದ್ಯಾಲಯ ರೂಪಿತವಾಗಿರುವುದು ತರೀಕೆರೆ ಗೆ ಕೀರ್ತಿ ತಂದಿದೆ ಎಂದರು.

ಸಮ್ಮೇಳನಕ್ಕೆ ಬಂದ ಮಹಾರಾಜರಾದ ನಾಲ್ವಡಿ ಜಯಚಾಮರಾಜೇಂದ್ರ ಒಡೆಯರ್ ಮತ್ತು ಸಾಹಿತಿಗಳು,ಕವಿಗಳು ಮತ್ತು ಕಲಾವಿದರ ಸ್ಪರ್ಶದಿಂದ ತರೀಕೆರೆ ತಾಲ್ಲೂಕಿಗೆ ಒಳ್ಳೆಯ ದಾಗಿದೆ.ಮತ್ತೆ ಈ ಪುಸ್ತಕ ಮರುಮುದ್ರಣ ಮಾಡಿದ ಎನ್.ರಾಜುರವರ ಕೆಲಸ ಇತ್ತೀಚಿನ ಪೀಳಿಗೆಯ ಜನರಿಗೆ ಸ್ಪೂರ್ತಿ ತರುತ್ತದೆ ಎಂದರಲ್ಲದೆ ಜಾನಪದ ರತ್ನ ಕೆ.ಆರ್.ಲಿಂಗಪ್ಪನವರ ನೂರನೆ ವರ್ಷದ ದಿವ್ಯ ಸ್ಮರಣೆ ಮಾಡಲು ಸೂಚಿಸಿದರು.

ತರೀಕೆರೆ ವಕೀಲರ ಸಂಘದ ಅಧ್ಯಕ್ಷರಾದ ದಿನೇಶ್ ಕುಮಾರ್ ಮಾತನಾಡಿ ಪುಸ್ತಕಗಳನ್ನು ಯಾರು ಬೇಕಾದರು ಮುದ್ರಿಸ ಬಹುದು ಆದರೆ ಪುಸ್ತಕಗಳನ್ನು ಓದಿ ಮನನ ಮಾಡಿಕೊಂಡು ಮುದ್ರಸಿದರೆ ಮಾತ್ರ ಬೆಲೆ ಬರುತ್ತದೆ. ಹೊನ್ನ ಬಿತ್ತೇವು ಹೊಲಕೆಲ್ಲ ಪುಸ್ತಕ ಬಹಳ ಉಪಯುಕ್ತವಾದದ್ದು ಇದನ್ನು ಕೊಂಡು ಓದಬೇಕು ಎಂದರು.

ಪುರಸಭಾ ಸದಸ್ಯ ಅಶೋಕ್ ಮಾತನಾಡಿ ನಮ್ಮೂರ ಹೆಮ್ಮೆಯನ್ನು ಹೆಚ್ಚಿಸಿದ ಇಂತಹ ಪುಸ್ತಕ ಮುದ್ರಣ ಮಾಡಿದ್ದಕ್ಕೆ ಕೃತಜ್ಞತೆ ತಿಳಿಸಿದರು.

ವಕೀಲರಾದ ಸುರೇಶ್ಚಂದ್ರ ವೀರಭದ್ರಯ್ಯ ಹರ್ಷ ವ್ಯಕ್ತಪಡಿಸಿದರು.ಹಿರಿಯ ಪತ್ರಕರ್ತ ಅನಂತ್ ನಾಡಿಗ್ ಈ ಕಾರ್ಯಕ್ರಮ ಹಮ್ಮಿಕೊಂಡ ಔಚಿತ್ಯ ಮತ್ತು ಪರಿಣಾಮಗಳ ಬಗ್ಗೆ ವಿವರಿಸಿ ಅಂಚೆ ಪ್ರತಿಷ್ಠಾನ ಇಂತಹ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಿರುವುದು ಹೆಮ್ಮೆಯಾಗಿದೆ ಎಂದರು.

ಹಿರಿಯ ಪತ್ರಕರ್ತ ಅಂಚೆ ನಾಗಭೂಷಣ್ ಮತ್ತು ವಕೀಲರ ಸಂಘದ ಅಧ್ಯಕ್ಷ ದಿನೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

Develop a reading habit among young people

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...