Home ಯುವ ಜನತೆ ಓದುವ ಹವ್ಯಾಸ ಬೆಳೆಸಿಕೊಳ್ಳಿ : ಅಂಚೆ ನಾಗಭೂಷಣ್
HomeLatest Newsnamma chikmagalurTarikere

ಯುವ ಜನತೆ ಓದುವ ಹವ್ಯಾಸ ಬೆಳೆಸಿಕೊಳ್ಳಿ : ಅಂಚೆ ನಾಗಭೂಷಣ್

Share
Share

ತರೀಕೆರೆ: ಯುವಜನತೆ ಹಾಗು ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವುದರಿಂದ ಜ್ಞಾನದ ಜೊತೆಗೆ ಸ್ವಾಭಿಮಾನದಿಂದ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಅಂಚೆ ಪ್ರತಿಷ್ಠಾನ ದ ಅಧ್ಯಕ್ಷರಾದ ಹಿರಿಯ ಪತ್ರಕರ್ತ ಅಂಚೆ ನಾಗಭೂಷಣ್ ಅಭಿಪ್ರಾಯ ಪಟ್ಟರು.

ತರೀಕೆರೆಯಲ್ಲಿ 1967 ರಲ್ಲಿ ನಡೆದ ಪ್ರಪ್ರಥಮ ರಾಜ್ಯ ಜಾನಪದ ಸಮ್ಮೇಳನದಲ್ಲಿ ಬಿಡುಗಡೆಯಾಗಿದ್ದ” ಹೊನ್ನ ಬಿತ್ತೇವು ಹೊಲಕೆಲ್ಲ” ಅಕರ ಗ್ರಂಥದ ಮರುಮುದ್ರಣದ ಪುಸ್ತಕಗಳನ್ನು ಖರೀದಿಸಿ ಮಾತನಾಡಿದರು.

ಅಂಚೆ ಪ್ರತಿಷ್ಠಾನದ ವತಿಯಿಂದ 25,000 ರೂಗಳ ಪುಸ್ತಕಗಳನ್ನು ಪಡೆದ ಅವರು ತರೀಕೆರೆ ತಾಲ್ಲೂಕಿನ ಎಲ್ಲರ ಮನೆಯಲ್ಲಿ, ಶಾಲೆಗಳಲ್ಲಿ ಮತ್ತು ಗ್ರಂಥಾಲಯದಲ್ಲಿ ಇಟ್ಟು ಕೊಂಡು ಓದುವ ಪುಸ್ತಕ ಇದಾಗಿದೆ ಎಂದರು.

ಸಮ್ಮೇಳನ ನಡೆದಾಗ 19 ವರ್ಷದ ಯುವಕನಾಗಿ ಬಹು ಹತ್ತಿರದಿಂದ ಗೊ.ರು.ಚನ್ನಬಸಪ್ಪ ಮತ್ತು ಜಾನಪದ ಕೋಗಿಲೆ ಕೆ.ಆರ್.ಲಿಂಗಪ್ಪ ಮತ್ತು ಊರಿನವರ ಸಹಕಾರದಿಂದ ಸಂಘಟನೆ ಎಲ್ಲರೂ ಮೆಚ್ಚುವಂತಾಯಿತು ಎಂದರಲ್ಲದೆ ಹೊನ್ನ ಬಿತ್ತೇವು ಹೊಲಕೆಲ್ಲ ಪುಸ್ತಕ ಇಂದಿಗೂ ಕೂಡ ಉತ್ಕೃಷ್ಟವಾಗಿದ್ದು ಇದರಿಂದ ವಿಶ್ವದ ಏಕೈಕ ಜಾನಪದ ವಿಶ್ವ ವಿದ್ಯಾಲಯ ರೂಪಿತವಾಗಿರುವುದು ತರೀಕೆರೆ ಗೆ ಕೀರ್ತಿ ತಂದಿದೆ ಎಂದರು.

ಸಮ್ಮೇಳನಕ್ಕೆ ಬಂದ ಮಹಾರಾಜರಾದ ನಾಲ್ವಡಿ ಜಯಚಾಮರಾಜೇಂದ್ರ ಒಡೆಯರ್ ಮತ್ತು ಸಾಹಿತಿಗಳು,ಕವಿಗಳು ಮತ್ತು ಕಲಾವಿದರ ಸ್ಪರ್ಶದಿಂದ ತರೀಕೆರೆ ತಾಲ್ಲೂಕಿಗೆ ಒಳ್ಳೆಯ ದಾಗಿದೆ.ಮತ್ತೆ ಈ ಪುಸ್ತಕ ಮರುಮುದ್ರಣ ಮಾಡಿದ ಎನ್.ರಾಜುರವರ ಕೆಲಸ ಇತ್ತೀಚಿನ ಪೀಳಿಗೆಯ ಜನರಿಗೆ ಸ್ಪೂರ್ತಿ ತರುತ್ತದೆ ಎಂದರಲ್ಲದೆ ಜಾನಪದ ರತ್ನ ಕೆ.ಆರ್.ಲಿಂಗಪ್ಪನವರ ನೂರನೆ ವರ್ಷದ ದಿವ್ಯ ಸ್ಮರಣೆ ಮಾಡಲು ಸೂಚಿಸಿದರು.

ತರೀಕೆರೆ ವಕೀಲರ ಸಂಘದ ಅಧ್ಯಕ್ಷರಾದ ದಿನೇಶ್ ಕುಮಾರ್ ಮಾತನಾಡಿ ಪುಸ್ತಕಗಳನ್ನು ಯಾರು ಬೇಕಾದರು ಮುದ್ರಿಸ ಬಹುದು ಆದರೆ ಪುಸ್ತಕಗಳನ್ನು ಓದಿ ಮನನ ಮಾಡಿಕೊಂಡು ಮುದ್ರಸಿದರೆ ಮಾತ್ರ ಬೆಲೆ ಬರುತ್ತದೆ. ಹೊನ್ನ ಬಿತ್ತೇವು ಹೊಲಕೆಲ್ಲ ಪುಸ್ತಕ ಬಹಳ ಉಪಯುಕ್ತವಾದದ್ದು ಇದನ್ನು ಕೊಂಡು ಓದಬೇಕು ಎಂದರು.

ಪುರಸಭಾ ಸದಸ್ಯ ಅಶೋಕ್ ಮಾತನಾಡಿ ನಮ್ಮೂರ ಹೆಮ್ಮೆಯನ್ನು ಹೆಚ್ಚಿಸಿದ ಇಂತಹ ಪುಸ್ತಕ ಮುದ್ರಣ ಮಾಡಿದ್ದಕ್ಕೆ ಕೃತಜ್ಞತೆ ತಿಳಿಸಿದರು.

ವಕೀಲರಾದ ಸುರೇಶ್ಚಂದ್ರ ವೀರಭದ್ರಯ್ಯ ಹರ್ಷ ವ್ಯಕ್ತಪಡಿಸಿದರು.ಹಿರಿಯ ಪತ್ರಕರ್ತ ಅನಂತ್ ನಾಡಿಗ್ ಈ ಕಾರ್ಯಕ್ರಮ ಹಮ್ಮಿಕೊಂಡ ಔಚಿತ್ಯ ಮತ್ತು ಪರಿಣಾಮಗಳ ಬಗ್ಗೆ ವಿವರಿಸಿ ಅಂಚೆ ಪ್ರತಿಷ್ಠಾನ ಇಂತಹ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಿರುವುದು ಹೆಮ್ಮೆಯಾಗಿದೆ ಎಂದರು.

ಹಿರಿಯ ಪತ್ರಕರ್ತ ಅಂಚೆ ನಾಗಭೂಷಣ್ ಮತ್ತು ವಕೀಲರ ಸಂಘದ ಅಧ್ಯಕ್ಷ ದಿನೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

Develop a reading habit among young people

Share

Leave a comment

Leave a Reply

Your email address will not be published. Required fields are marked *

Don't Miss

ಹಣ ದೋಚಿದ್ದ ಇಬ್ಬರು ಅಂತರ್ ಜಿಲ್ಲಾ ದರೋಡೆಕೋರರ ಬಂಧನ

ಚಿಕ್ಕಮಗಳೂರು : ಮನುಷ್ಯತ್ವಕ್ಕೆ ಮಸಿ ಬಳಿಯುವಂತೆ ವೃದ್ಧ ರೈತರೊಬ್ಬರ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದ ಇಬ್ಬರು ಅಂತರ್ ಜಿಲ್ಲಾ ದರೋಡೆಕೋರರನ್ನು ಚಿಕ್ಕಮಗಳೂರು ನಗರ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕುರಿಚಿಕ್ಕನಹಳ್ಳಿಯ ನಿಂಗೇಗೌಡ...

ಹೋಂ ಸ್ಟೇ’ನಲ್ಲಿ ಯುವತಿ ಸಾವು-ಮಾಲೀಕ ವಿರುದ್ಧ ಪ್ರಕರಣ ದಾಖಲು

ಚಿಕ್ಕಮಗಳೂರು : ತಾಲೂಕಿನ ಹಾಂದಿ ಗ್ರಾಮದ ‘ಹಿಪ್ಲಾ ಹೋಂ ಸ್ಟೇ’ನಲ್ಲಿ ನಡೆದಿದ್ದ ಯುವತಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ಕು ತಿಂಗಳ ಬಳಿಕ ಮಾಲೀಕ ಸುಧಾಕರ್ ವಿರುದ್ಧ ಅಲ್ಲೂರು ಪೊಲೀಸ್ ಠಾಣೆಯಲ್ಲಿ...

Related Articles

ಇಂದಿನಿಂದ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ

ಚಿಕ್ಕಮಗಳೂರು : ಶನಿವಾರದಿಂದ ರಾಜ್ಯಾದ್ಯಂತ 2025 26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗುತ್ತಿದ್ದು ಇದಕ್ಕೆ...

ಸಾವಿನ ಹೆಣ ಇಟ್ಟುಕೊಂಡು ಕೀಳು ಮಟ್ಟದ ರಾಜಕೀಯ

ಚಿಕ್ಕಮಗಳೂರು: ಇತ್ತೀಚೆಗೆ ನಡೆದ ಆನೆ ದಾಳಿಯಿಂದಾದ ಸಾವು ಮತ್ತು ಅದರ ಸುತ್ತ ನಡೆಯುತ್ತಿರುವ ಬೆಳವಣಿಗೆಗಳ ಕುರಿತು...

ವೃದ್ಧ ಮಹಿಳೆಯೊಬ್ಬರ ಚಿನ್ನದ ಸರ ಕಳವು

ಚಿಕ್ಕಮಗಳೂರು: ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ವೃದ್ಧ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿ...

ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಚಿನ್ನಾಭರಣ ಕಳ್ಳತನ

ಚಿಕ್ಕಮಗಳೂರು: ಕೆ.ಎಂ. ರಸ್ತೆಯ ಕತ್ರಿಮಾರಮ್ಮ ದೇವಸ್ಥಾನದ ಸಮೀಪವಿರುವ ಬಸ್ ನಿಲ್ದಾಣದಿಂದ ಸಖರಾಯಪಟ್ಟಣಕ್ಕೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ...