Home Latest News ಸಂಕಷ್ಟದಲ್ಲಿ ಜಿಲ್ಲೆಯ ಜನತೆ ಸಚಿವ ಕೆ.ಜೆ.ಜಾರ್ಜ್ ನಾಪತ್ತೆ..?
Latest Newschikamagalurnamma chikmagalur

ಸಂಕಷ್ಟದಲ್ಲಿ ಜಿಲ್ಲೆಯ ಜನತೆ ಸಚಿವ ಕೆ.ಜೆ.ಜಾರ್ಜ್ ನಾಪತ್ತೆ..?

Share
????????????????????????????????????
Share

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಇಪ್ಪತ್ತು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದೆ ಇದರಿಂದಾಗಿ ರಸ್ತೆಗಳು ಗುಂಡಿಗಳಾಗಿ ಜನ ತಿರುಗಾಡಲು ಕಷ್ಟವಾಗಿದೆ.ರೈತರು ದಿಕ್ಕೆಟ್ಟು ಕುತಿದ್ದಾರೆ ತರಕಾರಿ ಬೆಳೆಗಳು ಕೊಳೆತರೆ ಕಾಫಿ,ಅಡಿಕೆ ತೋಟಗಳು ಕರಗುತ್ತಿವೆ.

ಹಲವಾರು ಮನೆಗಳು ಕುಸಿದು ಜನ ಬೀದಿಯಲ್ಲಿ ಇರುವಂತಹ ಪರಿಸ್ಥಿತಿ ನೋಡಿದರೆ ಎಂತವರು ಆಯ್ಯೋ ಎನ್ನುತ್ತಿರುವಾಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ನಾಪತ್ತೆಯಾಗಿರುವುದು ಸ್ವತಃ ಕಾಂಗ್ರೆಸ್ ನವರಿಗೆ ಬೇಸರ ತಂದಿದೆ.

ಜಿಲ್ಲೆಯಲ್ಲಿ ಪ್ರವಾಸ ಮಾಡಿ ಸೌಜನ್ಯ ತೋರಿಸದ ತುರ್ತಾಗಿ ಮಾಡಬೇಕಾದ ಕಾಮಗಾರಿಗಳನ್ನು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡದೆ ಐಷಾರಾಮಿ ಮಂತ್ರಿ ಜಾರ್ಜ್ ಸಾವಿರಾರು ಎಕರೆ ಕಾಫಿ ತೋಟ ನೋಡಲು ಮತ್ತು ಶ್ರೀಮಂತರ ಮನೆಯ ಮದುವೆಗಳಿಗೆ ಬಂದು ಹೋಗುತ್ತಾರೆ ಎಂದು ಜನ ದೂರುತ್ತಾರೆ.

ಜಿಲ್ಲೆಯ ಯಾವ ಇಲಾಖೆಯ ಮೇಲೂ ಹಿಡಿತ ಸಾಧಿಸದ ಜಾರ್ಜ್‌ ಕಾಟಚಾರದ ಕೆ.ಡಿ.ಪಿ ಸಭೆ ನೆಡೆಸುವುದು ಸರ್ಕಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಬಿಟ್ಟರೆ ಗಂಭೀರ ಸಮಸ್ಯೆಗಳಾದ ಡೀಮ್ಡ್ ಫಾರೆಸ್ಟ್ ನಿಂದ ಜನ ಬೀದಿಗೆ ಬೀಳುವಂತಹ ಸ್ಥಿತಿ ಕಾಡು ಪ್ರಾಣಿಗಳ ಉಪಟಾಳ ಬೇರೆ ಇದರ ಬಗ್ಗೆ ಕನಿಷ್ಟ ಸೌಜನ್ಯಕಾದರು ಸಭೆ ಕರೆಯದ ಸಚಿವ ಜಾರ್ಜ್ ಬಂದ ಪುಟ್ಟ ಹೋದ ಪುಟ್ಟ ಎನ್ನುವಂತಾಗಿದೆ.

ಯಾವ ವಿಷಯವನ್ನು ಕೇಳಿಸಿಕೊಳ್ಳದ ನೋಡದ ಸಚಿವರು ನಮ್ಮ ಜಿಲ್ಲೆಗೆ ಬೇಕಾ ಎನ್ನುತ್ತಿದ್ದಾರೆ ಜನ.

ಜಿಲ್ಲೆಯ ಶಾಸಕರಿಗೆ ಈ ಬಗ್ಗೆ ಕೇಳಿದರೆ ಒಳ್ಳೆಯ ಮನುಷ್ಯ ಎಂದು ತಿಪ್ಪೇ ಸಾರಿಸುತ್ತಾರೆ.ವಿರೋಧ ಪಕ್ಷಗಳು ಕಾಟಚಾರಕ್ಕೆ ಪತ್ರಿಕಾ ಹೇಳಿಕೆ ನೀಡುವುದು ಬಿಟ್ಟರೆ ಬೇರೇನೂ ಮಾಡಲು ಸಾಧ್ಯ. ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವ ಸಚಿವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸುವುದು ಒಳ್ಳೆಯದು.

The people of the district are in distress. Is Minister K.J. George missing?

Share

Leave a comment

Leave a Reply

Your email address will not be published. Required fields are marked *

Don't Miss

ಹಣ ದೋಚಿದ್ದ ಇಬ್ಬರು ಅಂತರ್ ಜಿಲ್ಲಾ ದರೋಡೆಕೋರರ ಬಂಧನ

ಚಿಕ್ಕಮಗಳೂರು : ಮನುಷ್ಯತ್ವಕ್ಕೆ ಮಸಿ ಬಳಿಯುವಂತೆ ವೃದ್ಧ ರೈತರೊಬ್ಬರ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದ ಇಬ್ಬರು ಅಂತರ್ ಜಿಲ್ಲಾ ದರೋಡೆಕೋರರನ್ನು ಚಿಕ್ಕಮಗಳೂರು ನಗರ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕುರಿಚಿಕ್ಕನಹಳ್ಳಿಯ ನಿಂಗೇಗೌಡ...

ಹೋಂ ಸ್ಟೇ’ನಲ್ಲಿ ಯುವತಿ ಸಾವು-ಮಾಲೀಕ ವಿರುದ್ಧ ಪ್ರಕರಣ ದಾಖಲು

ಚಿಕ್ಕಮಗಳೂರು : ತಾಲೂಕಿನ ಹಾಂದಿ ಗ್ರಾಮದ ‘ಹಿಪ್ಲಾ ಹೋಂ ಸ್ಟೇ’ನಲ್ಲಿ ನಡೆದಿದ್ದ ಯುವತಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ಕು ತಿಂಗಳ ಬಳಿಕ ಮಾಲೀಕ ಸುಧಾಕರ್ ವಿರುದ್ಧ ಅಲ್ಲೂರು ಪೊಲೀಸ್ ಠಾಣೆಯಲ್ಲಿ...

Related Articles

ಇಂದಿನಿಂದ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ

ಚಿಕ್ಕಮಗಳೂರು : ಶನಿವಾರದಿಂದ ರಾಜ್ಯಾದ್ಯಂತ 2025 26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗುತ್ತಿದ್ದು ಇದಕ್ಕೆ...

ಸಾವಿನ ಹೆಣ ಇಟ್ಟುಕೊಂಡು ಕೀಳು ಮಟ್ಟದ ರಾಜಕೀಯ

ಚಿಕ್ಕಮಗಳೂರು: ಇತ್ತೀಚೆಗೆ ನಡೆದ ಆನೆ ದಾಳಿಯಿಂದಾದ ಸಾವು ಮತ್ತು ಅದರ ಸುತ್ತ ನಡೆಯುತ್ತಿರುವ ಬೆಳವಣಿಗೆಗಳ ಕುರಿತು...

ವೃದ್ಧ ಮಹಿಳೆಯೊಬ್ಬರ ಚಿನ್ನದ ಸರ ಕಳವು

ಚಿಕ್ಕಮಗಳೂರು: ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ವೃದ್ಧ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿ...

ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಚಿನ್ನಾಭರಣ ಕಳ್ಳತನ

ಚಿಕ್ಕಮಗಳೂರು: ಕೆ.ಎಂ. ರಸ್ತೆಯ ಕತ್ರಿಮಾರಮ್ಮ ದೇವಸ್ಥಾನದ ಸಮೀಪವಿರುವ ಬಸ್ ನಿಲ್ದಾಣದಿಂದ ಸಖರಾಯಪಟ್ಟಣಕ್ಕೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ...