ಚಿಕ್ಕಮಗಳೂರು: ಐಪಿಎಲ್ ಪಂದ್ಯದ ಫೈನಲ್ ಹಿನ್ನಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ಅಜ್ಜಂಪುರ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ೩೮ ಸಾವಿರ ನಗದು, ಒಂದು ಪೋರ್ಡ್ ಪಿಗೋ ಕಾರ್ ಹಾಗೂ ೪ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಅಜ್ಜಂಪುರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಬೆಟ್ಟಿಂಗ್ಗೆ ಬ್ರೇಕ್ ಹಾಕಲು ಎಸ್ಪಿ ವಿಕ್ರಂಅಮಟೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್ ಮಾರ್ಗದರ್ಶನದಲ್ಲಿ ಅಜ್ಜಂಪುರ ಪೊಲೀಸ್ ಠಾಣೆಯ ಇನ್ಸೆಕ್ಟರ್ ವಿರೇಂದ್ರ ಪಿಎಸ್ಐ ತಿಪ್ಪೇಶ್ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿತ್ತು.
ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರ ತಂಡ ಆರೋಪಿಗಳಾದ ಸಾಗರ್, ಗಗನ್ ಎಸ್ ಜಾಧವ್,ಗಗನ್ ಎಸ್ ದೇವಾಂಗ ಎಂಬ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಆರೋಪಿಗಳಿಂದ ಒಟ್ಟು ೩೮ ಸಾವಿರ ನಗದು ಕೆಎ-೦೩-ಎಂ.ಎಂ.-೭೩೯೫ ನೋಂದಣಿ ಸಂಖ್ಯೆಯ ಪೋರ್ಡ್ ಪಿಗೋ ಕಾರ್ ಹಾಗೂ ೪ ಮೊಬೈಲ್ ಗಳನ್ನು ವಶಕ್ಕೆ ಪಡೆದು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮತ್ತೊಬ್ಬ ಆರೋಪಿ ಉಡುಪಿಯ ರಾಘವೇಂದ್ರ ಅಲಿಯಾಸ್ ರಾಘು ಶೆಟ್ಟಿ ತಲೆಮರಿಸಿ ಕೊಂಡಿದ್ದು ಆತನ ಬಂಧನಕ್ಕೆ ಪೊಲೀಸರ ವಿಶೇಷ ತಂಡ ರಚಿಸಲಾಗಿದೆ
Three arrested in Ajjampura over cricket betting scam
Leave a comment