ಚಿಕ್ಕಮಗಳೂರು: ಕಳೆದ ಮೂರು ದಶಕಗಳಿಂದ ಚಿಕ್ಕಮಗಳೂರು, ಉಡುಪಿ,ದಕ್ಷಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ತೀವ್ರ ಬಿರುಸಿನಿಂದ ನಡೆಯುತ್ತಿದ್ದು ಪೊಲೀಸ್ ರಿಗೆ ಮತ್ತು ಸರ್ಕಾರಕ್ಕೆ ಕಿರಿ,ಕಿರಿ ತರಿಸಿತ್ತು.ಹಲವು ನಕ್ಸಲ್ ರು ಮತ್ತು ಕೆಲ ಪೊಲೀಸ್ ಮತ್ತು ಸಾರ್ವಜನಿಕರು ಹತರಾಗಿದ್ದು ಕೆಲವು ನಕ್ಸಲ್ ರು ಮುಖ್ಯವಾಹಿನಿಗೆ ಬಂದರು
ಕಳೆದ ಜನವರಿ ತಿಂಗಳತನಕ ನಕ್ಸಲ್ ಚಟುವಟಿಕೆ ತೀವ್ರವಾಗಿತ್ತು.ವಿಕ್ರಮ್ ಹತನಾದ ನಂತರ ಮುಂಡಗಾರು ಲತ ಜೊತೆ ಆರು ಜನರು ಮುಖ್ಯವಾಹಿನಿಗೆ ಬಂದ ನಂತರ ಕೋಟೆ ತೋಟ ರವೀಂದ್ರ ಒಬ್ಬನೇ ಇದ್ದ ಆತನು ಕೂಡ ಇಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ ಮುಖ್ಯವಾಹಿನಿ ಸೇರುವುದರೊಂದಿಗೆ ಕರ್ನಾಟಕ ರಾಜ್ಯ ನಕ್ಸಲ್ ಮುಕ್ತವಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಕಛೇರಿಯಿಂದ ಪ್ರಕಟಣೆ ಮಾಡಲಾಗಿದೆ.
ನಾಳೆ ಲಕ್ಷ್ಮಿ ಎಂಬ ಉಡುಪಿ ಮೂಲದ ನಕ್ಸಲ್ ಮುಖ್ಯವಾಹಿನಿಗೆ ಚಿಕ್ಕಮಗಳೂರು ಅಥವಾ ಉಡುಪಿಯಲ್ಲಿ ಸೇರಲಿದ್ದಾರೆ. ಲಕ್ಷ್ಮಿ ಆಂಧ್ರದಲ್ಲಿ ಹೊಮ್ ಗಾರ್ಡ್ ಆಗಿದ್ದರು ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.
ನಕ್ಸಲ್ ಚಟುವಟಿಕೆ ಕೊನೆಗಾಣಿಸಲು ಶ್ರಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಒಟ್ಟು 22 ಜನರಿಗೆ ಮುಖ್ಯಮಂತ್ರಿ ಪದಕ ನೀಡಲು ತೀರ್ಮಾನ ಮಾಡಿದ್ದು ಹೆಸರುಗಳನ್ನು ಅಂತಿಮಗೊಳಿಸಿದ ನಂತರ ಪದಕ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಕಛೇರಿ ಮೂಲಗಳು ತಿಳಿಸಿವೆ.
Karnataka is a Naxal-free state.
Leave a comment