Home District In-charge Minister George:ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್ ರಿಂದ ಹಿಡಿತ ತಪ್ಪಿದ ಜಿಲ್ಲಾಡಳಿತ
Home

District In-charge Minister George:ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್ ರಿಂದ ಹಿಡಿತ ತಪ್ಪಿದ ಜಿಲ್ಲಾಡಳಿತ

Share
ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್
ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್
Share

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್ ನವೆಂಬರ್ ತಿಂಗಳು ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಮಾಡಲು ಬಂದು ಹೋದವರು ಇಂದು ಗಣರಾಜ್ಯೋತ್ಸವದ ಧ್ವಜಾರೋಹಣಕ್ಕೆ 9 ಗಂಟೆಗೆ ಬಂದು 11ಗಂಟೆಗೆ ಬೆಂಗಳೂರಿಗೆ ತೆರಳಲಿದ್ದಾರೆ.

ಜಿಲ್ಲೆಯಲ್ಲಿ ಆನೇಕ ಸಮಸ್ಯೆಗಳಿವೆ ಅವುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯುವುದಿಲ್ಲ ಕಾಂಗ್ರೆಸ್ ಮುಖಂಡರು ಹೇಳಲು ಹೋದರೆ ಅವರ ಮೇಲೆ ರೇಗುವುದರಿಂದ ಕಾಫಿ ತೋಟದ ಉಸ್ತುವಾರಿಗೆ ಬಂದಿರಬೇಕು ಎಂದು ಸುಮ್ಮನಾಗುತ್ತಾರೆ.

ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ನಿನ್ನೆ ಇಂದಿನದಲ್ಲ ಶಾಶ್ವತ ಪರಿಹಾರ ಕಂಡುಕೊಳ್ಳುದಿದ್ದರೆ ರೈತರು,ಕಾರ್ಮಿಕರು ಪ್ರಾಣ ಕಳೆದುಕೊಳ್ಳ ಬೇಕಾಗಿದೆ. ಕಾಡಾನೆ ಜೊತೆಗೆ ಕಾಡು ಕೋಣದ ಹಾವಳಿಯಿಂದ ಪ್ರಾಣ ಕಳೆದುಕೊಂಡರು ತಿರುಗಿ ನೋಡಲಿಲ್ಲ.

ಕಾಂಗ್ರೆಸ್ ಸರ್ಕಾರ ಬಂದು ಇಪ್ಪತ್ತು ತಿಂಗಳಾದರು ಜಿಲ್ಲೆಯ ಆಡಳಿತ ಬದಲಾಗಿಲ್ಲ ಎನ್ನುವುದಕ್ಕೆ ಅಕ್ರಮವಾಗಿ ಹಕ್ಕು ಪತ್ರ ನೀಡಿ ಕಾಸು ಮಾಡಿಕೊಂಡ ಒಂದಿಬ್ಬರನ್ನು ಬಿಟ್ಟರೆ ಅಯಾಕಟ್ಟಿನ ಜಾಗದಲ್ಲಿ 136 ಜನ ಠಾಳಯಿಸುತ್ತಿದ್ದಾರೆ ನಾವು ಕೊಡಬೇಕಾದವರಿಗೆ ಕೊಟ್ಟಿದ್ದೇವೆ ನಮ್ಮ ಮುಟ್ಟಲಿ ನೋಡುವ ಎನ್ನುತ್ತಾರೆ .ಬಿಜೆಪಿ ಆಡಳಿತದಲ್ಲಿ ಇದ್ದವರೆ ಮುಂದುವರೆಸಿರುವುದು ಜಾರ್ಜ್‌ ಹೆಸರಿನಲ್ಲಿ ಹಬ್ಬ ಮಾಡುತ್ತಿದ್ದಾರೆ.

ವಿದ್ಯುತ್ ಮಂತ್ರಿಯಾದರು ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದೆ .ಸರಿಯಾಗಿ ಕರೆಂಟ್ ಕೊಡುತ್ತಿಲ್ಲ ಅಕ್ರಮವಾಗಿ ವಿದ್ಯುತ್ ಕದಿಯುವವರಿಗೆ ಇಲಾಖೆಯರು ಸಹಕರಿಸುತ್ತಿದ್ದಾರೆ ಎಂದು ರೈತ ಸಂಘಗಳ ದೂರು.

ಸಿ.ಟಿ.ರವಿ ಶಿಷ್ಯನಂತೆ ಜಿಲ್ಲಾ ಸರ್ಜನ್ ಆಗಿ ಬಂದ ಮೋಹನ್ ಕುಮಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೆಂಟ ಎಂದೇಳುತ್ತ ಅಕ್ರಮವಾಗಿ ಕೇಸ್ ಸೀಟ್ ಮಾರುವುದು ಪರಿಕರ ಕೊಳ್ಳುವದರಲ್ಲಿ ಕಮೀಷನ್ ಪಡೆಯುವುದು ಕರೋನ ಸಮಯದಲ್ಲಿ ಮಾಡಿರುವ ಅವ್ಯವಹಾರ ಮುಚ್ಚಿ ಕೊಳ್ಳಲು ಬೇಕಾದ ದಾರಿ ಹುಡುಕಿಕೊಂಡಿದ್ದಾರೆ.

ಜಿಲ್ಲೆಗೂ ಜಾರ್ಜ್ ಗೆ ಏನೇನು ಸಂಬಂಧ ಇಲ್ಲದವರಂತೆ ಬಂದು ಹೋಗುವುದರಿಂದ ಜಿಲ್ಲಾಡಳಿತದ ಮೇಲೆ ಹಿಡಿತ ತಪ್ಪಿದೆ ಇದಕ್ಕೆ ವಯಸ್ಸು ಕೂಡ ಕಾರಣವಿರಬಹುದು.

District administration out of control by District In-charge Minister George

Share

Leave a comment

Leave a Reply

Your email address will not be published. Required fields are marked *

Don't Miss

ಹಣ ದೋಚಿದ್ದ ಇಬ್ಬರು ಅಂತರ್ ಜಿಲ್ಲಾ ದರೋಡೆಕೋರರ ಬಂಧನ

ಚಿಕ್ಕಮಗಳೂರು : ಮನುಷ್ಯತ್ವಕ್ಕೆ ಮಸಿ ಬಳಿಯುವಂತೆ ವೃದ್ಧ ರೈತರೊಬ್ಬರ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದ ಇಬ್ಬರು ಅಂತರ್ ಜಿಲ್ಲಾ ದರೋಡೆಕೋರರನ್ನು ಚಿಕ್ಕಮಗಳೂರು ನಗರ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕುರಿಚಿಕ್ಕನಹಳ್ಳಿಯ ನಿಂಗೇಗೌಡ...

ಹೋಂ ಸ್ಟೇ’ನಲ್ಲಿ ಯುವತಿ ಸಾವು-ಮಾಲೀಕ ವಿರುದ್ಧ ಪ್ರಕರಣ ದಾಖಲು

ಚಿಕ್ಕಮಗಳೂರು : ತಾಲೂಕಿನ ಹಾಂದಿ ಗ್ರಾಮದ ‘ಹಿಪ್ಲಾ ಹೋಂ ಸ್ಟೇ’ನಲ್ಲಿ ನಡೆದಿದ್ದ ಯುವತಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ಕು ತಿಂಗಳ ಬಳಿಕ ಮಾಲೀಕ ಸುಧಾಕರ್ ವಿರುದ್ಧ ಅಲ್ಲೂರು ಪೊಲೀಸ್ ಠಾಣೆಯಲ್ಲಿ...

Related Articles

ಇಂದಿನಿಂದ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ

ಚಿಕ್ಕಮಗಳೂರು : ಶನಿವಾರದಿಂದ ರಾಜ್ಯಾದ್ಯಂತ 2025 26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗುತ್ತಿದ್ದು ಇದಕ್ಕೆ...

ಸಾವಿನ ಹೆಣ ಇಟ್ಟುಕೊಂಡು ಕೀಳು ಮಟ್ಟದ ರಾಜಕೀಯ

ಚಿಕ್ಕಮಗಳೂರು: ಇತ್ತೀಚೆಗೆ ನಡೆದ ಆನೆ ದಾಳಿಯಿಂದಾದ ಸಾವು ಮತ್ತು ಅದರ ಸುತ್ತ ನಡೆಯುತ್ತಿರುವ ಬೆಳವಣಿಗೆಗಳ ಕುರಿತು...

ವೃದ್ಧ ಮಹಿಳೆಯೊಬ್ಬರ ಚಿನ್ನದ ಸರ ಕಳವು

ಚಿಕ್ಕಮಗಳೂರು: ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ವೃದ್ಧ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿ...

ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಚಿನ್ನಾಭರಣ ಕಳ್ಳತನ

ಚಿಕ್ಕಮಗಳೂರು: ಕೆ.ಎಂ. ರಸ್ತೆಯ ಕತ್ರಿಮಾರಮ್ಮ ದೇವಸ್ಥಾನದ ಸಮೀಪವಿರುವ ಬಸ್ ನಿಲ್ದಾಣದಿಂದ ಸಖರಾಯಪಟ್ಟಣಕ್ಕೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ...