ಚಿಕ್ಕಮಗಳೂರು: ಕಾಂಗ್ರೆಸ್ ಕಾರ್ಯಕರ್ತರೊಬ್ಬರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಜಯಪುರ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಕಳೆದ ರಾತ್ರೆ ನಡೆದಿದೆ
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೀರ್ತಿರಾಜ್ ಬಂಧನದ ಹಿನ್ನೆಲೆಯಲ್ಲಿ ಕೊಪ್ಪ ತಾಲೂಕಿನ ಜಯಪುರ ಠಾಣೆ ಪೊಲೀಸರು ಪ್ರಕರಣ ಒಂದರ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿದ್ದರು
ಭದ್ರಾ ಎಸ್ಟೇಟ್ ಮತ್ತು ಕೀರ್ತಿರಾಜ್ ನಡುವೆ ಹಲವು ದಿನಗಳಿಂದ ಗಲಾಟೆ ನಡೆಯುತ್ತಿದ್ದು ಇತ್ತೀಚಿಗೆ ಹೈಕೋರ್ಟಿನಲ್ಲಿ ಕೀರ್ತಿರಾಜಪುರ ತೀರ್ಪು ಬಂದಿತ್ತು
ಮತ್ತೆ ಕಾಫಿ ಹಣ್ಣು ಕೊಯ್ಯುವ ವಿಚಾರದಲ್ಲಿ ಎಸ್ಟೇಟ್ ಮೇನೆಜರ್ ಮತ್ತು ಕೀರ್ತಿರಾಜ್ ನಡುವೆ ಗಲಾಟೆ ನಡೆದು ಸ್ಥಳದಲ್ಲಿ ಕಾರ್ಮಿಕರು ಕಲ್ಲುತೂರಾಟ ನಡೆದು ಪ್ರಕರಣ ದಾಖಲಾಗಿತ್ತು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ರಾತ್ರಿ ಕೀರ್ತಿರಾಜ್ ಅನ್ನು ಬಂಧಿಸಿದ್ದು ಸ್ಥಳೀಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಜಯಪುರ ಠಾಣೆಗೆ ಮುತ್ತಿಗೆ ಹಾಕಿ ಸ್ಥಳಕ್ಕೆ ಶಾಸಕ ರಾಜೇಗೌಡ ಆಗಮಿಸಬೇಕೆಂದು ಒತ್ತಾಯಿಸಿದರು
ಪ್ರಕರಣ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಹಾಗೂ ಶಾಸಕ ರಾಜೇಗೌಡ ಆಗಮಿಸಿ ಮಾತುಕಥೆ ನಡೆಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ತಿಳಿಯಾಯಿತು
Congress worker arrested – Jaipur police station under siege
Leave a comment