Home Dr. Mohan Kumar:ಡಾ.ಮೋಹನ್ ಕುಮಾರ್ ರಂಗಿನಾಟ ಕೇಸ್ ಸೀಟ್ ಆಕ್ರಮ ಮಾರಾಟ ?
Home

Dr. Mohan Kumar:ಡಾ.ಮೋಹನ್ ಕುಮಾರ್ ರಂಗಿನಾಟ ಕೇಸ್ ಸೀಟ್ ಆಕ್ರಮ ಮಾರಾಟ ?

Share
ಡಾ.ಮೋಹನ್ ಕುಮಾರ್
ಡಾ.ಮೋಹನ್ ಕುಮಾರ್
Share

ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಮೋಹನ್ ಕುಮಾರ್ ಕಳೆದ ಐದುವರೆ ವರ್ಷಗಳಿಂದ ರೆಸ್ಟ್ ಲೇಸ್ ಆಡಳಿತ ನಡೆಸುತ್ತಿದ್ದಾರೆ. ಮಳ್ಳ,ಮಳ್ಳ ಮಂಚಕ್ಕೆ ಎಷ್ಟು ಕಾಲು ಎಂದರೆ ನೇರವಾಗಿ ನಾಲ್ಕು ಎನ್ನುವ ಬದಲು ಮೂರು ಮತ್ತೊಂದು ಎಂದು ಹೇಳುತ್ತಾರೆ ಎಂದು ಸಿಬ್ಬಂದಿ ಹೇಳುತ್ತಾರೆ.ಮಾತು ಮಾತ್ರ ಮೃದು ಮಾಡುವ ಕೆಲಸ ಮಾತ್ರ ಯಾರಿಗೂ ಗೊತ್ತಾಗಲ್ಲ ಆಸ್ಪತ್ರೆ ಈಗ ವೈದ್ಯಕೀಯ ಕಾಲೇಜ್ ಗೆ ಸೇರ್ಪಡೆ ಆಗಿದ್ದು ಡೀನ್ ಮುಖ್ಯಸ್ಥರು ಆದರೂ ಮೋಹನ್ ಕುಮಾರ್ ಮಾತ್ರ ಜೇಬು ಭರ್ತಿ ಮಾಡಿಕೊಳ್ಳುವ ಕೈಚಳಕ ಮಾತ್ರ ಭರ್ಜರಿಯಾಗಿ ನಡೆಯುತ್ತಿದೆ.

ಮೈತ್ರಿ ಎಂಬ ಹೊರಗುತ್ತಿಗೆ ಸಿಬ್ಬಂದಿ ಕಳೆದ ಒಂದು ವರ್ಷದಿಂದ ಮೂಲ ದಾಖಲೆ ಕೊಡದೆ ಕೆಲಸ ಮಾಡುತ್ತಿರುವುದು ಸರ್ಜನ್ ಕೃಪೆಯಿಂದ ಎನ್ನುತ್ತಾರೆ .ಇತ್ತೀಚೆಗೆ ಡೀನ್ ಗಮನಕ್ಕೆ ತಂದ ಮೇಲೆ ನೋಟೀಸ್ ನೀಡಲಾಗಿದೆ.ಇದಕ್ಕೆ ಬೇಸರ ಮಾಡಿಕೊಂಡು ರಜಾ ಹಾಕಿದ್ದಾರೆ ಎಂದು ವೈದ್ಯರು ಗೇಲಿ ಮಾಡುತ್ತಿದ್ದಾರೆ.

ಜನವರಿ 7ನೇ ತಾರೀಖು ಒಂದು ಲಾರಿ ಲೋಡ್ ಕೇಸ್ ಸೀಟ್ (ವೈದ್ಯಕೀಯ ತಪಾಸಣಾ ವರದಿ) ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಸಿಬ್ಬಂದಿ ವರ್ಗದವರು ಮಾತನಾಡುತ್ತಿದ್ದಾರೆ. ವೈದ್ಯಕೀಯ ತಪಾಸಣಾ ವರದಿಯ ಪೇಪರ್ ಮಾರಲು ನಿಯಮಗಳಿವೆ.ಐದು ವರ್ಷಗಳ ಅವಧಿ ಮುಗಿದ ನಂತರ ಒಂದು ಸಮಿತಿಯಿದ್ದು ಅವರು ವರದಿ ನೀಡಬೇಕು ನಂತರ ಸ್ಥಳೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಟೆಂಡರ್ ಕರೆಯಬೇಕು ಅತಿ ಹೆಚ್ಚು ಬೆಲೆಗೆ ಮಾರಾಟಮಾಡಬೇಕು ಈಗ ಈ ಅಧಿಕಾರವು ಮೋಹನ್ ಕುಮಾರ್ ಗೆ ಇಲ್ಲ ಈ ಬಗ್ಗೆ ಡೀನ್ ವಿಚಾರಿಸಿದರೆ ನನಗೆ ಗೊತ್ತಿಲ್ಲ ಎನ್ನುತ್ತಾರೆ

ದಂಟರಮಕ್ಕಿಯ ಚಾಂದ್ ಖರೀದಿ ಮಾಡಿದ್ದು ಮತ್ತು ರಮೇಶ್ ಎಂಬುವರಿಗೆ ಎಲ್ಲಾ ವಿಚಾರ ಗೊತ್ತಿದೆ. ಎಷ್ಟು ಸಾರಿ ಈ ರೀತಿ ಮಾರಾಟವಾಗಿರಬಹುದು ಈ ಬಗ್ಗೆ ಲೋಕಯುಕ್ತ ತನಿಖೆ ನಡೆಸಲು ದೂರು ನೀಡಲು ತಯಾರಿ ನಡೆದಿದೆ ಎಂದು ತಿಳಿದುಬಂದಿದೆ. ನನ್ನ ಹೆಂಡತಿಗೆ ಹುಷರಿಲ್ಲ ಎಂದು ರಾಗ ಎಳೆಯುತ್ತಲೇ ಶಾಸಕ ರಾಜೇಗೌಡ ಮತ್ತು ತಮ್ಮಯ್ಯರ ಬಳಿ ಕಾಡಿಬೇಡಿ ಇಲ್ಲಿ ಉಳಿದುಕೊಂಡಿದ್ದು ಸಿ.ಟಿ.ರವಿ ಗಾಡ್ ಫಾದರ್ ಕಾಂಗ್ರೆಸ್ ನವರು ಗಾಡ್ ಮದರ್‌ ಆಗಿರುವುದು ಮೋಹನ್ ಕುಮಾರ್ ಗೆ ಯಾರು ಹೇಳುವವರು ಕೇಳುವವರು ಇಲ್ಲದಂತೆ ಆಗಿದೆ.

ಮೋಹನ್ ಕುಮಾರ್ ಗೆ ಸಾಥ್ ನೀಡುವುದು ಕಿಂಗ್ ಪಿನ್ ನೂರ್ ಅಹಮದ್ ಇವನು ಕೆಲಸಕ್ಕೆ ಸೇರಿದಾಗಿನಿಂದ ಚಾಪೆ ಹಾಕಿಕೊಂಡು ತಿನ್ನಲು ಶುರು ಹಚ್ಚಿಕೊಂಡವನು ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿರುವ ಬಗ್ಗೆ ದೂರುಗಳಿವೆ ಇಂತವರಿಗೆ ಲೋಕಯುಕ್ತ ಆತ್ತೆ ಮನೆಯಂತೆ ಆಗಿದೆ ಇನ್ನಾದರೂ ಡೀನ್ ಎಚ್ಚತ್ತುಕೊಳ್ಳದಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ.

Dr. Mohan Kumar Ranginata

Share

Leave a comment

Leave a Reply

Your email address will not be published. Required fields are marked *

Don't Miss

ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯ

ಚಿಕ್ಕಮಗಳೂರು : ಇತಿಹಾಸ ಪ್ರಸಿದ್ಧ ಅಂತರಘಟ್ಟೆ ಜಾತ್ರಾ ಮಹೋತ್ಸವದಲ್ಲಿ ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯವಾಗಿದೆ. ರೇಸಿಗೆ ಬಿದ್ದ ಎತ್ತಿನಗಾಡಿಗಳ ಪೈಪೋಟಿ ಮಧ್ಯೆ ಎತ್ತಿನ ಗಾಡಿ ತೇರಿಗೆ ಡಿಕ್ಕಿಯೊಡೆದಿದೆ....

ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರ ಅಮಾನತು

ಚಿಕ್ಕಮಗಳೂರು: ಆಸ್ತಿ ಗುರುತಿನ ಸ್ವತ್ತಿನ ಚಕ್ಕುಬಂಧಿಯನ್ನು ಅಕ್ರಮವಾಗಿ ತಿದ್ದುಪಡಿ ಮಾಡಿರುವ ಹಿನ್ನೆಲೆಯಲ್ಲಿ ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಸೇವೆಯಿಂದ ಅಮಾನತ್ತುಗೊಳಿಸಿ ಬುಧವಾರ ಆದೇಶಿಸಿದ್ದಾರೆ. ಪಟ್ಟಣದ...

Related Articles

ಜಿಲ್ಲೆಯಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್ ಸ್ಥಾಪನೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಶನ್ ಸ್ಥಾಪಿಸಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ...

ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ

ಚಿಕ್ಕಮಗಳೂರು: ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ ಸಾಧನೆ ಮಾಡಿರುವ ಶಾಸಕರು ಉಳಿದಿರುವ...

ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನ ವಶ

ಚಿಕ್ಕಮಗಳೂರು : ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಕೆಎಂ ರಸ್ತೆಯ...

ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನದದು ಕಳವು

ಚಿಕ್ಕಮಗಳೂರು : ತಾಲೂಕಿನ ಕಂಚೇನಹಳ್ಳಿಯಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು ರೈತ ಉಮೇಶ್ ಎಂಬುವವರ ಮನೆಯಿಂದ ಲಕ್ಷಾಂತರ...