Home namma chikmagalur ಅಕ್ಟೋಬರ್ ನಲ್ಲಿ ಆಲಿಕಲ್ಲು ಮಳೆ, ಆತಂಕದಲ್ಲಿ ಕಾಫಿನಾಡ ಮಲೆನಾಡು ಭಾಗ
namma chikmagalur

ಅಕ್ಟೋಬರ್ ನಲ್ಲಿ ಆಲಿಕಲ್ಲು ಮಳೆ, ಆತಂಕದಲ್ಲಿ ಕಾಫಿನಾಡ ಮಲೆನಾಡು ಭಾಗ

Share
coffee plant chikmagalur rain effect
Share

ಚಿಕ್ಕಮಗಳೂರು: ಕಳೆದೊಂದು ತಿಂಗಳಿನಿಂದ ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಭಾಗದಲ್ಲಿ ಬಹುತೇಕ ಬಿಡುವು ನೀಡಿದ್ದ ವರುಣದೇವ ಇಂದು ಮತ್ತೆ ಅಬ್ಬರಿಸಿ ಬೊಬ್ಬೆರಿದಿದ್ದಾನೆ. ಅಕ್ಟೋಬರ್ ತಿಂಗಳ ಆಲಿಕಲ್ಲು ಮಳೆಗೆ ಮಲೆನಾಡಿಗರು ಹೈರಾಣಾಗಿದ್ದು, ಧಾರಾಕಾರ ಮಳೆಯಿಂದಾಗಿ ಎನ್.‌ಆರ್. ಪುರ ತಾಲೂಕಿನ ಮಹಲ್ಗೋಡು ಸೇತುವೆ ಮೇಲೆ 2 ಅಡಿ ಎತ್ತರದಲ್ಲಿ ನೀರು ಹರಿದರೆ, ಚಾರ್ಮಾಡಿ ಘಾಟಿಯಲ್ಲು ಧಾರಾಕಾರ ಮಳೆ ಸುರಿದಿದೆ.

ಕಾಫಿ ಹಣ್ಣಾಗುವ ಸಮಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಲೆನಾಡ ಕಾಫಿ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಮಲೆನಾಡು ಭಾಗದಲ್ಲಿ ಮಧ್ಯಾಹ್ನದ ಬಳಿಕ ಸುರಿದ ಭಾರಿ ಮಳೆಯಿಂದಾಗಿ ಮಲೆನಾಡು ಅಕ್ಷರಶಃ ಜಲಾವೃತಗೊಂಡಿದೆ. ಭಾರೀ ಮಳೆಯಿಂದ ಎನ್.ಆರ್.ಪುರ ತಾಲೂಕಿನ ಮಹಲ್ಗೋಡು ಸೇತುವ ಜಲಾವೃತಗೊಂಡಿದ್ದು ಬಾಳೆಹೊನ್ನೂರು- ಕಳಸ ರಾಜ್ಯ ಹೆದ್ದಾರಿ ಸಂಪೂರ್ಣ ಬಂದಾಗಿತ್ತು.

ಮಹಲ್ಗೋಡು ಸೇತುವೆ ಮೇಲೆ 2 ಅಡಿ ಎತ್ತರಕ್ಕೆ ನೀರು ಹರಿದ ಪರಿಣಾಮ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ರಸ್ತೆ ಕೂಡ ಬಂದ್ ಆಗಿತ್ತು. ಮೂಡಿಗೆರೆ ತಾಲೂಕಿನ ಸುಂಕಸಾಲೆ ಬಳಿ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಅಕ್ಟೋಬರ್ ತಿಂಗಳಿನಲ್ಲಿ ಸುರಿದ ಆಲಿಕಲ್ಲು ಮಳೆ ಕಂಡು ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ.

ಚಾರ್ಮಾಡಿ ಘಾಟಿಯ ತಪ್ಪಲಿನಲ್ಲಿ ಧಾರಾಕಾರ ಮಳೆ ಸುರಿದಿದ್ದು ಭಾರಿ ಮಳೆಯಿಂದ ಸಂಚರಿಸಲಾಗದೆ ವಾಹನಗಳು ನಿಂತಲ್ಲೇ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಮುಂಗಾರು ಮಳೆ ಮುಗಿಯುವ ವೇಳೆ ಈ ರೀತಿಯ ಅಬ್ಬರದ ಮಳೆ ಕಂಡು ಮಲೆನಾಡಿಗರು ಹಿಂಗಾರು ಮಳೆ ಮತ್ತ್ಯಾವ ರೀತಿಯ ಅನಾಹುತ ಸೃಷ್ಟಿಸುತ್ತೋ ಅನ್ನೋ ಆತಂಕದಲ್ಲಿ ಬದುಕುವಂತಾಗಿದೆ.

ಅಕ್ಟೋಬರ್ ತಿಂಗಳ ಈ ಮಳೆ ಮಲೆನಾಡಿಗರಿಗೆ ಆತಂಕ ತಂದೊಡ್ಡಿದೆ. ಮಲೆನಾಡಲ್ಲಿ ಈ ವೇಳೆ ಮಳೆ ಬರುವುದು ಕಾಫಿ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಅಕ್ಟೋಬರ್- ನವಂಬರ್ ತಿಂಗಳಲ್ಲಿ ಕಾಫಿ ಹಣ್ಣಾದರೆ ನವಂಬರ್ 2ನೇ ವಾರದಿಂದ ಡಿಸೆಂಬರ್ ವರೆಗೂ ಕಾಫಿ ಹಣ್ಣನ್ನು ಕೊಯ್ಯುವ ಸಮಯ. ಇಂತಹಾ ಕಾಫಿ ಹಣ್ಣಾಗುವ ಸಮಯದಲ್ಲಿ ಈ ರೀತಿಯ ಧಾರಾಕಾರ ಮಳೆ ಸುರಿದರೆ ಕಾಫಿ ಹಣ್ಣು ನೆಲಕ್ಕೆ ಉದುರಲಿದೆ ಅನ್ನೋ ಭಯ ಮಲೆನಾಡಿಗರದ್ದು. ಮಲೆನಾಡಲ್ಲಿ ಸರಿಸುಮಾರು 1 ಲಕ್ಷ ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿ ಅರೇಬಿಕಾ ಹಾಗೂ ರೊಬೋಸ್ಟಾ ಕಾಫಿ ಬೆಳೆದಿದ್ದಾರೆ.

ಈ ಸಮಯದ ಮಳೆ ಯಾವ ಬೆಳೆಗೂ ಒಳ್ಳೆಯದ್ದಲ್ಲ. ಆದರೆ, ಕಳೆದ ಒಂದೂವರೆ ತಿಂಗಳಿಂದ ದಿನಕ್ಕೆ ಒಂದೆರಡು ಬಾರಿ 5-10 ನಿಮಿಷಗಳ ಕಾಲ ಸುರಿಯುತ್ತಿದ್ದ ಸಾಧಾರಣ ಮಳೆ ಇಂದು ಧಾರಾಕಾರವಾಗಿ ಸುರಿದಿದ್ದು ಮಲೆನಾಡು ಅಕ್ಷರಶಃ ಕಂಗಾಲಾಗಿದೆ. ಆದರೆ, ಮುಂಗಾರಿನ ಅಂತ್ಯ ಹೀಗಿದ್ದರೆ, ಹಿಂಗಾರು ಮತ್ತಿನ್ಯಾವ ಅನಾಹುತ‌ ಸೃಷ್ಟಿಸುತ್ತೋ ಅನ್ನೋ ಭಯ ಮಲೆನಾಡಿಗರದ್ದು.

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...