ಚಿಕ್ಕಮಗಳೂರು :
ಅಕ್ರಮವಾಗಿ ಬೀಟೆ ಮರದ ತುಂಡುಗಳನ್ನು ಕಡಿದು ಸಾಗಿಸುತ್ತಿದ್ದ ಕಾಡುಗಳ್ಳರಿಬ್ಬರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ತುಂಬಳ್ಳಿಪುರ ಗ್ರಾಮದ ಡಿಮ್ಡ್ ಫಾರೆಸ್ಟ್ ನಿಂದ ಕಳವು ಮಾಡಿ ಪರಾರಿಯಾಗುತ್ತಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಪ್ರದೀಪ್ ಹಾಗೂ ವಿಜಯ್ ಎಂಬ ಇಬ್ಬರು ಆರೋಪಿಗಳು ಬಂಧನಕ್ಕೊಳಗಾದ ವ್ಯಕ್ತಿಗಳಾಗಿದ್ದು, ಸುರೇಶ್ ಹಾಗೂ ರವಿ ಎಂಬ ಮತ್ತಿಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ತಲೆಮೆರೆಸಿಕೊಂಡ ಆ ಇಬ್ಬರೂ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಮಹೇಂದ್ರ ಪಿಕಪ್ ವಾಹನವನ್ನೂ ಸಹ ವಶಕ್ಕೆ ಅರಣ್ಯಾಧಿಕಾರಿಗಳು ಪಡೆದುಕೊಂಡಿದ್ದಾರೆ. ಆಲ್ದೂರು ವಲಯದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಕಾರ್ಯಾಚರಣೆ ನಡೆಸಿ ಬೀಟೆ ಕಳ್ಳರನ್ನು ಹಿಡಿದಿದ್ದು ಪ್ರಕರಣ ದಾಖಲಾಗಿದೆ.
Leave a comment