ಚಿಕ್ಕಮಗಳೂರು: ಭವ್ಯ ಭಾರತದ ಕನಸನ್ನು ಹೊತ್ತಿರುವ ಯುವಕರು ವಯಸ್ಸಿನಲ್ಲಿ ವ್ಯಸ ನಗಳ ಚಟಕ್ಕೆ ಬಲಿಯಾಗದೇ, ದೇಶವನ್ನು ಸುಭದ್ರಗೊಳಿಸುವ ಯೋಧರಾಗಿ ಕಾರ್ಯನಿರ್ವಹಿಸಬೇಕು ಎಂ ದು ಬಸವನಹಳ್ಳಿ ಠಾಣೆ ಸಬ್ಇನ್ಸ್ಪೆಕ್ಟರ್ ಕೀರ್ತಿಕುಮಾರ್ ಕರೆ ನೀಡಿದರು.
ನಗರದ ಎಐಟಿ ಕಾಲೇಜಿನ ಸಿವಿಲ್ ಸೆಮಿನಾರ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ಧ ೨೬ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಭಾರತಾಂಬೆಯ ಮಣ್ಣಿನ ಋಣ ಹಾಗೂ ತಾಯ್ನಡಿನ ಜೀವಸಂಕುಲವನ್ನು ಕಾಪಾಡುತ್ತಿರುವ ಸೈನಿಕರು ದೇಶದ ಹೆಮ್ಮೆಯ ಪುತ್ರರು. ಹೀಗಾಗಿ ಉತ್ಸಾಹಿ ಯುವಕರು ಜೀವನದಲ್ಲಿ ಸೈನ್ಯರಾಗಿ ಸೇವೆ ಸಲ್ಲಿಸಿದರೆ ಬ ದುಕಿನಲ್ಲಿ ಆತ್ಮಸ್ಥೆರ್ಯ ಹಾಗೂ ಶಿಸ್ತಿನ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದರು.
ರಾಷ್ಟ್ರದ ಹಿತದೃಷ್ಟಿಯಿಂದ ಸೈನಿಕರು, ರೈತರು, ಪೌರಕಾರ್ಮಿಕರು ತಮ್ಮದೇ ಶೈಲಿಯಲ್ಲಿ ಸಮಾಜಕ್ಕಾಗಿ ದುಡಿಯುತ್ತಿದ್ದಾರೆ. ಈ ನಡುವೆ ಹಿಮಪರ್ವತದಲ್ಲಿ ಯಾವುದೇ ಕ್ಷಣದಲ್ಲೂ ಪ್ರಾಣದ ಪಕ್ಷಿ ಹಾರಿ ಹೋಗಲಿ ದೆ ಎಂಬ ಸತ್ಯ ಅರಿತಿದ್ದರೂ ಗಡಿಯಲ್ಲಿನ ಸೈನಿಕರ ಸೇವೆ ಎಲ್ಲರಿಗಿಂತ ಮಿಗಿಲಾದುದು ಎಂದು ಹೇಳಿದರು.
ಭಾರತೀಯರಾದ ನಾವುಗಳು ಯುವಸಮೂಹಕ್ಕೆ ಹೆಚ್ಚೆಚ್ಚು ಯೋಧರನ್ನಾಗಿಸಲು ಪ್ರೋತ್ಸಾಹಿಸಬೇಕು. ದೇಶಪ್ರೇಮವನ್ನು ಆಳವಾಗಿ ಮೈಗೂಡಿಸಿಕೊಳ್ಳಲು ಪಾಲಕರು ಮುಂದಾದರೆ ರಾಷ್ಟ್ರದ ಮಣ್ಣಿನ ಋಣ ತೀರಿ ಸಿದಂತಾಗಲಿದೆ ಎಂದ ಅವರು ಆ ನಿಟ್ಟಿನಲ್ಲಿ ಯುವಕರು ಸೈನಿಕರಾಗುವ ಆಶಯ ವ್ಯಕ್ತಪಡಿಸಬೇಕು ಎಂದರು
ರಾಷ್ಟ್ರದ ಮೇಲೆ ಅಭಿಮಾನ, ಪ್ರೀತಿ ಹಾಗೂ ಸಮಸ್ತ ಭಾರತೀಯರನ್ನು ರಕ್ಷಿಸುತ್ತೇನೆಂಬ ಕಿಚ್ಚಿನಿಂದ ಸೈ ನ್ಯಕ್ಕೆ ಸೇರಬೇಕಿದೆ ಹೊರತು, ಹೊಟ್ಟೆಪಾಡಿಗಲ್ಲ. ಶೃತುದೇಶದ ಎದುರಾಳಿಗಳ ಗುಂಡಿಗೆ ಸೀಳುವಂಥ ಆತ್ಮಸ್ಥೈ ರ್ಯ ತುಂಬಿರಬೇಕು. ಜೊತೆಗೆ ಕಾಶ್ಮೀರದ ಹಿಮಗಣಿವೆಯನ್ನು ಒಗ್ಗಿಸುವಂಥ ಶಾರೀರಿಕ ಸಾಮರ್ಥ್ಯ ಬೆಳೆಸಿ ಕೊಳ್ಳಬೇಕು ಎಂದು ಹೇಳಿದರು.
ಮಾಜಿ ಸೈನಿಕ ಪ್ರಕಾಶ್ಶೆಟ್ಟಿ ಮಾತನಾಡಿ ೧೯೯೯ನೇ ಇಸವಿಯಲ್ಲಿ ಸತತ ಮೂರು ತಿಂಗಳಿನಿಂದ ಹೋ ರಾಡಿದ ಪರಿಣಾಮ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನ್ಯ ವಿಜಯ ಸಾಧಿತು. ಈ ನಡುವಿಲ್ಲಿ ಅನೇಕರು ದೇಶಕ್ಕಾಗಿ ಮಡಿದರು, ಬಹುತೇಕರು ಅಂಗಾಂಗಗಳು ವೈಫಲ್ಯತೆ ಉಂಟಾಯಿತು. ಆ ಕಾರ್ಗಿಲ್ ಯುದ್ಧದಲ್ಲಿ ಮಡಿದವರ ನೆನಪಿಗಾಗಿ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದರು.
ಎಐಟಿ ಕಾಲೇಜು ರಿಜಿಸ್ಟರ್ ಡಾ|| ಸಿ.ಕೆ.ಸುಬ್ಬರಾಯ್ ಮಾತನಾಡಿ ಭಾರತದಲ್ಲಿ ಇಂದು ಕೋಟ್ಯಾಂತರ ಕುಟುಂಬಗಳು ಸೌಖ್ಯವಾಗಿ ಬಾಳಲು, ಶುಭ ಸಮಾರಂಭ ಆಚರಣೆ ಹಾಗೂ ಸ್ನೇಹಿತರೊಂದಿಗೆ ಅನೋನ್ಯ ವಾಗಿರಲು ಗಡಿಯಲ್ಲಿನ ಯೋಧರು ಕಾರಣ ಎಂದ ಅವರು ಪ್ರತಿಯೊಬ್ಬ ಪ್ರಜೆಯು ಸೈನಿಕರನ್ನು ಗೌರವಿಸು ವ ಗುಣಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಐಟಿ ಕಾಲೇಜು ಪ್ರಾಂಶುಪಾಲ ಡಾ|| ಸಿ.ಟಿ.ಜಯದೇವ್, ಎಐಬಿಎಂ ಪ್ರಾಂಶು ಪಾಲ ಕೆ.ಎಸ್.ಪ್ರಕಾಶ್ರಾವ್, ಉಪಪ್ರಾಂಶುಪಾಲ ಡಾ|| ಪ್ರದೀಪ್ ಜಿ.ದೇಸಾಯಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Youth become warriors to secure the country
Leave a comment