Home Latest News ನೌಕರರ ಸಂಘದಲ್ಲಿ ಗೆದ್ದು ಬೀಗಿದ ದೇವೆಂದ್ರ ಮಂಗಮಾಯ
Latest News

ನೌಕರರ ಸಂಘದಲ್ಲಿ ಗೆದ್ದು ಬೀಗಿದ ದೇವೆಂದ್ರ ಮಂಗಮಾಯ

Share
Share

ಚಿಕ್ಕಮಗಳೂರು : ರಾಜ್ಯ ಸರ್ಕಾರಿ ನೌಕರರ ಚುನಾವಣೆ ನಡೆದು ಹದಿನೇಳು ದಿನಗಳು ಕಳೆದಿವೆ. ನೌಕರರ ಸಂಘದ ಪದಾಧಿಕಾರಿಗಳು ನಾಪತ್ತೆಯಾಗಿರುವುದು ಮಾತ್ರ ಆಶ್ಚರ್ಯ ಉಂಟುಮಾಡಿದೆ.

ಯಾವ ರಾಜಕೀಯ ಪುಡಾರಿಗಳಿಗೂ ಕಡಿಮೆ ಇಲ್ಲದಂತ ಪೈಪೋಟಿ ,ಜಿದ್ದಾಜಿದ್ದಿ ,ಹಣಬಲ,ತೋಳ್ ಬಲ, ಪ್ರತಿರೋಧವಿದ್ದರು ಭರ್ಜರಿ ಜಯ ಸಾಧಿಸಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾಗಿ ದೇವೇಂದ್ರ ಅಯ್ಕೆ ಆಗಿದ್ದು ಬಿಟ್ಟರೆ ಆದನ್ನು ಸಂಭ್ರಮಿಸುವುದಿರಲಿ ಅರಗಿಸಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ.ಎಂ,ಎಲ್,ಸಿ, ಬೋಜೇಗೌಡರ ವಿರುದ್ಧ ಆರೋಪ ಮಾಡಿದ್ದರ ಹಿನ್ನೆಲೆಯಲ್ಲಿ ದೇವೇಂದ್ರರನ್ನು ಅಮಾನತು ಮಾಡಿ ಕುಂದಾಪುರಕ್ಕೆ ಸ್ಥಳ ನಿಯುಕ್ತಿ ಮಾಡಲಾಗಿದ್ದು ಅಂದಿನಿಂದ ಚಿಕ್ಕಮಗಳೂರು ತೊರೆದಿರುವ ದೇವೇಂದ್ರ ಆಂಡ್ ಗ್ಯಾಂಗ್ ಬೆಂಗಳೂರು ಟೂ ಬೆಳಗಾವಿಗೆ ಅಪ್ ಆಂಡ್ ಡೌನ್ ಮಾಡುತ್ತಿದೆ ಎಂದು ಅವರ ವಿರೋಧಿ ಗ್ಯಾಂಗ್ ಹೇಳುತ್ತಿದೆ.

ಬೆಂಗಳೂರಿನಲ್ಲಿ ರಾಜ್ಯ ಅಧ್ಯಕ್ಷ ರಾಗಿ ಮತ್ತೊಮ್ಮೆ ಅಯ್ಕೆ ಬಯಸಿರುವ ಷಡಕ್ಷರಿ ಟೀಮ್ ಜೊತೆಗೆ ಶಾಲು ಹೊದಿಸಿಕೊಂಡು ಖುಷಿ,ಖುಷಿಯಿಂದ ಸ್ಥಳ ಮಾರ್ಪಾಡು ಮಾಡಿಸಿಕೊಳ್ಳಲು ಹರಸಾಹಸ ಪಡುತ್ತಿರುವ ದೇವೇಂದ್ರ ಯಾವುದಕ್ಕೂ ಕಮ್ಮಿ ಇಲ್ಲ ಎಂದು ಸೆಡ್ಡು ಹೊಡೆಯುತ್ತಿದ್ದು ಇದಕ್ಕೆ ಭೋಜೇಗೌಡ ಮತ್ತು ಗಾಯತ್ರಿ ಶಾಂತೇಗೌಡ ಸುಮ್ಮನೆ ಬಿಡುವುದು ಕಷ್ಟ, ಕಷ್ಟ ಆದರೂ ಅಂತಿಮವಾಗಿ ನ್ಯಾಯಾಲಯ ದಲ್ಲಿ ಬಗೆಹರಿಸಿಕೊಳ್ಳುವುದು ಅನಿವಾರ್ಯ ಎನ್ನುತ್ತಾರೆ. ಹಣ ಖರ್ಚು ಮಾಡಿ ಸೋತಿರುವ ಹೇಮಂತ್ ಕುಮಾರ್ ಇದು ಬೇಕಿತ್ತಾ ಎಂದರೆ ಗೆದ್ದರೂ ತಪ್ಪಲಿಲ್ಲಾ ಸಂಕಷ್ಟ ಎಂದು ದೇವೇಂದ್ರ ಗೋಳಾಡುತ್ತಿರುವುದು ಮಾತ್ರ ಸತ್ಯ. ಈ ನಡುವೆ ಭೋಜೇಗೌಡ ಭೇಟಿ ಮಾಡಿ ಮಾಫಿ ಕೇಳಲು ಯತ್ನಿಸಿದರು ಯಾವುದೇ ಪ್ರಯೋಜವಾಗಿಲ್ಲ ಎಂದು ತಿಳಿದು ಬಂದಿದೆ

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...