ಚಿಕ್ಕಮಗಳೂರು: ಹಾಂದಿ ಗ್ರಾಮದಲ್ಲಿ ಊರಿನವರು ವಾಸಿಸಲು ನಿವೇಶನಕ್ಕೆ ಉಚಿತವಾಗಿ ಜಾಗ ನೀಡಿದ ಕುಟುಂಬ ಸಮಸ್ಯೆ ಎದುರಿಸುವಂತಾಗಿದ್ದು, ಗ್ರಾಮದ ಜನತೆ ನಿವೇಶನ ಹೊರತುಪಡಿಸಿ ಕೊಟ್ಟಿಗೆ ನಿರ್ಮಿಸಿಕೊಂಡಿರುವ ಜಾಗವನ್ನು ಬಿಡಿಸಿಕೊಡ ಬೇಕು. ಮೇಲ್ವರ್ಗದ ಇಬ್ಬರು ಮಾಡಿರುವ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಎಚ್.ಎಂ.ಸೋಮಶೇಖರ್ ಒತ್ತಾಯಿಸಿ ದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಹಾಂದಿ ಗ್ರಾಮದಲ್ಲಿ ಈಗಾಗಲೇ ೧೯೭೨ರಲ್ಲಿ ಮನೆಗಳಿಗೆ ಹಕ್ಕುಪತ್ರ ಗಳನ್ನು ವಿತರಣೆ ಮಾಡಿದ್ದು, ಕಾರಣಾಂತರಗಳಿಂದ ಮತ್ತೇ ೫೨ ವರ್ಷಗಳ ಬಳಿಕ ಹಕ್ಕುಪತ್ರ ವಿತರಿಸುತ್ತಿರುವುದು ಶ್ಲಾಘನೀಯ. ಆದರೆ, ಒಂದು ಕಟುಂಬದ ಆಸ್ತಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಹೇಳಿದರು.
೧೯೫೨-೫೨ರಲ್ಲಿ ಕುಟುಂಬದ ಹಿರಿಯರು, ಸ್ವಾತಂತ್ರ್ಯ ಹೋರಾಟಗಾರ, ಗ್ರಾ.ಪಂ.ಸದಸ್ಯ, ಟಿಡಿಬಿ ಸದಸ್ಯರಾದ ಎಚ್.ಯು. ಮಂಜಪ್ಪ ಅವರು ಹಾಂದಿ ಗ್ರಾಮದ ಸರ್ವೇ ನಂ.೧೬೯ರಲ್ಲಿ ೬.೧೧ ಎಕರೆ ಜಮೀನು ಹೊಂದಿದ್ದು, ಅದರಲ್ಲಿ ೨ ಎಕರೆ ಜಾಗ ಹಾಂದಿ ಗ್ರಾಮದ ಪರಿಶಿಷ್ಟ ಜಾತಿಯವರು ವಾಸಿಸಲು ಬಿಟ್ಟುಕೊಟ್ಟಿದ್ದರು. ೧೯೭೨ರಲ್ಲಿ ೨೮ ಜನರಿಗೆ ಹಕ್ಕುಪತ್ರ ಕ್ಷೇತ್ರಾಭಿವೃದ್ಧಿ ಅಧಿಕಾರಿ ನೀಡಿದ್ದಾರೆ ಎಂದು ತಿಳಿಸಿದರು.
ಮೂರ್ನಾಲ್ಕು ತಿಂಗಳಿಂದ ಕಂದಾಯ ಉಪಗ್ರಾಮ ಮಾಡುವುದಾಗಿ ಸಂಬಂಧಪಟ್ಟ ಇಲಾಖೆ ಮಾಡುತ್ತಿದ್ದು, ಈ ಸರ್ವೇ ನಂಬರ್ನಲ್ಲಿ ಎರಡು ಎಕರೆಯನ್ನು ಗ್ರಾಮದವರು ಮನೆಕಟ್ಟಲು ಬಿಟ್ಟುಕೊಟ್ಟಿದ್ದರೆ, ಮಂಜಪ್ಪನವರ ಹಿರಿಯ ಮಗ ಎಚ್.ಎಂ. ಉದ್ದಂಡಮೂರ್ತಿಗೆ ೨.೧೧ ಎಕರೆ, ಮೂರನೇ ಮಗ ರಾಧಾಕೃಷ್ಣಗೆ ಎರಡು ಎಕರೆ ಬಿಟ್ಟುಕೊಟ್ಟಿದ್ದಾರೆ. ರಾಧಕೃಷ್ಣ ಮೃತರಾದ ಬಳಿಕ ಅವರ ಮಗ ಸುಭಾಷ್ಚಂದ್ರ ಅವರ ಹೆಸರಿಗೆ ಪಹಣಿ ಬರುತ್ತಿದೆ ಎಂದರು.
ಜಾಗ ಹದ್ದುಬಸ್ತು ಸರ್ವೇಯಾಗಿಲ್ಲ, ಕೆಳಗೂರು ಪಂಚಾಯತ್ನವರು, ಕಂದಾಯ ಇಲಾಖೆ ಗಮನಿಸದೆ ಏಕಾಏಕಿ ಕಂದಾಯ ಉಪಗ್ರಾಮ ಮಾಡುತ್ತಿರುವುದು ಸರಿಯಲ್ಲ, ಸುಭಾಷ್ಚಂದ್ರ ಹೆಸರಿಗೆ ಬಂದ ಜಮೀನಿನಲ್ಲಿ ೧೯೭೨ ರಿಂದ ವಾಸಿಸುತ್ತಿದ್ದೇವೆ. ಕುರಿ, ದನ, ಸೌದೆ ಕೊಟ್ಟಿಗೆ ನಿರ್ಮಿಸಿಕೊಂಡು ಒತ್ತುವರಿ ಮಾಡಿರುವುದನ್ನು ತಹಶೀಲ್ದಾರ್ ಭೇಟಿ ಮಾಡಿದ ವೇಳೆ ಪರಿಶೀಲಿಸಿದ್ದಾರೆ. ನಮ್ಮ ಕುಟುಂಬಕ್ಕೆ ಅನ್ಯಾಯವಾಗುತ್ತಿರುವುದನ್ನು ಕಂದಾಯ ಇಲಾಖೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಹೇಳಿದರು.
ನಾವು ಮನೆಕಟ್ಟಲು ೨ಎಕರೆ ಬಿಟ್ಟುಕೊಟ್ಟಿರುವ ಜಾಗವನ್ನು ಇಬ್ಬರು ಪ್ರಭಾವಿಗಳು ಒತ್ತುವರಿ ಮಾಡಿದ್ದಾರೆ. ಇದನ್ನು ತೆರವು ಗೊಳಿಸಿ ಪರಿಶಿಷ್ಟಜಾತಿಯ ನಿವೇಶನರಹಿತರಿಗೆ ನಿವೇಶನ ಕೊಡುವ ಮೂಲಕ ಈ ಜಾಗದಲ್ಲೇ ಜಾಗ ನೀಡಿರುವ ನಮ್ಮ ಕುಟುಂಬಕ್ಕೆ ೧೫ನಿವೇಶನಗಳನ್ನು ಬಿಟ್ಟುಕೊಡಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು. ಸುದ್ದಿಗೋಷ್ಟಿ ಯಲ್ಲಿ ಕುಟುಂಬದ ದಿಲೀಪ್ಕುಮಾರ್, ಧನಲಕ್ಷ್ಮಿ, ಲಕ್ಷ್ಮಿ, ಎಚ್.ಯು.ದೇವರಾಜು, ಕೇಶವಮೂರ್ತಿ ಇದ್ದರು.
Villagers demand removal of encroachment by upper castes
Leave a comment