Home ಸಿ.ಟಿ.ರವಿಗೆ ಸುಪ್ರೀಂ ರಿಲೀಫ್, ಲೆಟರ್ ಹೆಡ್ ಸ್ವಾರಸ್ಯ !
HomechikamagalurLatest Newsnamma chikmagalur

ಸಿ.ಟಿ.ರವಿಗೆ ಸುಪ್ರೀಂ ರಿಲೀಫ್, ಲೆಟರ್ ಹೆಡ್ ಸ್ವಾರಸ್ಯ !

Share
Share

ಚಿಕ್ಕಮಗಳೂರು: ಬೆಳಗಾವಿ ಅಧಿವೇಶನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಂತ್ರಿ ಲಕ್ಮೀ ಹೆಬಾಳ್ಕರ್ ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು.ಇದನ್ನು ಪ್ರಶ್ನೆ ಮಾಡಿ ಹೈಕೋರ್ಟ್ನಲ್ಲಿ ಸಿ.ಟಿ.ರವಿ ತಡೆಯಾಜ್ಞೆ ತಂದಿದ್ದರು. ಆದರೆ ನಂತರ ನಡೆದ ವಿಚಾರಣೆಯಲ್ಲಿ ತಡೆಯಾಜ್ಞೆ ತೆರವು ಗೊಳಿಸಿ ಮತ್ತೆ ಪೊಲೀಸ್ ರಿಗೆ ವಿಚಾರಣೆ ನಡೆಸಲು ಆದೇಶ ನೀಡಲಾಯಿತು. ಇದರಿಂದ ಸಿ.ಟಿ.ರವಿಗೆ ಹಿನ್ನೆಡೆ ಆಯಿತು .

ಹೈಕೋರ್ಟ್ ಆದೇಶ ಪ್ರಶ್ನೆ ಮಾಡಿ ಸಿ.ಟಿ.ರವಿ ಸುಪ್ರೀಂ ಕೋರ್ಟ್ ನಲ್ಲಿ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಸದ್ಯಕ್ಕೆ ಸಿ.ಟಿ.ರವಿಗೆ ಬಿಗ್‌ ರಿಲೀಫ್ ಸಿಕ್ಕಂತಾಯಿತು.

ಸಣ್ಣ,ಪುಟ್ಟ ವಿಚಾರ ಗಳಿಗೂ ಹೈಕೋರ್ಟ್, ಸುಪ್ರೀಂ ಕೋರ್ಟ್ ಎನ್ನುವ ರಾಜಕಾರಣಿಗಳು ಲಕ್ಷ, ಲಕ್ಷ ಲಯಮಾಡುತ್ತಾರೆ.ಮನೆ ಬಾಗಿಲಿಗೆ ಕಷ್ಟ ಹೇಳಿಕೊಂಡ ಬಂದ ಜನರಿಗೆ ನೀತಿ ಹೇಳುತ್ತಾರೆ ಎಂದು ಲಕ್ಷ್ಮೀ ಗೆ ಹೇಳುತ್ತಾರೋ ರವಿಗೆ ಹೇಳುತ್ತಾರೋ ಎಂಬುದನ್ನು ಪತ್ತೆ ಹಚ್ಚಲು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಮಿತಿ ರಚಿಸಲು ಹೈಕಮ್ಯಾಂಡ್ ಗ್ರೀನ್ ಸಿಗ್ನಲ್ ಗೆ ಕಾಯುತ್ತಿದ್ದಾರಂತೆ !

ಸುಪ್ರೀಂ ಖುಷಿ ಮೂಡ್ ನಲ್ಲಿ ಸಿ.ಟಿ.ರವಿ ರಾಜ್ಯ ಸರ್ಕಾರದ ಎರಡು ವರ್ಷಗಳ ವಿಫಲತೆ ಬಗ್ಗೆ ಪತ್ರಿಕಾ ಗೋಷ್ಟಿ ನಡೆಸಿ ಹಿಗ್ಗಾ,ಮುಗ್ಗಾ ಜಾಡಿಸಿದ್ದಾರೆ ಅದೇ ಜೋಸ್ ನಲ್ಲಿ ಹೊರಗಡೆ ಬಂದಾಗ ಕಾಂಗ್ರೆಸ್ ನವರು ಎದುರುಬದುರಾಗಿದ್ದಾರೆ.ನನ್ನ ಲೆಟರ್ ಹೆಡ್ ಮಾರಿ ಕೊಂಡವರು ಜನಪ್ರತಿನಿಧಿಯಾಗಿದ್ದಾರೆ ಎಂದಾಗ ಕಾಂಗ್ರೆಸ್ ನವರು ಇನ್ಯಾರು ನಮ್ಮ ತಮ್ಮಯ್ಯ ಇರಬೇಕು ಎಂದು ಪೇಚಿಗೆ ಸಿಕ್ಕರು ಹೀಗೂ ಉಂಟೇ ಎಂದು ಅಲ್ ಪಾರ್ಟಿ ಅರಾಧ್ಯರ ಹತ್ತಿರ ದುಃಖ ಹೇಳಿಕೊಂಡಿದ್ದಾರೆ.ನಾವು ಛತ್ರ ಕಟ್ಟಬೇಕು ನಮಗೆ ಎಲ್ಲರೂ ಬೇಕು ಎಂದು ತಿಪ್ಪೇ ಸಾರಿಸಿದ್ದಾರಂತೆ.

Supreme Court relief for C.T. Ravi interesting letterhead!

Share

Leave a comment

Leave a Reply

Your email address will not be published. Required fields are marked *

Don't Miss

ಧಾರಾಕಾರ ಮಳೆ ನಡುವೆ ಗಿರಿಪ್ರದೇಶಕ್ಕೆ ಪ್ರವಾಸಿಗರ ಧಾಂಗುಡಿ

ಚಿಕ್ಕಮಗಳೂರು: ನಗರ ಸಮೀಪದ ಗಿರಿಪ್ರದೇಶದಲ್ಲಿ ಧಾರಾಕಾರ ಮಳೆಸುರಿಯುತ್ತಿದ್ದು, ಇದರ ನಡುವೆಯೇ ಗಿರಿಭಾಗಕ್ಕೆ ಭಾರೀ ಪ್ರವಾಸಿಗರ ದಂಡು ಭೇಟಿಕೊಟ್ಟಿದೆ. ಕಾರು, ಬೈಕ್, ಟಿಟಿ ಸೇರಿದಂತೆ ೧೮೫೦ ವಾಹನಗಳು ಗಿರಿಭಾಗಕ್ಕೆ ಪ್ರವಾಸಿಗರನ್ನು ಕರೆದೊಯ್ದಿದೆ. ಭಾರೀ...

ಮೈಮೆಲೆ ಬಿಸಿನೀರು ಬಿದ್ದು ಹೆಣ್ಣುಮಗುವಿಗೆ ಗಾಯ

ಚಿಕ್ಕಮಗಳೂರು: ಜಿಲ್ಲಾಮಕ್ಕಳ ಘಟಕದ ದತ್ತು ಸಂಸ್ಥೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಒಂದು ವರ್ಷ ಮೂರು ತಿಂಗಳ ಹೆಣ್ಣುಮಗುವಿಗೆ ಸುಟ್ಟಗಾಯವಾಗಿದ್ದು ಇದರಿಂದ ಹೆಣ್ಣುಮಗು ನರಳುವಂತಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಗರದ ಗಾಂಧಿನಗರದಲ್ಲಿರುವ ದತ್ತು...

Related Articles

ವಸೂಲಿವೀರ ಅದಕ್ಷ ಡಿ.ಡಿ.ಪಿ.ಐ ಪುಟ್ಟರಾಜುಗೆ ಕಡ್ಡಾಯ ರಜೆ

ಚಿಕ್ಕಮಗಳೂರು; ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಾರ್ವಜನಿಕ ಶಿಕ್ಷಣ ಅಧಿಕಾರಿ ಪುಟ್ಟರಾಜು ಕಡ್ಡಾಯ ರಜೆ ಮೇಲೆ...

ನಯನ ಮೋಟಮ್ಮ ಕ್ಷೇತ್ರ ದರ್ಶನಕ್ಕೆ ಬಾರಮ್ಮ

ಮೂಡಿಗೆರೆ: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಎಡಬಿಡದೆ ಮಳೆ ಬರುತ್ತಿದ್ದು ಅನಾಹುತದ ಸಂಭವಿಸಿ ಹಲವರು ಪ್ರಾಣ...

ಜು.28ಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಮೇಳ

ಚಿಕ್ಕಮಗಳೂರು: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ವಸಾಹತು ಹಿಂಭಾಗ, ಜಿಲ್ಲಾ ಪಂಚಾಯಿತಿ ಹತ್ತಿರ, ಜ್ಯೋತಿನಗರ, ಚಿಕ್ಕಮಗಳೂರು)...

ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಕುದುರೆಮುಖ, ಮುಳ್ಳಯ್ಯನ...