Home Latest News ಶ್ಯಾಮಪ್ರಸಾದ್ ಮುಖರ್ಜಿಯವರ ಭವ್ಯ ಭಾರತದ ಕನಸು ಸಾಕಾರ
Latest NewschikamagalurHomenamma chikmagalur

ಶ್ಯಾಮಪ್ರಸಾದ್ ಮುಖರ್ಜಿಯವರ ಭವ್ಯ ಭಾರತದ ಕನಸು ಸಾಕಾರ

Share
????????????????????????????????????
Share

ಚಿಕ್ಕಮಗಳೂರು:  ಕಾಶ್ಮೀರವು ಭಾರತದ ಭಾಗವೆಂದು ಹಿಂದೂ ಸಮಾಜದ ಪ್ರತಿಪಾದಕ ಶ್ಯಾಮಪ್ರಸಾದ್ ಮುಖರ್ಜಿ ಒಂದು ದೇಶ, ಒಂದೇ ಸಂವಿಧಾನ ಹಾಗೂ ಒಂದೇ ಪ್ರಧಾನಿ ಎಂಬ ಘೋಷ ಣೆ ಮೊಳಗಿಸಿ ರಾಷ್ಟ್ರಾದ್ಯಂತ ಜನಜಾಗೃತಿ ಆಂದೋಲನ ಮೂಡಿಸಿದವರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ. ಆರ್.ದೇವರಾಜ್‌ಶೆಟ್ಟಿ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ಓಬಿಸಿ ಮೋರ್ಚಾದಿಂದ ಸೋಮವಾರ ನಡೆದ ಜನಸಂಘ ಸ್ಥಾಪಕ, ರಾಷ್ಟ್ರ ಭಕ್ತ ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದ ಪುಣ್ಯಸ್ಮರಣೆ ಅಂಗ ವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿ ಜಮ್ಮು-ಕಾಶ್ಮೀರವನ್ನು ಅಂದಿನ ಕಾಂಗ್ರೆಸ್‌ನ ನೆಹರು ಸರ್ಕಾರ ಭಾರತದಿಂದ ವಿಂಗಡಿಸಿ ವಿಶೇಷ ಸ್ಥಾನ ಮಾನ ನೀಡಿರುವುದರ ವಿರುದ್ದ ಸಿಡಿದೆದ್ದ ಮುಖರ್ಜಿ ಅವರು ನೆಹರು ಸಂಪುಟದಿಂದ ಹೊರಬಂದು ಸಮ ಸ್ತ ಹಿಂದೂಗಳ ಹಕ್ಕಿಗಾಗಿ ಜನಸಂಘ ಸ್ಥಾಪಿಸಿ ನಿರಂತರ ಹೋರಾಟ ರೂಪಿಸಿದ ಅಪ್ರತಿಮ ರಾಷ್ಟ್ರಭಕ್ತ ನೇತಾ ರರು ಎಂದು ಹೇಳಿದರು.

ಭವ್ಯ ಭಾರತದ ಕನಸನ್ನು ಸಾಕಾರಗೊಳಿಸಲು ವೈಯಕ್ತಿಕ ಜೀವನವನ್ನು ಲೆಕ್ಕಿಸದೇ ಸದಾಕಾಲ ರಾಷ್ಟ್ರದ ಹಿತಕ್ಕಾಗಿ ದುಡಿದು ಬಲಿದಾನಗೊಂಡ ಶ್ಯಾಮಪ್ರಸಾದ್ ಮುಖರ್ಜಿ ಆಶಯಗಳಿಗೆ ಇಂದಿನ ಕೇಂದ್ರ ಸರ್ಕಾರ ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿಸಿ ಒಂದೇ ಕಾನೂನನ್ನು ರೂಪಿಸುವ ಮೂಲಕ ತನ್ನದಾಗಿಸಿ ಕೊಂಡಿದೆ ಎಂದರು. ಭಾಜಪ ಹಿಂದುತ್ವದ ಸಂಕೇತವಾದರೂ, ಅಲ್ಪಸಂಖ್ಯಾತರನ್ನು ವಿರೋಧಿಯಲ್ಲ. ಎಲ್ಲರೂ ಭಾರತಾಂಬೆ ಯ ಮಕ್ಕಳು. ಈ ಮಣ್ಣಿನಲ್ಲಿ ಪ್ರಾಮಾಣಿಕತೆಯಿಂದ ಜೀವನ ರೂಪಿಸಿಕೊಂಡಿರುವ ದೇಶಭಕ್ತ ಅಲ್ಪಸಂ ಖ್ಯಾತರಿಗೆ ಸದಾ ಬೆಂಬಲವಿದೆ. ಆದರೆ ರಾಷ್ಟ್ರದ ವಿರುದ್ಧ ಷಡ್ಯಂತ್ರ ರೂಪಿಸಿ ದ್ರೋಹಿಗಳಿಗೆ ಭಾಜಪ ತಕ್ಕಉ ತ್ತರ ನೀಡುತ್ತದೆ ಎಂದು ಎಚ್ಚರಿಸಿದರು.

ದೇಶದಲ್ಲಿ ಭಾಜಪ ವ್ಯಕ್ತಿಗಿಂತ ರಾಷ್ಟ್ರ ಮುಖ್ಯ ಎಂಬ ಸಿದ್ಧಾಂತದಡಿ ಬದುಕುತ್ತಿದೆ. ಕೆಲವು ಪಕ್ಷಗಳು ವಂಶಪಾರಂಪಾರ್ಯ ಅಧಿಕಾರ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದೆ. ಅಲ್ಲದೇ ಆರ್‌ಎಸ್‌ಎಸ್ ಸಂಘಟನೆ ದೇ ಶದ ಯಾವುದೇ ಮೂಲೆಗಳಲ್ಲಿ ಅವಘಡ ಸಂಭವಿಸಿದರೆ ಪ್ರತಿಫಲಪೇಕ್ಷೆ ಇಲ್ಲದೇ ತಾಯ್ನಾಡಿನ ಜನತೆಯ ಸುರಕ್ಷತೆ ಕಾಳಜಿವಹಿಸುತ್ತದೆ ಎಂದು ಹೇಳಿದರು. ಮುಖರ್ಜಿಯವರು ರಾಷ್ಟ್ರ ಹಿತಕ್ಕಾಗಿ ನೆಹರು ಸರ್ಕಾರದ ಸಚಿವ ಸ್ಥಾನವನ್ನೇ ತ್ಯಜಿಸಿ ಹಿಂದುಗಳ ಪರ ವಾಗಿ ನಿಂತಿದ್ದರು. ಆದರೀಗ ತಾಯಿಯಂತೆ ಗೌರವಿಸುವ ಪಕ್ಷವನ್ನು ಕೆಲವರು ಸಚಿವ ಸ್ಥಾನ, ಅಧಿಕಾರ ಹಾ ಗೂ ಆಮಿಷಕ್ಕೆ ಒಳಗಾಗಿ ಮರುದಿನವೇ ಪಕ್ಷ ತೊರೆಯುವ ಸನ್ನಿವೇಶವಿದೆ. ಹೀಗಾಗಿ ಮುಖರ್ಜಿಯವರ ಬದುಕಿನ ಶೈಲಿಯನ್ನು ಅರ್ಥೈಸಿಕೊಂಡರೆ ನಿಜವಾದ ಸತ್ಯಾಂಶ ತಿಳಿಯುತ್ತದೆ ಎಂದು ತಿಳಿಸಿದರು.

ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ೧೯೫೧ರಲ್ಲಿ ಆಟಲ್‌ಜೀ, ಅಡ್ವಾಣಿ, ಪಂಡಿತ್ ದೀನ್‌ದಯಾಳ್‌ರವರ ಮಾರ್ಗದರ್ಶನದಿಂದ ಹಿಂದೂಗಳ ಸಂರಕ್ಷಣೆಗಾಗಿ ಭಾರತೀಯ ಜನ ಸಂಘ ಸ್ಥಾಪಿತಗೊಂಡಿತು. ತದನಂತರ ಭಾಜಪದಡಿ ಮುಂಚೂಣಿಯ ಬಲ ಪಂಥೀಯ ರಾಜಕೀಯವಾಗಿ ಪಕ್ಷವಾಯಿತು. ಇದನ್ನು ಸಹಿಸದ ನೆಹರು ಸರ್ಕಾರ ಮುಖರ್ಜಿ ಅವರನ್ನು ಕುಗ್ಗಿಸಲು ಹಲವು ಕುತಂತ್ರಗಳು ನಡೆಸಿದ್ದರು ಎಂದರು. ಶ್ಯಾಮಪ್ರಸಾದ್ ಮುಖರ್ಜಿಯವರು ಶಿಕ್ಷಣ ತಜ್ಞ, ಉಪಕುಲಪತಿಗಳಾಗಿ ಅನೇಕ ಹುದ್ದೆಗಳನ್ನು ಅಲಂಕ ರಿಸಿದವರು. ನೆಹರು ಸಂಪುಟದ ಮಂತ್ರಿಮಂಡಲ ಸದಸ್ಯರಾದರೂ, ಹಿಂದುವಿರೋಧಿ ನೀತಿಯನ್ನು ಖಂಡಿ ಸಿದ್ದರು. ಕೊನೆಗೆ ಸಚಿವ ಸ್ಥಾನವನ್ನು ತೊರೆದು ಕಾಶ್ಮೀರ ಚಲೋ ಪ್ರಾರಂಭಿಸಿದರು. ಇದನ್ನು ಸಹಿಸದ ನೆಹ ರು ಸರ್ಕಾರ ಅವರನ್ನು ಬಂಧಿಸಿ ನಿಗೂಢ ಸಾವಿನಲ್ಲಿ ಅಂತ್ಯಕಾಣುವ ಸ್ಥಿತಿ ನಿರ್ಮಾಣವಾಯಿತು ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ ಮಾತನಾಡಿ ಸ್ವಾತಂತ್ರ್ಯ ಪೂರ್ವದ ನಂ ತರ ನೆಹರು ಸರ್ಕಾರ ಬ್ರಿಟಿಷರ ಕೈಗೊಂಬೆಯಂತೆ ವರ್ತಿಸುವುದನ್ನು ಮುಖರ್ಜಿಯವರು ತೀವ್ರ ವಿರೋಧಿ ಸಿದ್ದರು. ಭಾರತದ ಭೂಪ್ರದೇಶವನ್ನು ಚೀನಾಗೆ ಹಸ್ತಾಂತರ, ಕಾಶ್ಮೀರಕ್ಕೆ ೩೭೦ ಕಾಯ್ದೆ ರೂಪಿಸಿ ದೇಶ ತುಂ ಡರಿಸುವ ಕೆಲಸಕ್ಕೆ ಕೈಹಾಕಿರುವುದರ ವಿರುದ್ಧ ಮುಖರ್ಜಿ ಜನಸಂಘ ಸ್ಥಾಪಿಸಿ ಬೀದಿಗಿಳಿದು ಜನಾಂದೋಲ ನ ನಡೆಸಿದರು ಎಂದರು.

ಈ ಸಂದರ್ಭದಲ್ಲಿ ಓಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ನಗರಾಧ್ಯಕ್ಷ ಜಯವರ್ಧನ್, ಎಸ್ಸಿ ಮೋ ರ್ಚಾ ರಾಜ್ಯ ಕಾರ್ಯದರ್ಶಿ ಸೀತಾರಾಮಭರಣ್ಯ, ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಜಿ.ಪಂ. ಮಾಜಿ ಉಪಾಧ್ಯಕ್ಷ ಸೋಮಶೇಖರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ನಗರಸಭೆ ಉಪಾಧ್ಯಕ್ಷೆ ಅನುಮಧುಕರ್, ಸದಸ್ಯ ಮಧುಕುಮಾರ್‌ರಾಜ್ ಅರಸ್, ಮುಖಂಡರುಗಳಾದ ಕೋಟೆ ರಂಗ ನಾಥ್, ಈಶ್ವರಹಳ್ಳಿ ಮಹೇಶ್, ಲಕ್ಕಣ್ಣ, ನೆಟ್ಟಕೆರೆಹಳ್ಳಿ ಜಯಣ್ಣ, ನಾರಾಯಣ್ ಸಿ.ಹೆಚ್.ಲೋಕೇಶ್, ಸಂತೋ ಷ್ ಕೋಟ್ಯಾನ್, ಪವಿತ್ರ, ವೀಣಾ ಮತ್ತಿತರರು ಉಪಸ್ಥಿತರಿದ್ದರು

Shyamprasad Mukherjee’s dream of a grand India came true

Share

Leave a comment

Leave a Reply

Your email address will not be published. Required fields are marked *

Don't Miss

ಹಿರೇಬೈಲು ಗ್ರಾಮದಲ್ಲಿ ನಕಲಿ ವೈದ್ಯನ ವಿರುದ್ಧ ಕ್ರಮ

ಕಳಸ: ಹಿರೇಬೈಲು ಗ್ರಾಮದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯನ ವಿರುದ್ಧ ಕ್ರಮ ಕೈಗೊಂಡಿದ್ದು, ಕ್ಲಿನಿಕ್ ಅನ್ನು ಬಂದ್ ಮಾಡಿಸಲಾಗಿದೆ ಎಂದು ಆರೋಗ್ಯ ಇಲಾಖೆಯವರು ತಿಳಿಸಿದ್ದಾರೆ. ಸ್ಥಳೀಯರ ದೂರಿನ ಮೇರೆಗೆ ಆರೋಗ್ಯ ಇಲಾಖೆ...

ವಿದ್ಯುತ್‌ಶಾಕ್‌ನಿಂದ ಲೈನ್‌ಮ್ಯಾನ್ ಸಾವು

ಬಾಳೆಹೊನ್ನೂರು: ಆಲ್ದೂರು ವಲಯದ ಸಂಗಮೇಶ್ವರ ಪೇಟೆಯ ಸೆಕ್ಷನ್ ಪವರ್‌ಮ್ಯಾನ್ ಪ್ರವೀಣ ಪಾತ್ರೋಟ(25) ವಿದ್ಯುತ್ ಆಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೆನಕಟ್ಟಿ ಗ್ರಾಮದ ಪ್ರವೀಣ ಅವರು, ಶುಕ್ರವಾರ ಬೆಳಿಗ್ಗೆ ಹುಣಸೇಕೊಪ್ಪ ಬಳಿ...

Related Articles

ಜು.28ಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಮೇಳ

ಚಿಕ್ಕಮಗಳೂರು: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ವಸಾಹತು ಹಿಂಭಾಗ, ಜಿಲ್ಲಾ ಪಂಚಾಯಿತಿ ಹತ್ತಿರ, ಜ್ಯೋತಿನಗರ, ಚಿಕ್ಕಮಗಳೂರು)...

ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಕುದುರೆಮುಖ, ಮುಳ್ಳಯ್ಯನ...

ಸಾರ್ವಜನಿಕರ ಸುರಕ್ಷತೆಗಾಗಿ “ಮನೆ-ಮನೆಗೆ ಪೊಲೀಸ್”

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ 368 ಬೀಟ್‌ಗಳಲ್ಲಿ ಏಕಕಾಲದಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು  ಜಿಲ್ಲಾ ಪೊಲೀಸ್...

ಗಿರಿಭಾಗಕ್ಕೆ ಪ್ರವೇಶ ಶುಲ್ಕ-ಪಾಸ್ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಮತ್ತು ಐ.ಡಿ.ಪೀಠ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿ ವಾಸಿಗಳಿಗೆ ಪ್ರವೇಶ ಶುಲ್ಕ ಮತ್ತು ಪಾಸ್...