Home Latest News ಎಐ ತಂತ್ರಜ್ಞಾನದಿಂದ ಸಮಯ ಉಳಿತಾಯ
Latest NewschikamagalurHomenamma chikmagalur

ಎಐ ತಂತ್ರಜ್ಞಾನದಿಂದ ಸಮಯ ಉಳಿತಾಯ

Share
Share

ಚಿಕ್ಕಮಗಳೂರು:  ಶಿಕ್ಷಕರಿಗಾಗಿ ಜನರೇಟಿವ್ ಎಐಯೊಂದಿಗೆ ದೈನಂದಿನ ಕೆಲಸಗಳಲ್ಲಿ ಸ ಮಯವನ್ನು ಉಳಿಸಲು, ಸೂಚನೆಗಳನ್ನು ವೈಯಕ್ತೀಕರಿಸಲು, ಪಾಠಗಳು ಮತ್ತು ಚಟುವಟಿಕೆಗಳನ್ನು ಸೃಜ ನಾತ್ಮಕ ರೀತಿಯಲ್ಲಿ ವರ್ಧಿಸಲು ಸಹಕಾರಿ ಎಂದು ಎಐಟಿ ಕಾಲೇಜು ಪ್ರಾಂಶುಪಾಲ ಡಾ|| ಸಿ.ಟಿ.ಜಯದೇವ್ ಹೇಳಿದರು.

ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಸಹಯೋಗದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ‘ಜನರೇಟಿವ್ ಎ.ಐ.ಫಾರ್ ದ ಮಾರ್ಡನ್ ಎಜುಕೇಟರ್ ಎಂಬ ವಿಷಯ ಕುರಿತು ಅಧ್ಯಾಪಕರುಗಳ ಅಭಿವೃದ್ದಿಗೆ ಏರ್ಪಡಿಸಿದ್ದ ಆರು ದಿನಗಳ ಕಾ ರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಸ್ವಯಂ-ಗತಿಯ ಕೋರ್ಸ್ ಶಿಕ್ಷಕರ ಕಾರ್ಯನಿರತ ವೇಳಾಪಟ್ಟಿಗೆ ಹೊಂದಿಕೊಳ್ಳುತ್ತದೆ ಮತ್ತು ನಮ್ಯತೆ ಯನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತದೆ. ಇದು ಎಲ್ಲಾ ವಿಭಾಗಗಳ ಶಿಕ್ಷಕರಿಗೆ ಪ್ರಾಯೋಗಿಕ ಅನುಭವವನ್ನು ನೀಡು ತ್ತದೆ ಹಾಗೂ ಕೋರ್ಸ್ ಅನ್ನು ಪೂರ್ಣಗೊಳಿಸಲಿದೆ ಎಂದು ತಿಳಿಸಿದರು.

ಎಐ ತಜ್ಞರು ಅಭಿವೃದ್ಧಿಪಡಿಸಿರುವ ಈ ಕೋರ್ಸ್ ಎಐ ಅನ್ನು ನಿಮ್ಮ ಅಭ್ಯಾಸಕ್ಕೆ ತರಲು ನಿಮಗೆ ಸಹಾ ಯ ಮಾಡುತ್ತದೆ. ನೀವು ಎಐ ಬಗ್ಗೆ ಮೂಲಭೂತ ತಿಳುವಳಿಕೆಯನ್ನು ಸಹ ಪಡೆಯಬಹುದು. ಈ ತಂತ್ರಜ್ಞಾ ನದ ಅವಕಾಶಗಳು ಮತ್ತು ಮಿತಿಗಳು ಮತ್ತು ಅದನ್ನು ಜವಾಬ್ದಾರಿಯುತವಾಗಿ ಹೇಗೆ ಬಳಸುವುದು ಎಂಬು ದನ್ನು ನೀವು ಕಲಿಯಬಹುದು ಎಂದರು.

ಕೌಶಲ್ಯ ಟೆಕ್ನಿಕಲ್ ಟ್ರೈನಿಂಗ್ ಮತ್ತು ಕನ್ಸಲ್ಟೆನ್ಸಿ ಸರ್ವಿಸ್‌ನ ಸಂಸ್ಥಾಪಕ ರಘುಪ್ರಸಾದ್ ಮಾತನಾಡಿ ಜನರೇಟಿವ್ ಎಐ ಎಂಬ ವಿಷಯವು ನಿಜಕ್ಕೂ ಇಂದಿನ ಯುಗಕ್ಕೆ ಅಗತ್ಯವಾಗಿದ್ದು, ಅಧ್ಯಾಪನದಲ್ಲಿ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ದಾರಿ ಮಾಡುತ್ತದೆ. ಜೊತೆಗೆ ತಂತ್ರಜ್ಞಾನವನ್ನು ನುರಿತು ತಜ್ಞರಿಂದ ಕಲಿಯುವ ಅದ್ಬುತ ವೇದಿಕೆ ಇದಾಗಿದ್ದು ಭಾಗವಹಿಸುವ ನವೀನ ಕಲಿಕರಿಗೆ ಉಪಯೋಗ ಎಂದರು.

ಇದೇ ವೇಳೆ ವಿವಿಧ ಕಾಲೇಜಿನಿಂದ ೫೦ಕ್ಕೂ ಹೆಚ್ಚು ಪ್ರಾಧ್ಯಾಪಕರುಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಹಾಗೂ ಪಾ ಧ್ಯಾಪಕಿ ಡಾ|| ಪುಷ್ಪ ರವಿಕುಮಾರ್ ವಿಭಾಗದ ಸಂಯೋಜಕರಾದ ಪ್ರೊ.ಎಸ್.ಹರೀಶ್, ಪ್ರೊ.ಸಿ.ಎ.ಅನ್ಸರ್ ಪಾಷಾ, ಪ್ರೊ.ಜೆ.ಮಣಿಕಂಠಪ್ರಸಾದ್, ಪ್ರೊ.ಅರ್ಪಿತ ಆಯೋಜನಾ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

Saving time with AI technology

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...