Home Latest News ಕಳಸ ಭಾಗದಲ್ಲಿ 2846 ಹೆಕ್ಟೇರ್ ಪ್ರದೇಶ ಅರಣ್ಯ ಪಾಲಾಗಲು ಸಿದ್ಧತೆ
Latest NewschikamagalurHomenamma chikmagalur

ಕಳಸ ಭಾಗದಲ್ಲಿ 2846 ಹೆಕ್ಟೇರ್ ಪ್ರದೇಶ ಅರಣ್ಯ ಪಾಲಾಗಲು ಸಿದ್ಧತೆ

Share
Share
ಮೂಡಿಗೆರೆ: ಅರಣ್ಯ ಕಾಯಿದೆ ೪/೧ರಲ್ಲಿದ್ದ ಕಂದಾಯ ಭೂಮಿಯನ್ನು ಅರಣ್ಯ ಪಾಲಾಗಲು  ಇದೀಗ ೧೭/೧ ಜಾರಿ ಮಾಡಲು ಸಿದ್ಧತೆ ನಡೆದಿದೆ ಈ ಕಾಯಿದೆ ಜಾರಿಯಾದರೆ ಕಳಸ ಭಾಗದಲ್ಲಿ ೨೫೪೮ ಹೆಕ್ಟೇರ್ ಭೂಮಿ ಅರಣ್ಯ ಪಾಲಾಗಲಿದೆ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಕಳಸ ಅರಣ್ಯ ವಲಯ ವ್ಯಾಪ್ತಿಯಲ್ಲಿ ಅರಮನ ತಲಗೂರು ೪೦ ಹೆಕ್ಟೇರ್, ಕಲ್ಮನೆ ೮೦, ಮಾಳಿಗನಾಡು ೯೨, ಬಿಳಗಲಿ ೧೬೭, ಜಾವಳಿ ಹೇಮಾವತಿ ನದಿ ಸುತ್ತಮುತ್ತ ೨೨೯, ಕೆ.ಕೆಳಗೂರು ೫೨, ಮಾವಿನಕೆರೆ ೯೬, ಶ್ರೀ ಅನ್ನಪೂರ್ಣೇಶ್ವರಿ ೩ ಬ್ಲಾಕ್‌ನಿಂದ ೫೨೬, ತಲಕೂಡು ೨ ಬ್ಲಾಕ್‌ನಿಂದ ೨೨೨, ಎಡೂರು ೨ ಬ್ಲಾಕ್‌ನಿಂದ ೮೪, ಹೆಮ್ಮಕ್ಕಿ ೬ ಬ್ಲಾಕ್‌ನಿಂದ ೧೬೬, ಇಡಕಣಿ ಬ್ಲಾಕ್ ೬ರಲ್ಲಿ ೮೭, ಕಾರ್‍ಲೆಕಳಗೂಡು ೧೬೨, ಕೂವೆ, ಕಲ್ಮನೆ ಮಾಳಿಗನಾಡು ಸೇರಿ ೨೫೧, ಮಾವಿನಕೆರೆ ಬ್ಲಾಕ್ ೪ರಲ್ಲಿ ೧೭, ತಲಗೂಡು ೧ರಿಂದ ೫ ಬ್ಲಾಕ್ ವರೆಗೆ ೫೦, ಒಟ್ಟು ೨೫೪೮ ಹೆಕ್ಟೇರ್ ಪ್ರದೇಶ ಅರಣ್ಯ ಕಾಯಿದೆ ೪/೧ರಿಂದ ೧೭/೧ಗೆ ಮಾಡಲು ಈಗಾಗಲೇ ಸರಕಾರ ಎಸ್‌ಎಫ್‌ಒ (ಸೆಟಲ್ಮೆಂಟ್ ಫಾರೆಸ್ಟ್ ಆಫಿಸರ್) ಅಧಿಕಾರಿ ನೇಮಕ ಮಾಡಿದೆ. ಒಂದು ವೇಳೆ ಈ ಎಲ್ಲಾ ಪ್ರದೇಶ ಅರಣ್ಯ ಕಾಯಿದೆ ೧೭/೧ ಆದರೆ ಈ ಗ್ರಾಮದ ಎಲ್ಲಾ ರೈತರು, ಕಾರ್ಮಿಕರು ಬೀದಿಪಾಲಾಗುತ್ತಾರೆಂದು ಹೇಳಿದರು.
ಈಗಾಗಲೇ ತಾಲೂಕಿನಲ್ಲಿ ನಿವೇಶನ ಕೊರತೆಯಿದೆ. ೨೦೧೯ರಲ್ಲಿ ಉಂಟಾದ ಪ್ರವಾಹದಿಂದ ಜಮೀನು ಕಳೆದುಕೊಂಡ ನಿರಾಶ್ರಿತರಿಗೆ ಹರಸಾಹಸ ಪಟ್ಟು ಬದಲಿ ಜಾಗ ನೀಡಲಾಗಿದೆ. ಇದೀಗ ಕಳಸ ಭಾಗದಲ್ಲಿ ೨೫೪೮ ಹೆಕ್ಟೇರ್ ಪ್ರದೇಶ ಅರಣ್ಯ ಪಾಲಾದರೆ ಸಂತ್ರಸ್ತರಿಗೆ ಬದಲಿ ಜಾಗ ಕೊಡಲು ಸರಕಾರಕ್ಕೆ ತಲೆ ನೋವಾಗಿ ಪರಿಣಮಿಸುವುದರಲ್ಲಿ ಸಂದೇಹವಿಲ್ಲ. ನಿವೇಶನ ರಹಿತರಿಗೆ ನಿವೇಶನ ಕೊಡಲು ಸಾಧ್ಯವಾಗುವುದಿಲ್ಲ.
ಹಾಗಾಗಿ ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿ ಈ ಪ್ರಕ್ರಿಯೆ ಕೈ ಬಿಡಲು ಕ್ರಮ ವಹಿಸಬೇಕು. ಇಲ್ಲವಾದರೆ ರೈತರೊಂದಿಗೆ ಸೇರಿ ದೊಡ್ಡ ಮಟ್ಟದ ಹೋರಾಟ ರೂಪಿಸುವುದು ಅನುವಾರ್ಯವಾಗಿದೆ ಎಂದು ಹೇಳಿದರು.
Preparations underway for forest clearance of 2846 hectares in Kalasa area
Share

Leave a comment

Leave a Reply

Your email address will not be published. Required fields are marked *

Don't Miss

ಗಿರಿ ಪ್ರದೇಶದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ನೂತನ ಸಂಚಾರ ವ್ಯವಸ್ಥೆ

ಚಿಕ್ಕಮಗಳೂರು: : ಮುಳ್ಳಯ್ಯನಗಿರಿ ಭಾಗದಲ್ಲಿ ಇತ್ತೀಚೆಗೆ ವಾರಾಂತ್ಯದಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸಲು ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗುತ್ತಿದ್ದು, ಎರಡು ಸ್ಲಾಟ್‌ಗಳಲ್ಲಿ ಪ್ರತೀದಿನ ವಾಹನಗಳನ್ನು ಗಿರಿಭಾಗಕ್ಕೆ ಬಿಡಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದರು....

ಕಾವೇರುತ್ತಿದೆ ಅಜ್ಜಂಪುರ ಪಟ್ಟಣ ಪಂಚಾಯತಿ ಚುನಾವಣೆ

ಅಜ್ಜಂಪುರ: ಕಳೆದ ಏಳು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳು ಇಲ್ಲದೆ ಬಣಗುಡುತ್ತಿದ್ದ ಪಟ್ಟಣ ಪಂಚಾಯತಿಗೆ ಆಗಷ್ಟ್ 17 ರಂದು ಚುನಾವಣೆ ದಿನಾಂಕ ನಿಗದಿಯಾಗಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಜನತಾದಳದ ಮಧ್ಯೆ ಬಿರುಸಿನ...

Related Articles

ಮಕ್ಕಳ ಬಾಲ್ಯ ಸುರಕ್ಷತೆಗಾಗಿ ಭದ್ರ ಬಾಲ್ಯ ಯೋಜನೆ ಅನುಷ್ಠಾನ

ಚಿಕ್ಕಮಗಳೂರು: ಮಕ್ಕಳ ಬಾಲ್ಯವನ್ನು ಸುರಕ್ಷಿತಗೊಳಿಸುವ ಗುರಿ ಇರಿಸಿಕೊಂಡು ಜಿಲ್ಲೆಯಲ್ಲಿ ಭದ್ರ ಬಾಲ್ಯ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಎಲ್ಲಾ...

ಕ್ಷೌರಿಕ ವೃತ್ತಿಯ ದರಪಟ್ಟಿಯ ದುರ್ಬಳಕೆ ವಿರುದ್ಧ ಸಮಾಜದಿಂದ ಪ್ರತಿಭಟನೆ

ಚಿಕ್ಕಮಗಳೂರು:  ಕ್ಷೌರಿಕ ವೃತ್ತಿಯ ದರಪಟ್ಟಿಯ ದುರ್ಬಳಕೆ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ನಿಗಧಿತ ದರಕ್ಕಿಂತ ಕಡಿಮೆ...

ಮಾದಕ ವಸ್ತು ವಿರೋಧಿ ಜಾಗೃತಿ ಸಮಿತಿ ರಚನೆ ಕಡ್ಡಾಯ 

ಚಿಕ್ಕಮಗಳೂರು:  ಶಾಲಾ ಕಾಲೇಜುಗಳಲ್ಲಿ ಮಾದಕವಸ್ತು ವಿರೋಧಿ ಜಾಗೃತಿ ಸಮಿತಿಗಳನ್ನು ಕಡ್ಡಾಯವಾಗಿ ರಚಿಸುವ ಮೂಲಕ ಮಾದಕ ವಸ್ತು...

ವೇದಾನದಿ ನೀರಿನ ಹಂಚಿಕೆಯಲ್ಲಿ ರೈತರು ಸಂಯಮ ಕಾಪಾಡಬೇಕು

ಚಿಕ್ಕಮಗಳೂರು: ವೇದಾ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರೈತರು ಸಂಯಮ ಕಾಪಾಡಬೇಕು. ಜೊತೆಗೆ ಕೆರೆ ತುಂಬಿಸುವ...