Home Latest News ಕಳಸ ಭಾಗದಲ್ಲಿ 2846 ಹೆಕ್ಟೇರ್ ಪ್ರದೇಶ ಅರಣ್ಯ ಪಾಲಾಗಲು ಸಿದ್ಧತೆ
Latest NewschikamagalurHomenamma chikmagalur

ಕಳಸ ಭಾಗದಲ್ಲಿ 2846 ಹೆಕ್ಟೇರ್ ಪ್ರದೇಶ ಅರಣ್ಯ ಪಾಲಾಗಲು ಸಿದ್ಧತೆ

Share
Share
ಮೂಡಿಗೆರೆ: ಅರಣ್ಯ ಕಾಯಿದೆ ೪/೧ರಲ್ಲಿದ್ದ ಕಂದಾಯ ಭೂಮಿಯನ್ನು ಅರಣ್ಯ ಪಾಲಾಗಲು  ಇದೀಗ ೧೭/೧ ಜಾರಿ ಮಾಡಲು ಸಿದ್ಧತೆ ನಡೆದಿದೆ ಈ ಕಾಯಿದೆ ಜಾರಿಯಾದರೆ ಕಳಸ ಭಾಗದಲ್ಲಿ ೨೫೪೮ ಹೆಕ್ಟೇರ್ ಭೂಮಿ ಅರಣ್ಯ ಪಾಲಾಗಲಿದೆ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಕಳಸ ಅರಣ್ಯ ವಲಯ ವ್ಯಾಪ್ತಿಯಲ್ಲಿ ಅರಮನ ತಲಗೂರು ೪೦ ಹೆಕ್ಟೇರ್, ಕಲ್ಮನೆ ೮೦, ಮಾಳಿಗನಾಡು ೯೨, ಬಿಳಗಲಿ ೧೬೭, ಜಾವಳಿ ಹೇಮಾವತಿ ನದಿ ಸುತ್ತಮುತ್ತ ೨೨೯, ಕೆ.ಕೆಳಗೂರು ೫೨, ಮಾವಿನಕೆರೆ ೯೬, ಶ್ರೀ ಅನ್ನಪೂರ್ಣೇಶ್ವರಿ ೩ ಬ್ಲಾಕ್‌ನಿಂದ ೫೨೬, ತಲಕೂಡು ೨ ಬ್ಲಾಕ್‌ನಿಂದ ೨೨೨, ಎಡೂರು ೨ ಬ್ಲಾಕ್‌ನಿಂದ ೮೪, ಹೆಮ್ಮಕ್ಕಿ ೬ ಬ್ಲಾಕ್‌ನಿಂದ ೧೬೬, ಇಡಕಣಿ ಬ್ಲಾಕ್ ೬ರಲ್ಲಿ ೮೭, ಕಾರ್‍ಲೆಕಳಗೂಡು ೧೬೨, ಕೂವೆ, ಕಲ್ಮನೆ ಮಾಳಿಗನಾಡು ಸೇರಿ ೨೫೧, ಮಾವಿನಕೆರೆ ಬ್ಲಾಕ್ ೪ರಲ್ಲಿ ೧೭, ತಲಗೂಡು ೧ರಿಂದ ೫ ಬ್ಲಾಕ್ ವರೆಗೆ ೫೦, ಒಟ್ಟು ೨೫೪೮ ಹೆಕ್ಟೇರ್ ಪ್ರದೇಶ ಅರಣ್ಯ ಕಾಯಿದೆ ೪/೧ರಿಂದ ೧೭/೧ಗೆ ಮಾಡಲು ಈಗಾಗಲೇ ಸರಕಾರ ಎಸ್‌ಎಫ್‌ಒ (ಸೆಟಲ್ಮೆಂಟ್ ಫಾರೆಸ್ಟ್ ಆಫಿಸರ್) ಅಧಿಕಾರಿ ನೇಮಕ ಮಾಡಿದೆ. ಒಂದು ವೇಳೆ ಈ ಎಲ್ಲಾ ಪ್ರದೇಶ ಅರಣ್ಯ ಕಾಯಿದೆ ೧೭/೧ ಆದರೆ ಈ ಗ್ರಾಮದ ಎಲ್ಲಾ ರೈತರು, ಕಾರ್ಮಿಕರು ಬೀದಿಪಾಲಾಗುತ್ತಾರೆಂದು ಹೇಳಿದರು.
ಈಗಾಗಲೇ ತಾಲೂಕಿನಲ್ಲಿ ನಿವೇಶನ ಕೊರತೆಯಿದೆ. ೨೦೧೯ರಲ್ಲಿ ಉಂಟಾದ ಪ್ರವಾಹದಿಂದ ಜಮೀನು ಕಳೆದುಕೊಂಡ ನಿರಾಶ್ರಿತರಿಗೆ ಹರಸಾಹಸ ಪಟ್ಟು ಬದಲಿ ಜಾಗ ನೀಡಲಾಗಿದೆ. ಇದೀಗ ಕಳಸ ಭಾಗದಲ್ಲಿ ೨೫೪೮ ಹೆಕ್ಟೇರ್ ಪ್ರದೇಶ ಅರಣ್ಯ ಪಾಲಾದರೆ ಸಂತ್ರಸ್ತರಿಗೆ ಬದಲಿ ಜಾಗ ಕೊಡಲು ಸರಕಾರಕ್ಕೆ ತಲೆ ನೋವಾಗಿ ಪರಿಣಮಿಸುವುದರಲ್ಲಿ ಸಂದೇಹವಿಲ್ಲ. ನಿವೇಶನ ರಹಿತರಿಗೆ ನಿವೇಶನ ಕೊಡಲು ಸಾಧ್ಯವಾಗುವುದಿಲ್ಲ.
ಹಾಗಾಗಿ ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿ ಈ ಪ್ರಕ್ರಿಯೆ ಕೈ ಬಿಡಲು ಕ್ರಮ ವಹಿಸಬೇಕು. ಇಲ್ಲವಾದರೆ ರೈತರೊಂದಿಗೆ ಸೇರಿ ದೊಡ್ಡ ಮಟ್ಟದ ಹೋರಾಟ ರೂಪಿಸುವುದು ಅನುವಾರ್ಯವಾಗಿದೆ ಎಂದು ಹೇಳಿದರು.
Preparations underway for forest clearance of 2846 hectares in Kalasa area
Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ನೀರುಗಂಟಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಚಿಕ್ಕಮಗಳೂರು: ಅಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಹೇಮಾವತಿ ನದಿಯ ಅಕ್ರಮವಾಗಿ ಮರಳು ಸಾಗಣೆ ಪ್ರಕರಣ ಪತ್ತೆ

ಮೂಡಿಗೆರೆ: ಜೀವನದಿ ಹೇಮಾವತಿಯ ಒಡಲಿಗೆ ಕನ್ನ ಹಾಕಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲದ ಮೇಲೆ ಗೋಣಿಬೀಡು...

ಕಾಫಿನಾಡಿನಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮವು ಸಡಗರ ಹಾಗೂ ಸೌಹಾರ್ದತೆಯಿಂದ ಕಳೆಗಟ್ಟಿತ್ತು. ಕೆಂಪನಹಳ್ಳಿಯ...

ಕಾಫಿ ತೋಟದಲ್ಲಿ ಮರಗಸಿ – ಕಾರ್ಮಿಕನ ಸಾವು

ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ...