Home Crime News ಮೇ 9ಕ್ಕೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ
Crime NewsHomeLatest Newsnamma chikmagalur

ಮೇ 9ಕ್ಕೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ

Share
Share

ಬೆಂಗಳೂರು: ಅಪೆಕ್ಸ್ ಅಧ್ಯಕ್ಷ ರಾದ ಬೆಳ್ಳಿ ಪ್ರಕಾಶ್ ವಿರುದ್ಧ ಕಾಂಗ್ರೆಸ್ ನವರು ಮೇ 9ರಂದು ಅವಿಶ್ವಾಸ ಮಂಡನೆ ಮಾಡುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಘಾಟಾನುಘಟಿ ಸಹಕಾರಿ ಧುರೀಣರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಲು ಪ್ರಯತ್ನಿಸಿ ವಿಫಲರಾಗಿದ್ದರು.ಹತ್ತಾರು ವರ್ಷ ಬ್ಯಾಂಕ್ ನಿರ್ದೇಶಕರಾಗಿದ್ದ ದಿವಂಗತ ಧರ್ಮೇಗೌಡ ಉಪಾಧ್ಯಕ್ಷರಾಗಿದ್ದರು.ಬೆಳ್ಳಿ ಪ್ರಕಾಶ್ ಪ್ರಥಮ ಬಾರಿಗೆ ನಿರ್ದೇಶಕರಾಗಿ ಅಧ್ಯಕ್ಷರು ಆಗಿ ದಾಖಲೆ ಬರೆದಿದ್ದಾರೆ.ಇದನ್ನು ಮರೆಮಾಚಲು ಸಾಧ್ಯವೇ ?

ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಇದ್ದರೂ ಬೆಳ್ಳಿ ಕುರ್ಚಿಗೆ ಕಂಟಕ ಇರಲಿಲ್ಲ ಆದರೆ ಜಿಲ್ಲೆಯ ಶಾಸಕರು ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ್ ರವರು ಪದೇ,ಪದೇ ಬೆಳ್ಳಿ ಪ್ರಕಾಶ್ ವಿರುದ್ಧ ದೂರು ಹೇಳಿದರು ಪ್ರಯೋಜನವಾಗಿರಲಿಲ್ಲ.ಕೇವಲ ಐದಾರು ತಿಂಗಳು ಅವಧಿಯಿರುವಾಗ ಅವಿಶ್ವಾಸ ನಿರ್ಣಯ ಎಂಬ ಗುಡ್ಡ ಅಗೆಯುವ ಪ್ರಯತ್ನದಲ್ಲಿ ಇದ್ದರೆ ಬೆಳ್ಳಿ ಪ್ರಕಾಶ್ ಹಗ್ಗ ಹಿಡಿದು ಕುಳಿತಿದ್ದಾರೆ.ಬಂದರೆ ಗುಡ್ಡ ಹೋದರೆ ಹಗ್ಗ ಎನ್ನುವಂತಾಗಿದೆ.

ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೇಡ ಎನ್ನುವ ಸಹಕಾರ ಸಚಿವ ರಾಜಣ್ಣ ಎಲ್ಲದರಲ್ಲೂ ರಾಜಕೀಯ ಇರಬೇಕು ಎನ್ನುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲವನ್ನೂ ಕಿರುಗಣ್ಣಿನಿಂದ ನೋಡುತ್ತಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ರ ಮಧ್ಯೆ ಏನು ನಡೆಯಬಹುದು ಎಂಬ ಕುತೂಹಲ ಹುಟ್ಟಿಸಿದೆ.ಸರ್ಕಾರದ ಕೈ ಇರುವುದರಿಂದ ಗುಡ್ಡ ಸಿಗಬಹುದು. ಆದರೆ ಕಳೆದ ಎರಡು ವರ್ಷಗಳಿಂದ ಸುಮ್ಮನೆ ಇದ್ದ ಸರ್ಕಾರದ ಧಿಡೀರ್ ತೀರ್ಮಾನದ ಫಲದ ಬಗ್ಗೆ ಬೆಳ್ಳಿ ತಲೆ ಕೆಡಿಸಿ ಕೊಂಡಿಲ್ಲ ಎಲ್ಲವನ್ನೂ ಎದುರಿಸಲು ತಯಾರಿ ನಡೆಸುವುದರ ಜೊತೆಗೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರ ನೀಡಿದ ಸಹಕಾರವನ್ನು ಸ್ಮರಿಸುತ್ತಾರೆ.

ಅದರಲ್ಲೂ ಸಹಕಾರ ಸಚಿವರು ಬ್ಯಾಂಕ್ ನ ಉನ್ನತಿಗೆ ಶ್ರಮಿಸಿದವರು ಎನ್ನುವ ಬೆಳ್ಳಿ ಪ್ರಕಾಶ್ ಅಧ್ಯಕ್ಷ ಸ್ಥಾನದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.ಕಳೆದ ಎರಡು ತಿಂಗಳಿಂದ ಬ್ಯಾಂಕ್ ನಲ್ಲಿ ಪಟ್ಟಾಗಿ ಕುಳಿತುಕೊಂಡು ಕೆಲಸ ಮಾಡುವುದರ ಜೊತೆಗೆ ಸಿನಿಮಾ ನೋಡುವ ಹವ್ಯಾಸ ವನ್ನು ಮುಂದುವರೆಸಿ ಜಾಲಿ ಮುಡ್ ನಲ್ಲಿದ್ದಾರೆ.ಅಂತೂ ಅಪೆಕ್ಸ್ ಬ್ಯಾಂಕ್ ನ ಇತಿಹಾಸದಲ್ಲಿ ಅವಿಶ್ವಾಸ ಎಂಬ ಕಪ್ಪು ಚುಕ್ಕೆ ಮೆತ್ತುತ್ತಿರುವುದು ಸಹಕಾರಿಗಳಿಗೆ ಬೇಸರವಿದೆ.

No-confidence motion against apex bank chairman to be moved on May 9

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...