Home Latest News ಬಯಲುಸೀಮೆ ಮಲೆನಾಡ ಸಿರಿಯಲ್ಲಿ ಲೋಕಾರ್ಪಣೆಗೆ ಸಿದ್ಧವಾಗಿದೆ Newskingkannada.com
Latest News

ಬಯಲುಸೀಮೆ ಮಲೆನಾಡ ಸಿರಿಯಲ್ಲಿ ಲೋಕಾರ್ಪಣೆಗೆ ಸಿದ್ಧವಾಗಿದೆ Newskingkannada.com

Share
News king Kannada News Portal launch
Share

News king Kannada News Portal launch: ಮಲೆನಾಡ ಘಮ, ಬಯಲು ಸೀಮೆಯ ಹವ, ಇದರ ಮಧ್ಯೆಹರೇ ಮಲೆನಾಡ ಸೆರಗು. ಒಟ್ಟಾರೆ ಪ್ರಕೃತಿ ಸೌಂದರ್ಯದ ತಾಣ,ಬೆಟ್ಟಗುಡ್ಡಗಳ ಮಧ್ಯೆ ಮಂಜಿನ ಸಾಲುಗಳ ಮಧ್ಯೆ ಚಿಕ್ಕಮಗಳೂರು ಜಿಲ್ಲೆಯ ಹವಮಾನ ಜಗತ್ ಪ್ರಸಿದ್ಧಿ. ಮಲೆನಾಡಿನ ಕಾಫಿಯಷ್ಟೇ, ಬಯಲುಸೀಮೆಯ ಅಡಕೆಯ ಬೆಳೆ ವಿಶ್ವಮಾರುಕಟ್ಟೆಯಲ್ಲಿ ಹೆಸರುವಾಸಿ.

ಶೃಂಗೇರಿ, ಬಾಳೆಹೊನ್ನೂರು ಪೀಠಗಳ ಜೊತೆಗೆ ದತ್ತಾತ್ರೇಯ ಬಾಬಾಬುಡನ್ ಪೀಠದ ಜೊತೆಗೆ ಪ್ರಸಿದ್ಧ ಪ್ರವಾಸಿ ತಾಣಗಳಾದ ಮುಳ್ಳಯ್ಯನ ಗಿರಿ, ಕೆಮ್ಮಣ್ಣುಗುಂಡಿ, ಕುದುರೆಮುಖದಂತಹ ಹಲವುತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರ ದಂಡು ದಾಗುಡಿಯಿಡುತ್ತಿದೆ.

ರಾಷ್ಟ್ರದಲ್ಲಿ ಪಂಜಾಬ್ ಪಂಚ ನದಿಗಳ ಬೀಡಾದರೆ, ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆ ಪಂಚನದಿಗಳ ಉಗಮದ ತಾಣವಾಗಿದೆ. ತುಂಗಾ, ಭದ್ರ, ನೇತ್ರಾ, ವೇದಾ, ಹೇಮಾ ನದಿಗಳು ಜಿಲ್ಲೆಯಲ್ಲಿ ಹುಟ್ಟಿಹಲವು ಜಿಲ್ಲೆಗೆ ಅಷ್ಟೇ ಅಲ್ಲ ಹಲವು ರಾಜ್ಯಗಳಿಗೆ ನೀರನ್ನಷ್ಟೇ ಅಲ್ಲದೇ ಜನರಿಗೆ ದಾಹ ತಣಿಸುವ ಜೊತೆಗೆ ಬೆಳೆಗಳಿಗೆ ನೀರುಣಿಸುತ್ತಿರುವುದು ಸತ್ಯ.

1864 ರಲ್ಲಿ ಆಂಗ್ಲವರಾದ ಶ್ರೀ ಟಿ.ಅಕ್ಟೋಲ್ ಎಂಬ ಜಿಲ್ಲಾಧಿಕಾರಿಯಿಂದ ಆರಂಭವಾಗಿರುವ ಆಡಳಿತಕ್ಕೆ ಕನ್ನಡಿಗರಾದ ದಿವಂಗತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಜನಪದ ತಜ್ಞ ಹೆಚ್.ಎಲ್.ನಾಗೇಗೌಡರಂತವರು ಜಿಲ್ಲಾಧಿಕಾರಿಗಳಾದ ಧೀಮಂತ ಹೆಮ್ಮೆಯ ಸಂಗತಿ ಮರೆಯಲಾಗದು. ರಾಜಕಾರಣ ದಲ್ಲೂ ಹಲವು ದಿಗ್ಗಜರನ್ನು ಸೃಷ್ಟಿಸಿರುವ ದಾಖಲೆಗಳಿವೆ.

ರಾಷ್ಟ್ರದಲ್ಲಿ 1952 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಸೇರಿ ಲೋಕಸಭಾ ಕ್ಷೇತ್ರದಿಂದ ಹೆಚ್.ಸಿದ್ದನಂಜಪ್ಪ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿ ಲೋಕಸಭಾ ಸದಸ್ಯರಾದರೆ 1977ರಲ್ಲಿ ಜಗತ್ತು ಪ್ರಸಿದ್ಧ ರಾಜಕಾರಣಿ ಇಂದಿರಾಗಾಂಧಿಗೆ ಪುನರುಜ್ಜೀವನ ಕೊಟ್ಟ ಜಿಲ್ಲೆ ಇದರ ಜೊತೆಗೆ 1952 ರಲ್ಲಿ ತರೀಕೆರೆ ವಿಧಾನ ಸಭಾ ಕ್ಷೇತ್ರದ ಚುನಾವಣೆ ತಕರಾರಿನಿಂದಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿ ದಾಖಲೆ ಸೃಷ್ಟಿಸಿರುವುದು ದಾಖಲೆಯೇ ಸರಿ.

ಕಲೆಗಳು ಮುಖ್ಯವಾಗಿ ಜಾನಪದ ಕಲೆಗಳ ತವರೂರು 1967 ರಲ್ಲಿ ವಿಶ್ವ ಜಾನಪದ ಸಮ್ಮೇಳನ ತರೀಕೆರೆಯಲ್ಲಿ ನಡೆಸಿ “ಹೊನ್ನ ಬಿತ್ತೇವು ಹೊಲಕ್ಕೆಲ್ಲಾ” ಎಂಬ ಅಕರ ಗ್ರಂಥ ತದಿರುವುದು ವಿಶೇಷ. ಚಲನಚಿತ್ರ ರಂಗಕ್ಕೆ ಜಿಲ್ಲೆ ಕೊಟ್ಟಿರುವ ಕಾಣಿಕೆ ಬಹಳಷ್ಟು.1990ರವರೆಗೆ ಬಹುತೇಕ ಚಲನಚಿತ್ರಗಳ ಚಿತ್ರೀಕರಣ ಜಿಲ್ಲೆಯಲ್ಲಿ ನಡೆದಿವೆ ಅದರಲ್ಲೂ ಡಾ/ರಾಜ್ ಕುಮಾರ್ ಚಿತ್ರಗಳ ಚಿತ್ರೀಕರಣ ದಾಖಲೆ ಮಾಡಿವೆ. ಪತ್ರಿಕಾಕ್ಷೇತ್ರ ಮಾತ್ರ ಮೂರಕ್ಕೆ ಇಳಿದಿಲ್ಲಾ ಆರಕ್ಕೆ ಏರರೀಲ್ಲಾ ಎಂಬ ಸ್ಥಿತಿಗೆ ಮಲೆನಾಡು ಬಯಲುಸೀಮೆ ಎಂಬ ಕಾರಣವಿರಬಹುದು. ಇದರ ಮಧ್ಯೆ ನ್ಯೂಸ್ ಕಿಂಗ್ ಕನ್ನಡ.ಕಾಂ ಎಂಬ ಡಿಜಿಟಲ್ ಮಾಧ್ಯಮ ಆರಂಭಕ್ಕೆ ಹಾರೈಸಿ ಎಂಬುದಷ್ಟೆ ನಮ್ಮ ಕೋರಿಕೆ.

ಎನ್.ರಾಜು, ಪ್ರಧಾನ ಸಂಪಾದಕ

ನ್ಯೂಸ್ ಕಿಂಗ್ ಕನ್ನಡ.ಕಾಂ 

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...