Home namma chikmagalur chikamagalur ಎಂ.ಎಲ್.ಸಿ ಪ್ರಾಣೇಶ್ ಗೆ ಪ್ರಾಣ ಸಂಕಟ.! – ಗಾಯತ್ರಿ ಶಾಂತೇಗೌಡಗೆ ಅಧಿಕಾರ ಗ್ಯಾರಂಟಿನಾ ?
chikamagalurHomeLatest Newsnamma chikmagalur

ಎಂ.ಎಲ್.ಸಿ ಪ್ರಾಣೇಶ್ ಗೆ ಪ್ರಾಣ ಸಂಕಟ.! – ಗಾಯತ್ರಿ ಶಾಂತೇಗೌಡಗೆ ಅಧಿಕಾರ ಗ್ಯಾರಂಟಿನಾ ?

Share
Share

ಚಿಕ್ಕಮಗಳೂರು: ಚಿಕ್ಕ ಮಗಳೂರು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಪ್ರಾಣೇಶ್ ಅಯ್ಕೆಯಾಗಿದ್ದು ಕೇವಲ ಆರು ಮತಗಳ ಅಂತರದಿಂದ ಇದನ್ನು ಪ್ರಶ್ನೆ ಮಾಡಿ ಎದುರಾಳಿ ಪರಾಜಿತ ಅಭ್ಯರ್ಥಿ ಗಾಯತ್ರಿಶಾಂತೇಗೌಡ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದರು ಕಳೆದ ನಾಲ್ಕಾರು ವರ್ಷಗಳಿಂದ ಕೋರ್ಟ್ ಸುತ್ತಿ ಸುಸ್ತಾದವರಿಗೆ ಸದ್ಯ ಅಂತಿಮ ಹಂತಕ್ಕೆ ಬಂದು ನಿಂತಂತೆ ಕಾಣುತ್ತಿದೆ.

ಹೈಕೋರ್ಟ್ ನಲ್ಲಿ ಗುಪ್ತವಾಗಿ ಮತಗಳ ಮರು ಎಣಿಕೆ ಮಾಡಲು ಆದೇಶವಾಗಿದ್ದು ಕಳೆದ ವರ್ಷ ಮತಗಳ ಎಣಿಕೆ ಕಾರ್ಯ ಮುಗಿಸಿ ಕೋರ್ಟ್ ಗೆ ವರದಿ ಕೂಡ ಕೊಡಲಾಗಿತ್ತು. ಸೋತ ಅಭ್ಯರ್ಥಿ ಪರ ಕೆಲವು ಸಲ ಪಟಾಕಿ ಸಿಡಿಸಿ ಜಯಕಾರ ಕೂಡ ಕೂಗಿ ವಿಜಯೋತ್ಸವದ ರೀತಿ ಕುಣಿದು ಕುಪ್ಪಳಿಸಿದ್ದರು.ಆದರೂ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣಿ ನಡೆಯುತಿತ್ತು.

ಪ್ರಾಣೇಶ ಕಡೆ ವಕೀಲರು ಬರೀ ಕೋರ್ಟ್ ನಲ್ಲಿ ದಿನಾಂಕ ತೆಗೆದುಕೊಂಡು ದಿನಗಳನ್ನು ದೂಡುತ್ತಿದ್ದರು ನಿನ್ನೆ ಸುಪ್ರೀಂ ಕೋರ್ಟ್ ನಲ್ಲಿ ಮತ್ತೆ ದಿನಾಂಕ ತೆಗೆದುಕೊಳ್ಳಲು ವಕೀಲರು ಮುಂದಾದರು ಎನ್ನಲಾಗಿದ್ದು ಇದರಿಂದ ನ್ಯಾಯಾಧೀಶರು ಬರೀ ದಿನಾಂಕ ತೆಗೆದುಕೊಂಡರೆ ಹೇಗೆ ವಿಚಾರಣೆಗೆ ಮುಂದಾಗಿ ಎಂದು ಗರಮ್ ಅಗಿ ಗದರಿದ್ದಲ್ಲದೆ ಫೆಬ್ರವರಿ 24 ರಂದು ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದು ಇಲ್ಲವಾದಲ್ಲಿ ಪ್ರಾಣೇಶ್ ಪಡಿಯುತ್ತಿರುವ‌ ಪಡೆದಿರುವ ವೇತನ ಮತ್ತು ಸೌಲಭ್ಯ ನಿಲ್ಲಿಸ ಬೇಕಾಗುತ್ತದೆ ಎಂದಿರುವ ಬಗ್ಗೆ ವರದಿಯಾಗಿದೆ.

ಸುಪ್ರೀಂ ಕೋರ್ಟ್ ಸೂಚನೆ ಬೆನ್ನಲ್ಲಿ ಪ್ರಾಣೇಶ್ ಗೆ ಸಂಕಷ್ಟ ಎನ್ನುವಂತಾದರೆ ಗಾಯತ್ರಿ ಶಾಂತೇಗೌಡರವರು ನಿಟ್ಟುಸಿರು ಬಿಡುವುದರ ಜೊತೆಗೆ ಪಟಾಕಿ ಸ್ಟಾಕ್ ಮಾಡುವುದರಿಂದ ಹಿಡಿದು ಮಂತ್ರಿಗಿರಿಗೆ ಯಾವ ರೀತಿಯ ಪಟ್ಟುಹಿಡಿಯ ಬೇಕು ಎಂಬ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ ಎಂಬ ಗುಸು,ಗುಸು ಸುದ್ದಿಗಳು ಹರಡಿವೆ

MLC Pranesh is in critical condition.

Share

Leave a comment

Leave a Reply

Your email address will not be published. Required fields are marked *

Don't Miss

ನಗರಸಭೆಯಿಂದ ಬೆನಕ ಬಾರ್ ಆಂಡ್ ರೆಸ್ಟೋರೆಂಟ್ ಗೆ ಬೀಗ

ನಗರಸಭೆ ನಿಗದಿಪಡಿಸಿದ ಗಾಡಿಗೆ ಕಸ ನೀಡದೆ ಚರಂಡಿಗೆ ಹಾಕುತ್ತಿದ್ದ ನಗರದ ಬೆನಕ ಬಾರ್ ಆಂಡ್ ರೆಸ್ಟೋರೆಂಟ್ ಮಳಿಗೆ ಬಾಗಿಲಿಗೆ ನಗರಸಭೆ ಅಧಿಕಾರಿ, ಸಿಬ್ಬಂದಿ ಕಸ ತಂದು ಸುರಿದು ದಂಡ ಹಾಕಿದ್ದಾರೆ. ಅಲ್ಲದೆ,...

ಮೂರು ಲಕ್ಷ ರೂ. ಮೌಲ್ಯದ ಗಾಂಜಾ ವಶ

ಚಿಕ್ಕಮಗಳೂರು, ಎನ್ ಡಿಪಿಎಸ್ ಪ್ರಕರಣದಲ್ಲಿ ಆರೋಪಿತನೋರ್ವನನ್ನು ಬಂಧಿಸಿರುವ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಆತನಿಂದ ಮೂರು ಲಕ್ಷ ರೂ. ಮೌಲ್ಯದ 5ಕೆಜಿ 850 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಎನ್ ಡಿಪಿಎಸ್...

Related Articles

ಪರಿಶಿಷ್ಠ ಪಂಗಡ ಒಳ ಮೀಸಲಾತಿ ಆಯೋಗ ರಚನೆ ಆಗ್ರಹ

ಚಿಕ್ಕಮಗಳೂರು: ರಾಜ್ಯದ ಪರಿಶಿಷ್ಠ ಜಾತಿ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸಿದಂತೆ ಪರಿಶಿಷ್ಠ ಪಂಗಡದ ಸಮುದಾಯಕ್ಕೂ ಒಳ ಮೀಸಲಾತಿ ಕಲ್ಪಿಸಲು...

ವಿಮಾ ಕಂಪನಿಗೆ ಪಾಲಿಸಿದಾರರ ಕಂತು ಸ್ವೀಕೃತಿಗೆ ಆದೇಶ

ಚಿಕ್ಕಮಗಳೂರು: ವಿಮಾ ಕಂತು ಪಾವತಿಯನ್ನು ಸ್ವೀಕರಿಸದೆ ಸೇವಾ ನ್ಯೂನತೆ ಎಸಗಿದ ಆರೋಪದಲ್ಲಿ ಇನ್ಶೂರೆನ್ಸ್ ಕಂಪನಿಯ ವಿರುದ್ಧ...

ಸರ್ವಜ್ಞರ ತ್ರಿಪದಿಗಳು ಸಮಾಜದ ಅಂಕುಡೊಂಕು ತಿದ್ದುವ ಚಿಕಿತ್ಸಕ ಶಕ್ತಿಗಳು

ಚಿಕ್ಕಮಗಳೂರು: ಕನ್ನಡದ ಮಹಾನ್ ಸಂತ, ಕವಿ ಮತ್ತು ದಾರ್ಶನಿಕ ಸರ್ವಜ್ಞರ ತ್ರಿಪದಿಗಳು ಕೇವಲ ಸಾಹಿತ್ಯವಲ್ಲ, ಅವು...

ರಸ್ತೆ ಅಪಘಾತದಲ್ಲಿ ಬೈಕ್ ಸಾವಾರನ ಸಾವು

ಎನ್. ಆರ್ ಪುರ: ಬಾಳೆಹೊನ್ನೂರು ಸಮೀಪದ ಮಸೀದಿಕೆರೆಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ...