Home Crime News ಎಂತೆಂಥವರೋ ಜೈಲಿಗೆ ಹೋಗಿದ್ದಾರೆ : ನಿನ್ನ ತಲೆ ಕಡಿದು ನಾನೂ ಹೋಗ್ತೀನಿ
Crime News

ಎಂತೆಂಥವರೋ ಜೈಲಿಗೆ ಹೋಗಿದ್ದಾರೆ : ನಿನ್ನ ತಲೆ ಕಡಿದು ನಾನೂ ಹೋಗ್ತೀನಿ

Share
Share

ಚಿಕ್ಕಮಗಳೂರು : ಎಂತೆಂಥವರೋ ಜೈಲಿಗೆ ಹೋಗಿದ್ದಾರೆ ನಾನು ಹೋಗೋಕೆ ರೆಡಿ, ನನ್ನ ಮಕ್ಕಳಿಗೆ ಮದುವೆನೂ ಮಾಡಿದ್ದೀನಿ ಬೇರೆನೂ ಕೆಲಸ ಇಲ್ಲ ಜೈಲಲ್ಲಿ ಹೋಗಿ ಇರ್ತೀನಿ

ಹೀಗೆ ಪಂಚಾಯ್ತಿ ರಸ್ತೆಗೆ ಟ್ರಂಚ್ ಹೊಡೆದು ಪಕ್ಕದ ತೋಟದ ಕಡೆಯಿಂದ ಹೋಗುವಂತೆ ಜಾಗ ಬಿಡದೆ ರೋಶಾವೇಷ ತೋರಿಸುತ್ತಿರುವವನು ಸತೀಶ , ಮೂಡಿಗೆರೆ ತಾಲೂಕಿನ ಸತೀಶ

ಪಂಚಾಯಿತಿ ರಸ್ತೆಗೆ ಟ್ರಂಚ್ ತೆಗೆದು ಹಾರಾಡುತ್ತಿರುವ ಹಳ್ಳಿಗನ ರೌಡಿಸಂ ಇದು, ನಾನು ಟ್ರಂಚ್ ತೆಗ್ದೆ ತಗಿತೀನಿ, ಅದೇಗ್ ಓಡಾಡ್ತೀಯೋ ಓಡಾಡು ನೋಡೋಣ, ಅದ್ಯಾರನ್ನ ಕರ್ಕೊಂಡ್ ಬರ್ತಿರೋ ಬಾ,, ನಾನು ನೋಡ್ತೀನಿ. ನಿನ್ ಹೆಣ ಕಡ್ದೆ ಹಾಕ್ತೀನಿ ನೋಡು ಮತ್ತೆ ಇದು ಸತೀಶನ ಆವಾಜ್ ದಾಟಿ,,,

ಮೂಡಿಗೆರೆ ತಾಲೂಕಿನ ಕೂವೆ ಗ್ರಾಮದಲ್ಲಿ ಈ ರಸ್ತೆ ನನಗೆ ಸೇರಿದ್ದು, ನಾನು ಏನ್ ಬೇಕಾದ್ರು ಮಾಡಿಕೊಳ್ತೀನಿ, ನನ್ ಗಂಡು ಮಕ್ಳುದು ಮದ್ವೆ ಆಗಿದೆ ನಿನ್ನ ಮಕ್ಕಳು ಸಣ್ಣವು ಕಡ್ದು ಜೈಲಿಗೆ ಹೋಗಿ ಕೂರ್ತೀನಿ ಎಂತೆಂಥವರೋ ಜೈಲಿಗೆ ಹೋಗಿದ್ದಾರೆ ಎಂದು ಪುಂಕಾನುಪುಂಕವಾಗಿ ಪಂಚಾಯಿತಿ ರಸ್ತೆಗೆ ಟ್ರಂಚ್ ತೆಗೆದು ಸತೀಶ್ ಎಗರಾಡುತ್ತಿದ್ದಾನೆ, ಇವನು ಇಷ್ಟೆಲ್ಲ ಆಕ್ರೋಶ ವ್ಯಕ್ತಪಡಿಸಿದ್ದು ಅದೇ ಗ್ರಾಮದ ಪ್ರವೀಣ್ ಎಂಬುವರಿಗೆ ಓಡಾಡಲು ಜಾಗವಿಲ್ಲದೆ ತೋಟದ ಮಾರ್ಗದಲ್ಲಿ ಓಡಾಟ ಮಾಡುವಂತೆ ಮಾಡಿದ್ದಾನೆ. ಈ ಘಟನೆ ಕುರಿತು ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ಕೊಪ್ಪ ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ. ಜಿ.ಎಸ್‌. ಬಾಲಕೃಷ್ಣ ಕರ್ತವ್ಯದಿಂದ ವಜಾ

ಚಿಕ್ಕಮಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದಂತ ಮಗುವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಂತ ಚಿಕ್ಕಮಗಳೂರು ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ. ಬಾಲಕೃಷ್ಣ ಅವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸುವಂತ ನಿರ್ಧಾರವನ್ನು...

ರೈತನಿಗೆ ಬೈಕ್ ಡಿಕ್ಕಿ ಸ್ಥಳದಲ್ಲೇ ಸಾವು – ಹೊತ್ತಿ ಉರಿದ ಬೈಕ್!

ಚಿಕ್ಕಮಗಳೂರು: ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿ ರೈತರೊಬ್ಬರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರೈತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು-ಕಡೂರು ರಸ್ತೆಯ ಎಐಟಿ ಸರ್ಕಲ್ ಬಳಿ ನಡೆದಿದೆ....

Related Articles

ಈಜಲು ಹೋಗಿದ್ದ ಯುವಕನ ಶವ ಪತ್ತೆ

ತರೀಕೆರೆ: ಅಮೃತಾಪುರ ಗ್ರಾಮದ ಪ್ರಜ್ವಲ್ (20) ಮೇ 8ರಂದು ಬಾವಿಕೆರೆ ಭದ್ರಾ ಚಾನಲ್‌ಗೆ ಸ್ನೇಹಿತರೊಂದಿಗೆ ಈಜಲು...

ಟ್ರ್ಯಾಕ್ಟರ್-ಓಮ್ಮಿ ನಡುವೆ ರ‌ಸ್ತೆ ಅಪಘಾತ – ಇಬ್ಬರ ಸಾವು

ಚಿಕ್ಕಮಗಳೂರು: ಟ್ರ್ಯಾಕ್ಟರ್ ಹಾಗೂ ಓಮ್ಮಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಒಮ್ಮಿಯಲ್ಲಿದ್ದ ಇಬ್ಬರು ಸಾವನ್ನಪ್ಪಿ ಮತ್ತಿಬ್ಬರಿಗೆ...

37 ಲಕ್ಷ ಕಳೆದುಕೊಂಡ ನಿವೃತ್ತ ಸರ್ಕಾರಿ ನೌಕರ

ಚಿಕ್ಕಮಗಳೂರು : ನಿವೃತ್ತ ಸರ್ಕಾರಿ ನೌಕರರೊಬ್ಬರು ಡಿಜಿಟಲ್ ಅರಸ್ ಗೆ ಒಳಗಾಗಿ ೩೭ ಲಕ್ಷ ಹಣ...

ರೈತನಿಗೆ ಬೈಕ್ ಡಿಕ್ಕಿ ಸ್ಥಳದಲ್ಲೇ ಸಾವು – ಹೊತ್ತಿ ಉರಿದ ಬೈಕ್!

ಚಿಕ್ಕಮಗಳೂರು: ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿ ರೈತರೊಬ್ಬರಿಗೆ ಬೈಕ್ ಡಿಕ್ಕಿ ಹೊಡೆದ...