Home Latest News ನೀರಿಗಾಗಿ ರೈತರು ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಿ
Latest NewschikamagalurCrime NewsHomeKadurnamma chikmagalur

ನೀರಿಗಾಗಿ ರೈತರು ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಿ

Share
Share

ಕಡೂರು: ಜಿಲ್ಲೆಯ ಪ್ರಮುಖ ಕೆರೆಯಾದ ಅಯ್ಯನಕೆರೆ ತುಂಬಿ ಹರಿಯುವ ನೀರನ್ನು ಕೆರೆಗಳಿಗೆ ಹರಿಸುವುದರಿಂದ ಅಂತರ್ ಜಲ ಹೆಚ್ಚಿಸಿ ಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದು ರೈತರು ಹೇಳುತ್ತಾರೆ.

ಭದ್ರ ಉಪ ಕಣಿವೆ ಯೋಜನೆಯ ನೀರನ್ನು ಸಹ ಅಯ್ಯನಕೆರೆಗೆ ಹರಿಸುವುದರಿಂದ ಸದಾಕಾಲವೂ ನೀರು ಹರಿಯುತ್ತದೆ ಎಂದು ಅಂದಾಜಿಸಿದ್ದು ಇದರಿಂದಾಗಿ ಬೆಲ್ಟಿಕೆರೆ ಕೆರೆ ಮತ್ತು ನಾಗೇನಹಳ್ಳಿ ಕೆರೆಗೆ ಹರಿಸಿದರೆ ನಾಗೇನಹಳ್ಳಿ,ಹುಲಿಕೆರೆ,ಪಿಳ್ಳೆನಹಳ್ಳಿ,ಕಂಚಗಾರನ ಹಳ್ಳಿ, ತಾಂಡ್ಯ ಮತ್ತು ಆಗ್ರಹಾರ ಭಾಗದಲ್ಲಿ ಅಂತರ್ ಜಲ ಹೆಚ್ಚಳವಾಗುತ್ತದೆ .ಇದರಿಂದಾಗಿ ಯಾವ ತೊಂದರೆ ಆಗುವುದಿಲ್ಲ ಯಾರು ಕೂಡ ಆತಂಕ ಪಡವುದು ಬೇಡ ಎಂದು ರೈತರು ಹೇಳುತ್ತಾರೆ.

ವೇದ ನದಿ ಅಕ್ಕ ಪಕ್ಕ ಇರುವ ರೈತರು ಕಡೂರು, ಪಂಚನಹಳ್ಳಿಯ ಭಾಗದ ರೈತರು ಹರಿಯುವ ನೀರನ್ನು ತಡೆಯಬಾರದು ವೇದನದಿ ತುಂಬಿ ಹರಿಯುವುದು ಬಲು ಕಷ್ಟ ಇಲ್ಲಿನ ಜನ ಮತ್ತು ಜಾನುವಾರುಗಳಿಗೆ ತೊಂದರೆ ಯಲ್ಲಿ ಇದ್ದು ಕುಡಿಯುವ ನೀರಿಗೂ ಕಷ್ಟ ಎಂದು ಆತಂಕ ಗೊಂಡು ಸಭೆ ಸೇರಿ ಪಂಚನಹಳ್ಳಿಯಿಂದ ಆಗ್ರಹಾರದವರೆಗೆ ಪಾದ ಯಾತ್ರೆ ಮಾಡಲು ನಿರ್ಧಾರ ಮಾಡಿದ್ದು ಯಾವುದೇ ಹೊಸ ಯೋಜನೆಗಳಿಗೆ ಅವಕಾಶ ಕೊಡಬಾರದು ಎನ್ನುತ್ತಿದ್ದಾರೆ.

ಒಟ್ಟಾರೆ ರೈತರಿಗೆ ನೀರಿನ ಚಿಂತೆ ಎರಡು ಕಡೆಯವರ ವಾದ ಅವರವರ ಅನುಕೂಲಕ್ಕೆ ಆದರೆ ಭದ್ರ ಉಪಕಣಿವೆ ಯೋಜನೆಯ ನೀರು ಬರುವುದರಿಂದ ಆತಂಕ ಪಡದೆ ಗೊಂದಲಕ್ಕೆ ಒಳಗಾಗದೆ ಸಾಧಕ_ ಬಾಧಕಗಳ ಬಗ್ಗೆ ಚರ್ಚೆ ನಡೆಸುವುದು ಒಳ್ಳೆಯದು.

ಉಭಯ ಭಾಗದ ರೈತರು ಸಮಸ್ಯೆಗೆ ಅವಕಾಶ ಕೊಡದೆ ಬೀದಿಗಿಳಿಯುವ ಮುನ್ನ ಚಿಕ್ಕಮಗಳೂರು ಶಾಸಕರಾದ ಹೆಚ್.ಡಿ.ತಮ್ಮಯ್ಯ ಮತ್ತು ಕಡೂರು ಶಾಸಕರಾದ ಆನಂದ್ ಜವಬ್ದಾರಿ ತೆಗೆದು ಕೊಂಡು ರೈತರ ಸಭೆ ಮತ್ತು ಸಂಬಂಧ ಪಟ್ಟ ನೀರಾವರಿ ಇಲಾಖೆಯವರ ಸಭೆ ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಒಳ್ಳೆಯದು.

Let farmers debate the pros and cons of water

Share

Leave a comment

Leave a Reply

Your email address will not be published. Required fields are marked *

Don't Miss

ಗಿರಿ ಪ್ರದೇಶದ ಪ್ರವಾಸೋದ್ಯಮ ಸ್ಥಳಗಳಿಗೆ ತಾತ್ಕಾಲಿಕ ನಿರ್ಬಂಧ

ಚಿಕ್ಕಮಗಳೂರು: : ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರು ಮತ್ತು ಸ್ಥಳೀಯ ಜನತೆಯ ಹಿತದೃಷ್ಟಿಯಿಂದ ಗಿರಿ ಪ್ರದೇಶದ ಕೆಲವು ಪ್ರವಾಸೋದ್ಯಮ ಸ್ಥಳಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ...

ದೇವನಹಳ್ಳಿ 1,777 ಎಕರೆ ಭೂ ಸ್ವಾಧೀನ ನೋಟಿಫಿಕೇಶನ್ ರದ್ದು

ಬೆಂಗಳೂರು: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಸುತ್ತಮುತ್ತಲಿನ ಒಟ್ಟ 13 ಹಳ್ಳಿಗಳ 1,777 ಎಕರೆ ಭೂ ಸ್ವಾಧೀನ ನಿರ್ಧಾರವನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿದೆ. ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ  ನೇತೃತ್ವದಲ್ಲಿ ನಡೆದ ರೈತರು,...

Related Articles

ರೈತ ಸಂಘಟನೆ ದಾರಿ ಬಿಟ್ಟಿತು ? ಎಲ್ಲಿಗೆ ಪಯಣ ಯಾವುದೋ ದಾರಿ !

ಮಾಸದಿರಲಿ ಬದಲಾಯಿಸದಿರಲಿ ರೈತರ ಹೆಗಲ ಮೇಲೇರಿರುವ ಶಾಲಿನ ಹಸಿರು ಬಣ್ಣ. ದೇಶಕ್ಕೆ ಅನ್ನ ಕೊಡುವ ರೈತ...

ದೇಶಭಕ್ತಿಯ ಪ್ರತೀಕ ಮಹಾರಾಣಾ ಪ್ರತಾಪ್‌ಸಿಂಗ್

ಚಿಕ್ಕಮಗಳೂರು:  ಪರಾಕ್ರಮ-ಆದರ್ಶ ದೇಶಭಕ್ತಿಯ ಪ್ರತೀಕ ಮಹಾರಾಣಾ ಪ್ರತಾಪಸಿಂಗ್ ಎಂದು ಕರ್ನಾಟಕ ರಜಪೂತ ಮಹಾಸಭಾ ನಿರ್ದೇಶಕ ಬೆಂಗಳೂರಿನ...

ದತ್ತು ಸಂಸ್ಥೆಯ ಸಿಬ್ಬಂದಿ ಆಯಾ ಅಮಾನತು

ಚಿಕ್ಕಮಗಳೂರು: ನಗರದ ದತ್ತು ಸಂಸ್ಥೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಒಂದು ವರ್ಷ ಮೂರು ತಿಂಗಳ ಹೆಣ್ಣುಮಗು ಸುಟ್ಟ...

ವೈದ್ಯ ಇಲ್ಲದ ಕಳಸ ತಾಲೂಕು ಆಸ್ಪತ್ರೆ

ಚಿಕ್ಕಮಗಳೂರು: ಕಳಸ ತಾಲೂಕು ಆಸ್ಪತ್ರೆಯಲ್ಲಿ ಓರ್ವ ವೈದ್ಯರೂ ಇಲ್ಲದೆ ಜನರು ಚಿಕಿತ್ಸೆಗೆ ಪರದಾಡುವಂತಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರು...